ಆ್ಯಪ್ನಗರ

ಮಗನ ಸಾವಿನಲ್ಲೂ‌ ಅಂಗಾಂಗ ದಾನ ಮಾಡಿ ಸಾರ್ಥಕತೆ ಮರೆದ ಪೋಷಕರು..

ಹೇಮಂತನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುವ ವೇಳೆ ಆಸ್ಪತ್ರೆಯ ಸಿಬ್ಬಂದಿ ಸೇರಿ ವೈದ್ಯರು ಸೆಲ್ಯೂಟ್ ನೀಡಿ ಗೌರವದೊಂದಿಗೆ ಕಳಿಸಿ ಕೊಟ್ಟರು. ಪೋಷಕರಲ್ಲಿ ಮಗನ ಸಾವು ನೋವಿನ ಕಣ್ಣೀರಿನಲ್ಲೂ ಕೂಡ ಸಾರ್ಥಕತೆ ಎದ್ದು ಕಾಣುತ್ತಿತ್ತು.

Lipi 12 Nov 2021, 12:57 pm

ಹೈಲೈಟ್ಸ್‌:

  • ಸಾವಿನ‌ ಅಂಚಿನಲ್ಲಿದ್ದ ನಾಲ್ವರ ಜೀವಕ್ಕೆ ಬೆಳಕು‌ ನೀಡಿದ ಯುವಕ
  • ಹೇಮಂತ್ ದೇಹದಿಂದ ಯಕೃತ್, 2 ಕಿಡ್ನಿ, ಹೃದಯ ಕವಾಟ ಪಡೆದ ವೈದ್ಯರು
  • ಇಬ್ಬರಿಗೆ ಯಕೃತ್ ಹಾಗೂ ಕಿಡ್ನಿ ಅಳವಡಿಕೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web mandya
ಮಗನ ಸಾವಿನಲ್ಲೂ‌ ಅಂಗಾಂಗ ದಾನ ಮಾಡಿ ಸಾರ್ಥಕತೆ ಮರೆದ ಪೋಷಕರು..
ಮಂಡ್ಯ: ಆತ ಬಾಳಿ ಬದುಕಬೇಕಿದ್ದ ಯುವಕ.. ಆತನಿಗಿನ್ನು ಕೇವಲ 25 ವರ್ಷ. ಆದ್ರೆ ವಿಧಿ‌ ಆತನನ್ನ ತನ್ನ‌ ಬಳಿಗೆ ಈ ವಯಸ್ಸಿಗೇ ಕರೆದುಕೊಂಡು ಬಿಡ್ತು. ಕಣ್ಣೆದುರೇ ಮಗನ ಸಾವು ಕಂಡು ಪೋಷಕರು ಕಂಗಾಲಾದ್ರು. ಮಗನ ಸಾವಿನಲ್ಲೂ ಅವರ ಪೋಷಕರ ಮಗನ ದೇಹದ ಅಂಗಾಗಗಳನ್ನು ದಾನ ಮಾಡುವ ನಿರ್ಧಾರ ಕೈಗೊಂಡು ಇದೀಗ ನಾಲ್ವರ ಬಾಳಿಗೆ ಬೆಳಕು ತಂದಿದೆ.

ಮಂಡ್ಯ ತಾಲೂಕಿನ ತೂಬಿನ ಕೆರೆಯಲ್ಲಿ ನವೆಂಬರ್ 4 ರಂದು ಹೇಮಂತ್ ಎನ್ನುವ 25 ವರ್ಷದ ಯುವಕ ತೆಂಗಿನ ಮರದಿಂದ ಕಾಯಿ ಕೀಳುವಾಗ ಆಕಸ್ಮಿಕವಾಗಿ ಮರದ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು‌ ಪೋಷಕರು ಮೈಸೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ರು. ಆದ್ರೆ ಆತ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಕೋಮಾಗೆ ತಲುಪಿದ್ದ. ಎಷ್ಟೇ ಚಿಕಿತ್ಸೆ ನೀಡಿದ್ರೂ ಆತ ಚೇತರಿಸಿಕೊಳ್ಳಲಿಲ್ಲ. ಅಲ್ಲದೆ ಆತನ ಮಿದುಳು ಕೂಡ ನಿಷ್ಕ್ರಿಯಗೊಂಡಿತ್ತು. ಈ ವೇಳೆ ಯುವಕನ ಪೋಷಕರು ಈ ವಿಷಯ ತಿಳಿದು ಮಗ ಜೀವಂತವಾಗಿ ಉಳಿಯೋದಿಲ್ಲ ಎಂದು ಮನಗಂಡು ತಮ್ಮ ಮಗನ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ರು.

ಬಸವರಾಜ ಬೊಮ್ಮಾಯಿ ಮಹತ್ವದ ಘೋಷಣೆ! ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿದ ಸಿಎಂ
ಈ ಮೂಲಕ ಸಾವಿನ‌ ಅಂಚಿನಲ್ಲಿದ್ದ ನಾಲ್ವರ ಜೀವಕ್ಕೆ ಬೆಳಕು‌ ನೀಡುವ ಮೂಲಕ, ಮಗನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದರು. ಇನ್ನು ಮೃತ ಹೇಮಂತ್‌ನ ಪೋಷಕರು‌ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುತ್ತಿದ್ದಂತೆಯೇ ಆಸ್ಪತ್ರೆಯ ವೈದ್ಯರು ಮೃತ ಹೇಮಂತ್ ದೇಹದಿಂದ ಯಕೃತ್, 2 ಕಿಡ್ನಿ, ಹೃದಯ ಕವಾಟಗಳನ್ನು ಶಸ್ತ್ರಚಿಕಿತ್ಸೆ ನಡೆಸಿ ಪಡೆದುಕೊಂಡ್ರು. ಬಳಿಕ ತಮ್ಮ ಆಸ್ಪತ್ರೆಯಲ್ಲಿದ್ದ ಇಬ್ಬರಿಗೆ ಯಕೃತ್ ಹಾಗೂ ಕಿಡ್ನಿಯನ್ನುಅಳವಡಿಸಿ ಅವರಿಬ್ಬರಿಗೆ ಜೀವ ದಾನ ನೀಡಿದರು. ಇನ್ನು ಹೃದಯ ಮತ್ತು ಹೃದಯದ ಕವಾಟಗಳನ್ನು ಬೆಂಗಳೂರಿನ‌ ನಾರಾಯಣ ಆಸ್ಪತ್ರೆಯಲ್ಲಿದ್ದ ಇಬ್ಬರು ರೋಗಿಗಳ ಜೀವದಾನಕ್ಕಾಗಿ ಆಂಬ್ಯುಲೆನ್ಸ್ ಮೂಲಕ ಕಳಿಸಿ ಕೊಟ್ರು. ಈ ಮೂಲಕ ಮೃತ ಹೇಮಂತ್ ಸಾವಿನಲ್ಲೂ ನಾಲ್ವರ ಪಾಲಿಗೆ ಬೆಳಕು ನೀಡಿ ಹೋಗಿದ್ದ.

'ಸಂಚಾರಿ' ವಿಜಯ್ ಅಂಗಾಂಗ ದಾನಕ್ಕೆ ಕುಟುಂಬ ನಿರ್ಧಾರ! ಸಹೋದರ ಸಿದ್ದೇಶ್‌ ಮಾಹಿತಿ

ಇನ್ನು ಹೇಮಂತನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುವ ವೇಳೆ ಆಸ್ಪತ್ರೆಯ ಸಿಬ್ಬಂದಿ ಸೇರಿ ವೈದ್ಯರು ಸೆಲ್ಯೂಟ್ ನೀಡಿ ಗೌರವದೊಂದಿಗೆ ಕಳಿಸಿ ಕೊಟ್ಟರು. ಪೋಷಕರಲ್ಲಿ ಮಗನ ಸಾವು ನೋವಿನ ಕಣ್ಣೀರಿನಲ್ಲೂ ಕೂಡ ಸಾರ್ಥಕತೆ ಎದ್ದು ಕಾಣುತ್ತಿತ್ತು. ಒಟ್ಟಾರೆ ಮಂಡ್ಯದ ಈ ಯುವಕ ತನ್ನ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದರೂ ಕೂಡ ಈ ಯುವಕನ ಪೋಷಕರು ಮಗನ ಸಾವಿನ ನೋವಿನಲ್ಲೂ ಕೈಗೊಂಡ ಮಗನ ಅಂಗಾಂಗ ದಾನದ ನಿರ್ಧಾರ, ನಾಲ್ವರ ಬಾಳಿಗೆ ಬೆಳಕು ನೀಡಿದ್ದು ನಿಜಕ್ಕೂ ಶ್ಲಾಘನೀಯ ನಿರ್ಧಾರವೇ ಸರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ