ಆ್ಯಪ್ನಗರ

ಮಕ್ಕಳೊಂದಿಗೆ ಥ್ರೋಬಾಲ್‌ ಆಡಿ ಸಂಭ್ರಮಿಸಿದ ಎಸಿ

ವಿಕ ಸುದ್ದಿಲೋಕ ಕೆಆರ್‌ಪೇಟೆ ಎಷ್ಟೆ ದೊಡ್ಡ ಅಧಿಕಾರಿಯಾಗಿರಲಿ ಶಾಲೆಯಲ್ಲಿ ಮಕ್ಕಳನ್ನು ನೋಡಿದರೆ ಅವರೂ ಬಾಲ್ಯದ ದಿನಗಳಿಗೆ ಜಾರುತ್ತಾರೆ...

Vijaya Karnataka 28 Jul 2019, 5:00 am
ಕೆ.ಆರ್‌.ಪೇಟೆ: ಎಷ್ಟೆ ದೊಡ್ಡ ಅಧಿಕಾರಿಯಾಗಿರಲಿ ಶಾಲೆಯಲ್ಲಿ ಮಕ್ಕಳನ್ನು ನೋಡಿದರೆ ಅವರೂ ಬಾಲ್ಯದ ದಿನಗಳಿಗೆ ಜಾರುತ್ತಾರೆ... ಇದಕ್ಕೆ ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ಕೂಡ ಹೊರತಾಗಿರಲಿಲ್ಲ. ತಾಲೂಕಿನ ಅಗ್ರಹಾರಬಾಚಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಆಟವಾಡಿದರು.
Vijaya Karnataka Web pandavapura ac ply with government school childrens
ಮಕ್ಕಳೊಂದಿಗೆ ಥ್ರೋಬಾಲ್‌ ಆಡಿ ಸಂಭ್ರಮಿಸಿದ ಎಸಿ


ಅಗ್ರಹಾರಬಾಚಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ರ ಅವಿಶ್ವಾಸ ಗೊತ್ತುವಳಿ ಪ್ರಕ್ರಿಯೆ ಪಾಲ್ಗೊಳ್ಳಲು ಆಗಮಿಸಿದ್ದ ಶೈಲಜಾ, ಅವಿಶ್ವಾಸ ಪ್ರಕ್ರಿಯೆ ಆರಂಭಕ್ಕೆ ಸಮಯವಿದ್ದದ್ದರಿಂದ ಸಮೀಪದಲ್ಲಿಯೇ ಇದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಮಕ್ಕಳಿಗೆ ಶಾಲೆಯಿಂದ ದೊರಕುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಮಕ್ಕಳ ಹಾಜರಾತಿಯನ್ನು ಗಮನಿಸುವಂತೆ ಸೂಚಿಸಿದ ಉಪ ವಿಭಾಗಾಧಿಕಾರಿಗಳು ಮುಖ್ಯ ಶಿಕ್ಷ ಕರಿಗೆ ಶಿಕ್ಷ ಕರು ಮಕ್ಕಳಿಗೆ ಪಾಠದಷ್ಟೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟುಕೆಗಳಿಗೂ ಅವಕಾಶ ಮಾಡಿಕೊಡುವಂತೆ ತಿಳಿಸಿದರು.

ಈ ವೇಳೆ ಮಕ್ಕಳು ಥ್ರೋಬಾಲ್‌ ಆಟವಾಡುತ್ತಿರುವುದನ್ನು ಗಮನಿಸಿ ಅವರೂ ಕೂಡ ಆಟವಾಡಿ ಗಮನ ಸೆಳೆದರು. ಸಾಕಷ್ಟು ಹೊತ್ತು ಮಕ್ಕಳೊಂದಿಗೆ ಕಾಲ ಕಳೆದು ಸೆಲ್ಫಿ ತೆಗೆದುಕೊಂಡರು.

''ನಾನೂ ಸರಕಾರಿ ಶಾಲೆಯ ವಿದ್ಯಾರ್ಥಿ. ವಿದ್ಯಾರ್ಥಿ ಜೀವನದಿಂದಲೇ ಏನನ್ನಾದರೂ ಸಾಧಿಸಬೇಕು. ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹುಟ್ಟಿದ ಮಣ್ಣಿನ ಋುಣವನ್ನು ತೀರಿಸುವ ನಿಟ್ಟಿನಲ್ಲಿ ಅಧಿಕಾರಿಯಾಗಬೇಕು ಎಂಬ ಮಹದಾಸೆಯಿಂದ ಕೆಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಹಸೀಲ್ದಾರ್‌ ಆಗಿ ಇದೀಗ ಉಪವಿಭಾಗಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ'' ಎಂದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸಾಧಕರು ಹೆಚ್ಚಾಗಿದ್ದಾರೆ. ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಸಾಧಿಸುವ ಛಲ, ಶಿಸ್ತು, ಸಂಯಮ ಹಾಗೂ ಏಕಾಗ್ರತೆ ಎದ್ದರೆ ಏನನ್ನಾದರೂ ಸಾಧಿಸಬಹುದು. ಜೀವನದಲ್ಲಿ ಗುರಿ ಇದ್ದರೆ ಸಾಧನೆ ಮಾಡಬಹುದು ಎಂಬುದಕ್ಕೆ ನಾನೇ ಸಾಕ್ಷಿ. ನೀವು ಕೂಡ ಈ ನಿಟ್ಟಿನಲ್ಲಿ ಅಭ್ಯಾಸ ಮಾಡಿ'' ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ