ಆ್ಯಪ್ನಗರ

ತಾಪಂ ಉಪಾಧ್ಯಕ್ಷೆ ಸೇರಿ ಮಹಿಳೆಯೊಂದಿಗೆ ಕರ್ತವ್ಯನಿರತ ವೈದ್ಯರ ಅನುಚಿತ ವರ್ತನೆ

ಕ್ರಮಕ್ಕೆ ಒತ್ತಾಯಿಸಿ ಆಸ್ಪತ್ರೆ ಎದುರು ಪ್ರತಿಭಟನೆ ವಿಕ ಸುದ್ದಿಲೋಕ ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋದ ಮಹಿಳೆಯೊಂದಿಗೆ ಅಲ್ಲಿನ ವೈದ್ಯರು ...

Vijaya Karnataka 16 Jun 2019, 5:00 am
ಪಾಂಡವಪುರ: ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋದ ಮಹಿಳೆಯೊಂದಿಗೆ ಅಲ್ಲಿನ ವೈದ್ಯರು ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿ ತಾಪಂ ಉಪಾಧ್ಯಕ್ಷೆ ಲಕ್ಷ ್ಮಮ್ಮ ಹಾಗೂ ನೊಂದ ಮಹಿಳೆ ಸೇರಿದಂತೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಿರು.
Vijaya Karnataka Web pandavapura doctor misbehavior with taluk panchayath vice president
ತಾಪಂ ಉಪಾಧ್ಯಕ್ಷೆ ಸೇರಿ ಮಹಿಳೆಯೊಂದಿಗೆ ಕರ್ತವ್ಯನಿರತ ವೈದ್ಯರ ಅನುಚಿತ ವರ್ತನೆ


ಚಿಕಿತ್ಸೆ ಪಡೆಯಲೆಂದು ಸಾರ್ವಜನಿಕ ಆಸ್ಪತ್ರೆಗೆ ಪವಿತ್ರ ಎಂಬುವವರು ತೆರಳಿದ್ದರು. ಈ ವೇಳೆ ಅವರೊಂದಿಗೆ ತಡವಾಗಿ ಬಂದರು ಎಂಬ ಕಾರಣಕ್ಕೆ ಡಾ.ಆನಂದ್‌ಕುಮಾರ್‌ ಚಿಕಿತ್ಸೆ ನೀಡೋಲ್ಲ ಎಂದು ಹೇಳಿ ಆಸ್ಪತ್ರೆ ಚೀಟಿಯನ್ನು ಬಿಸಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಏಕವಚನದಲ್ಲಿ ನಿಂದಿಸಿದ್ದಾರೆ. ಇದನ್ನು ಕೇಳಿದ ಸಾರ್ವಜನಿಕರೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅಲ್ಲಿಯೇ ಇದ್ದ ತಾಪಂ ಉಪಾಧ್ಯಕ್ಷೆ ಲಕ್ಷ ್ಮಮ್ಮ ಸ್ಥಳಕ್ಕಾಗಿಮಿಸಿ ವೈದ್ಯರನ್ನು ಪ್ರಶ್ನಿಸಿದ್ದಾರೆ. ಮಹಿಳೆಯರು ಎಂಬ ಕನಿಷ್ಠ ಗೌರವ ತೋರಿಸಿದ ತಾಪಂ ಉಪಾಧ್ಯಕ್ಷೆ ಲಕ್ಷ ್ಮಮ್ಮ ಅವರಿಗೂ ಏಕವಚನದಲ್ಲಿಯೇ ಮಾತನಾಡಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಅವರ ವಿರುದ್ಧ ತಿರುಗಿ ಬೀಳುತ್ತಿದ್ದಂತೆಯೇ ಯಾರಿಗೂ ಚಿಕಿತ್ಸೆ ನೀಡೋದಿಲ್ಲ ಎಂದು ಹೇಳಿ ಕೊಠಡಿ ಬಾಗಿಲು ಹಾಕಿಕೊಂಡು ಅಲ್ಲಿಂದ ಹೊರ ಹೋಗಿದ್ದಾರೆ. ಬಳಿಕ ಕೆಲಸಕ್ಕೂ ಅರ್ಧ ದಿನ ರಜೆಹಾಕಿ ಆಸ್ಪತ್ರೆಯಿಂದ ತೆರಳಿದ್ದಾರೆ. ವೈದ್ಯರ ವರ್ತನೆಯನ್ನು ಖಂಡಿಸಿ ತಾಪಂ ಉಪಾಧ್ಯಕ್ಷೆ ಲಕ್ಷ ್ಮಮ್ಮ ಹಾಗೂ ನೊಂದ ಮಹಿಳೆ ಸಾರ್ವಜನಿಗರು ಆಸ್ಪತ್ರೆ ಆಡಳಿತ ಹಾಗೂ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅನುಚಿತವಾಗಿ ವರ್ತಿಸಿದ ವೈದ್ಯರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟುಹಿಡಿದರು.

ಏಕವಚನದಲ್ಲಿ ಮಾತನಾಡಿದ ಪೊಲೀಸ್‌ ಪೇದೆ: ಆಸ್ಪತ್ರೆಯಲ್ಲಿ ಗಲಾಟೆ ನಡೆಯುತ್ತಿದೆ ಎಂಬ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸ್‌ ಪೇದೆ ಘಟನೆ ವಿಚಾರವನ್ನು ಕೇಳದ ತಾಪಂ ಉಪಾಧ್ಯಕ್ಷೆ ಲಕ್ಷ ್ಮಮ್ಮ ಹಾಗೂ ನೊಂದ ಮಹಿಳೆಗೆ ದರ್ಪದಿಂದ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಎಂಬುದನ್ನು ಪರಿಗಣಿಸದೇ ಏಕವಚನದಲ್ಲಿ ಮಾತನಾಡಿ ಅವಮಾನಿಸಿದರು. ಈ ವೇಳೆ ತಾಪಂ ಉಪಾಧ್ಯಕ್ಷೆ ಲಕ್ಷ ್ಮಮ್ಮ ಹಾಗೂ ಸಾರ್ವಜನಿಕರು ಪೇದೆ ಪ್ರವೀಣ್‌ ಅವರನ್ನು ತರಾಟೆಗೆ ತೆಗೆದುಕೊಂಡು. ಸಾರ್ವಜನಿಕರೆಲ್ಲರೂ ಸೇರಿ ವಿಷಯ ತಿಳಿದು ಸ್ಥಳಕ್ಕಾಗಿಮಿಸಿದ ಆಸ್ಪತ್ರೆ ಮುಖ್ಯಾಧಿಕಾರಿ ರಾಜೇಶ್ವರಿ ತಾಪಂ ಉಪಾಧ್ಯಕ್ಷೆ ಲಕ್ಷ ್ಮಮ್ಮ ಹಾಗೂ ನೊಂದ ಮಹಿಳೆಯನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಇದಕ್ಕೆ ಅವರು ಒಪ್ಪಲ್ಲಿಲ್ಲ, ಸಾರ್ವಜನಿಕರು, ಬಡವರು ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಬಡವರು ಎಂಬ ಮಾತ್ರಕ್ಕೆ ವೈದ್ಯರು ಅವರೊಂದಿಗೆ ಅಸಭ್ಯವಾಗಿ ವರ್ತಿಸುವುದು ಸರಿಯಲ್ಲ. ವೈದ್ಯ ಆನಂದ್‌ಕುಮಾರ್‌ ಸ್ಥಳಕ್ಕೆ ಆಗಮಿಸುವವರಿಗೆ ಆಸ್ಪತ್ರೆಯಿಂದ ಹೋಗುವುದಿಲ್ಲ ಎಂದು ಪಟ್ಟಹಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಮಂಚೇಗೌಡ, ತಾಪಂ ಉಪಾಧ್ಯಕ್ಷೆ ಲಕ್ಷ ್ಮಮ್ಮ ಹಾಗೂ ನೊಂದ ಮಹಿಳೆಯರಿಗೆ ಸಾಂತ್ವನ ಹೇಳಿದರು ವೈದ್ಯರ ವಿರುದ್ಧ ಶಿಸ್ತು ಕ್ರಮತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ ಮೇರೆಗೆ ತಾಪಂ ಉಪಾಧ್ಯಕ್ಷೆ ಲಕ್ಷ ್ಮಮ್ಮ ಆಸ್ಪತ್ರೆಯಿಂದ ತೆರಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ