ಆ್ಯಪ್ನಗರ

ಲಕ್ಷಿತ್ರ್ಮೕಸಾಗರದಲ್ಲಿ ಹುಲಿವಾಹನೋತ್ಸವ ಮೆರವಣಿಗೆ

ವಿಕ ಸುದ್ದಿಲೋಕ ಪಾಂಡವಪುರ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ ಮಹದೇಶ್ವರ ಸ್ವಾಮಿ ಜಾತ್ರಾಮಹೋತ್ಸವದ ಅಂಗವಾಗಿ ಬುಧವಾರ ತಾಲೂಕಿನ ಲಕ್ಷಿತ್ರ್ಮೕಸಾಗರ ಗ್ರಾಮಸ್ಥರು ಹುಲಿವಾಹನೋತ್ಸವ ...

Vijaya Karnataka 31 Oct 2019, 5:00 am
ಪಾಂಡವಪುರ: ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ ಮಹದೇಶ್ವರ ಸ್ವಾಮಿ ಜಾತ್ರಾಮಹೋತ್ಸವದ ಅಂಗವಾಗಿ ಬುಧವಾರ ತಾಲೂಕಿನ ಲಕ್ಷಿತ್ರ್ಮೕಸಾಗರ ಗ್ರಾಮಸ್ಥರು ಹುಲಿವಾಹನೋತ್ಸವ ಮೆರವಣಿಗೆಯನ್ನು ವಿಜೃಂಭಣೆಯಿಂದ ನಡೆಸಿದರು.
Vijaya Karnataka Web pandavapura taluk lakshmisagar village festival
ಲಕ್ಷಿತ್ರ್ಮೕಸಾಗರದಲ್ಲಿ ಹುಲಿವಾಹನೋತ್ಸವ ಮೆರವಣಿಗೆ


ಮಹದೇಶ್ವರಪುರದ ಮಹದೇಶ್ವರಸ್ವಾಮಿ ಜಾತ್ರಾಮಹೋತ್ಸವದಲ್ಲಿಬುಧವಾರದಿಂದ ಪ್ರಾರಂಭಗೊಂಡ ಹುಲಿವಾಹನ ಮೆರವಣಿಗೆ ಮೊದಲ ದಿನ ಲಕ್ಷಿತ್ರ್ಮೕಸಾಗರ ಗ್ರಾಮಸ್ಥರು ಹುಲಿ ವಾಹನೋತ್ಸವವನ್ನು ಅದ್ದೂರಿಯಾಗಿ ಮೆರವಣಿಗೆ ನಡೆಸುವ ಮೂಲಕ ಭಕ್ತಿ ಪ್ರದರ್ಶಿಸಿದರು. ಗ್ರಾಮದ ಯಜಮಾನರಾದ ಎಲ್‌.ಎನ್‌.ಕೃಷ್ಣೇಗೌಡ, ಎಲ್‌.ಸಿ.ಬೆಟ್ಟೇಗೌಡ, ಎಲ್‌.ಡಿ.ಸಂಜಯ್‌, ಎಲ್‌.ಸಿ.ಜಯರಾಮು, ಕಿಟ್ಟೇಗೌಡ ನೇತೃತ್ವದಲ್ಲಿನಡೆದ ಹುಲಿವಾನಹೋತ್ಸವದಲ್ಲಿನೂರಾರು ಯುವಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಜಾತ್ರೆ ಅಂಗವಾಗಿ ಲಕ್ಷಿತ್ರ್ಮೕಸಾಗರ ಗ್ರಾಮಸ್ಥರು ಆಂಜನೇಯ ದೇವಸ್ಥಾನದ ಆವರಣದಲ್ಲಿಹುಲಿವಾಹನವನ್ನು ನಾನಾ ಹೂ, ಹಣ್ಣುಗಳಿಂದ ಅಲಂಕರಿಸಿದರು. ಬಳಿಕ ಗ್ರಾಮದ ಯಜಮಾನವರು ಹುಲಿವಾಹನಕ್ಕೆ ಮೊದಲ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರು, ಮಹಿಳೆಯರು ಸರದಿ ಸಾಲಿನಲ್ಲಿಆಗಮಿಸಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಂತರ ಹುಲಿವಾಹನೋತ್ಸವವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಸಲಾಯಿತು.

ಹುಲಿವಾಹನ ಹೊತ್ತ ಮೆರವಣಿಗೆ ನಡೆಸಿದ ಯುವಕರು ಜೈಕಾರ ಕೂಗುತ್ತ ಮೆರವಣಿಗೆಯಲ್ಲಿಸಾಗಿದರು. ಈ ನಡುವೆ ಮಳೆ ಬಂದರೂ ಯುವಕರು ಉತ್ಸವದೊಂದಿಗೆ ಸಾಗಿದರು. ನಾನಾ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಹರಕೆ ಹೊತ್ತ ಮಹಿಳೆಯರು ಬಾಯಿಬೀಗ ಹಾಕಿಕೊಂಡು ಹೂ-ಹಣ್ಣಿನ ಆರತಿಯೊಂದಿಗೆ ಸಾಗಿದರು. ಗ್ರಾಮದ ಪ್ರತಿಬೀದಿಯೂ ತಳಿರು ತೋರಣಗಳಿಂದ ಶೃಂಗಾರಗೊಂಡಿದ್ದವು. ಸುಮಾರು 1ಕ್ಕೂ ಹೆಚ್ಚು ಕಾಲ ಮೆರವಣಿಗೆ ನಡೆಸಿದ ಹುಲಿ ವಾಹನೋತ್ಸವ ಸಂಜೆ ದೇವಸ್ಥಾನ ತಲುಪಿತು. ಪೂಜಾಕುಣಿತ, ನಂದಿಕಂಬ, ಡೊಳ್ಳುಕುಣಿತ, ಗಾರುಡಿಗೊಂಬೆ, ಕೀಲುಕುದುರೆ, ತಮಟೆ, ನಗಾರಿ ಸೇರಿದಂತೆ ನಾನಾ ಕಲಾತಂಡಗಳು ಕಣ್ಮನ ಸೆಳೆದವು.

ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿಹುಲಿವಾಹನೋತ್ಸವ ಮೆರವಣಿಗೆ ನಡೆಯಿತು. ದೇವಸ್ಥಾನದ ಸುತ್ತಲು ಮೂರು ಸುತ್ತು ಹುಲಿವಾಹನವನ್ನು ಮೆರವಣಿಗೆ ನಡೆಸಿ ಭಕ್ತಿಭಾವ ಪ್ರದರ್ಶಿಸಿದರು. ಇದೇ ವೇಳೆ ಲಕ್ಷಿತ್ರ್ಮೕಸಾಗರ ಗ್ರಾಮಸ್ಥರು ಜಿಪಂ ಸದಸ್ಯೆ ಶಾಂತಲ ರಾಮಕೃಷ್ಣ, ತಾಪಂ ಅಧ್ಯಕ್ಷೆ ಗಾಯಿತ್ರಿ ಕಾಂತರಾಜ್‌, ಮಾಜಿ ಅಧ್ಯಕ್ಷೆ ಪೂರ್ಣೀಮಾ ವೆಂಕಟೇಶ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ