ಆ್ಯಪ್ನಗರ

ಕಚೇರಿಯಲ್ಲೇ ಪಿಡಿಒ ಆತ್ಮಹತ್ಯೆಗೆ ಯತ್ನ

ಅನಾರೋಗ್ಯ ನಿಮಿತ್ತ ನಾಲ್ಕು ದಿನಗಳಿಂದ ರಜೆ ಹಾಕಿದ್ದ ಸಂತೋಷ್‌ ಸೋಮವಾರ ಕಚೇರಿಗೆ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬಂದ ದೂರವಾಣಿ ಕರೆ ಸ್ವೀಕರಿಸಿದರು. ಬಳಿಕ ವಿಚಲಿತರಾಗಿ ಶೌಚಾಲಯಕ್ಕೆ ತೆರಳಿ ಜತೆಗೆ ತಂದಿದ್ದ ಔಷಧ ಕುಡಿದು ಕುಸಿದು ಬಿದ್ದರೆನ್ನಲಾಗಿದೆ.

Vijaya Karnataka 19 Feb 2019, 7:42 pm
ಮದ್ದೂರು: ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ನಗರಕೆರೆ ಗ್ರಾಪಂ ಪಿಡಿಒ ಸ್ಥಳೀಯರೊಬ್ಬರು ಒತ್ತಡ ತಾಳಲಾರದೆ ಕಚೇರಿಯಲ್ಲೇ ಔಷಧ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೋಮವಾರ ( ಫೆಬ್ರವರಿ 18, 2019)ರಂದು ನಡೆದಿದೆ.
Vijaya Karnataka Web suicide


ಪಿಡಿಒ ಸಂತೋಷ್‌ ಆತ್ಮಹತ್ಯೆಗೆ ಯತ್ನಿಸಿದವರು. ಅನಾರೋಗ್ಯ ನಿಮಿತ್ತ ನಾಲ್ಕು ದಿನಗಳಿಂದ ರಜೆ ಹಾಕಿದ್ದ ಸಂತೋಷ್‌ ಸೋಮವಾರ ಕಚೇರಿಗೆ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬಂದ ದೂರವಾಣಿ ಕರೆ ಸ್ವೀಕರಿಸಿದರು. ಬಳಿಕ ವಿಚಲಿತರಾಗಿ ಶೌಚಾಲಯಕ್ಕೆ ತೆರಳಿ ಜತೆಗೆ ತಂದಿದ್ದ ಔಷಧ ಕುಡಿದು ಕುಸಿದು ಬಿದ್ದರೆನ್ನಲಾಗಿದೆ. ಈ ವೇಳೆ ಕಚೇರಿಯಲ್ಲೇ ಇದ್ದ ಗ್ರಾಪಂ ಅಧ್ಯಕ್ಷ ಮಹದೇವು ಹಾಗೂ ಸಿಬ್ಬಂದಿ ಸಂತೋಷ್‌ ಅವರನ್ನು ಮದ್ದೂರು ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಮದ್ದೂರು ತಾಪಂ ಇಒ ಮಣಿಕಂಠ ಘಟನೆ ವಿವರ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ