ಆ್ಯಪ್ನಗರ

ನದಿಗೆ ಹಾರಲು ಮುಂದಾಗಿದ್ದ ವೃದ್ಧೆಯ ಜೀವ ಉಳಿಸಿದರು

ನದಿಗೆ ಹಾರಲು ಮುಂದಾಗಿದ್ದ ವೃದ್ಧೆಯ ಜೀವ ಉಳಿಸಿದರು ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ಮಕ್ಕಳ ಕಿರುಕುಳದಿಂದ ಬೇಸತ್ತು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ...

Vijaya Karnataka 2 Aug 2019, 5:00 am
ಶ್ರೀರಂಗಪಟ್ಟಣ: ಮಕ್ಕಳ ಕಿರುಕುಳದಿಂದ ಬೇಸತ್ತು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ಹಿರಿಯ ನಾಗರಿಕ ಮಹಿಳೆಯನ್ನು ರಕ್ಷಿಸಲಾಗಿದೆ.
Vijaya Karnataka Web people save old women life in srirangapattana
ನದಿಗೆ ಹಾರಲು ಮುಂದಾಗಿದ್ದ ವೃದ್ಧೆಯ ಜೀವ ಉಳಿಸಿದರು


ರಾಮನಗರ ಸಮೀಪದ ಸಂಗ ಬಸವನದೊಡ್ಡಿಯ ನಿವಾಸಿ 70 ವರ್ಷದ ಮಹಿಳೆ ಪೊಲೀಸರು, ನಾಗರಿಕರಿಂದ ರಕ್ಷಿಸಲ್ಪಟ್ಟವರು.

ತಾಲೂಕಿನ ಕಾವೇರಿ ತೀರದ ಸಂಗಮ ಬಳಿ ಗುರುವಾರ, ತನ್ನ ತಾಯಿಯ ಅಸ್ಥಿ ವಿಸರ್ಜನೆಗೆಂದು ಬೆಂಗಳೂರಿನಿಂದ ಬಂದಿದ್ದ ಶ್ರೀಕಾಂತ್‌ ನದಿಯಲ್ಲಿ ಕೊಚ್ಚಿ ಹೋಗಿದ್ದರು. ವಿಷÜಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಶವ ಶೋಧಕ್ಕೆ ಮುಂದಾದರು. ಅಲ್ಲದೆ ನೂರಾರು ಜನರೂ ಸ್ಥಳದಲ್ಲಿ ಜಮಾಯಿಸಿದರು.

ಈ ವೇಳೆ ನದಿ ದಡದಲ್ಲಿ ಕಾಯುತ್ತ ದಡದಲ್ಲಿ ಕುಳಿತಿದ್ದ ವೃದ್ಧೆಯ ಬಗ್ಗೆ ಅನುಮಾನಗೊಂಡ ಸ್ಥಳೀಯರು ನೀವು ಏಕೆ ಇಲ್ಲಿ ಕುಳಿತಿದ್ದೀರಿ ಎಂದು ಪ್ರಶ್ನಿಸಿದಾಗ, ''ನಮ್ಮ ಕಡೆಯವರು ಕಾರಿನಲ್ಲಿ ಪೂಜೆಗೆ ಬಂದಿದ್ದೇವೆ, ಸಾಮಾನು ತರಲು ಹೋಗಿದ್ದಾರೆ,'' ಎಂದು ಹಾರಿಕೆ ಉತ್ತರ ಕೊಟ್ಟರು. ಸಾಕಷ್ಟು ಸಮಯದ ಬಳಿಕವೂ ಯಾರೂ ಬಾರದೇ ಇದ್ದಾಗ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಠಾಣೆಗೆ ಕರೆ ತಂದು ಮಹಿಳೆಯನ್ನು ವಿಚಾರಿಸಿದಾಗ, ''ಮಕ್ಕಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದೆ,'' ಎಂದು ನಿಜ ಒಪ್ಪಿಕೊಂಡರು. ನಂತರ ಪೊಲೀಸರು ಈ ಮಹಿಳೆಯ ಮಕ್ಕಳನ್ನು ಠಾಣೆಗೆ ಕರೆಸಿ, ತಿಳಿ ಹೇಳಿ ಮನೆಗೆ ಕಳುಹಿಸಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ