ಕಾವೇರಿ ತೀರದಲ್ಲಿ ಪಿತೃಗಳಿಗೆ ತಿಲತರ್ಪಣ: ಶ್ರೀರಂಗಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
Pitru tarpan in Cauvery river: ಶ್ರೀರಂಗಪಟ್ಟಣದ (Srirangapatna) ಹೊರವಲಯದಲ್ಲಿರುವ ಪಶ್ಚಿಮವಾಹಿನಿ, ಶ್ರೀರಂಗನಾಥಸ್ವಾಮಿ ದೇವಾಲಯ ಸ್ನಾನಘಟ್ಟ, ಕಾವೇರಿ ಸಂಗಮ, ದೊಡ್ಡ ಗೋಸಾಯ್ ಗಾಟ್, ಚಿಕ್ಕ ಗೋಸಾಯ್ಗಾಟ್, ಶ್ರೀ ನಿಮಿಷಾಂಬ ದೇವಾಲಯ ಸ್ನಾನಘಟ್ಟಗಳ ಬಳಿ ಆಗಮಿಸಿ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ನದಿ ದಂಡೆ ಮೇಲೆ ಕುಳಿತು ಪುರೋಹಿತರ ಮಾರ್ಗದರ್ಶನದಲ್ಲಿ ಪಿತೃಗಳಿಗೆ ನಾನಾ ಪೂಜೆಗಳನ್ನು ನೆರವೇರಿಸಿದರು. ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ನಾನಾ ಜಿಲ್ಲೆಗಳಿಂದ ಜನರು ಆಗಮಿಸಿದ್ದರಿಂದ ಕಾವೇರಿ ನದಿ ದಂಡೆಯಲ್ಲಿಎತ್ತ ನೋಡಿದರೂ ಜನರೇ ಕಾಣುತ್ತಿದ್ದರು.
ಹೈಲೈಟ್ಸ್:
- ರಾಜ್ಯದ ನಾನಾ ಕಡೆಯಿಂದ ಸಾವಿರಾರು ಮಂದಿಯಿಂದ ಕಾವೇರಿ ನದಿ ತಟದಲ್ಲಿ ಪಿತೃಗಳಿಗೆ ತಿಲರ್ಪಣ
- ಪಟ್ಟಣದ ಹೊರವಲಯದಲ್ಲಿರುವ ಪಶ್ಚಿಮವಾಹಿನಿ, ಶ್ರೀರಂಗನಾಥಸ್ವಾಮಿ ದೇವಾಲಯ ಸ್ನಾನಘಟ್ಟ
- ಕಾವೇರಿ ನದಿ ದಂಡೆಯಲ್ಲಿ ಎತ್ತ ನೋಡಿದರೂ ಜನರೇ ಕಾಣುತ್ತಿದ್ದರು
ಶ್ರೀರಂಗಪಟ್ಟಣ: ಮಹಾಲಯ ಅಮಾವಾಸ್ಯೆ ಅಂಗವಾಗಿ ಶ್ರೀರಂಗಪಟ್ಟಣ (Srirangapatna) ಕಾವೇರಿ ನದಿ (cauvery river) ತೀರಗಳಿಗೆ ರಾಜ್ಯದ ನಾನಾ ಕಡೆಯಿಂದ ಸಾವಿರಾರು ಮಂದಿ ಆಗಮಿಸಿ ಪಿತೃಗಳಿಗೆ ತಿಲರ್ಪಣ, ಪಿಂಡ ಪ್ರದಾನ, ಆಮದಾನ ಪೂಜೆಗಳನ್ನು ಭಾನುವಾರ ನೆರವೇರಿಸಿದರು. ಪಟ್ಟಣದ ಹೊರವಲಯದಲ್ಲಿರುವ ಪಶ್ಚಿಮವಾಹಿನಿ, ಶ್ರೀರಂಗನಾಥಸ್ವಾಮಿ ದೇವಾಲಯ ಸ್ನಾನಘಟ್ಟ, ಕಾವೇರಿ ಸಂಗಮ, ದೊಡ್ಡ ಗೋಸಾಯ್ ಗಾಟ್, ಚಿಕ್ಕ ಗೋಸಾಯ್ಗಾಟ್, ಶ್ರೀ ನಿಮಿಷಾಂಬ ದೇವಾಲಯ ಸ್ನಾನಘಟ್ಟಗಳ ಬಳಿ ಆಗಮಿಸಿ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ನದಿ ದಂಡೆ ಮೇಲೆ ಕುಳಿತು ಪುರೋಹಿತರ ಮಾರ್ಗದರ್ಶನದಲ್ಲಿ ಪಿತೃಗಳಿಗೆ ನಾನಾ ಪೂಜೆಗಳನ್ನು ನೆರವೇರಿಸಿದರು.
ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ನಾನಾ ಜಿಲ್ಲೆಗಳಿಂದ ಜನರು ಆಗಮಿಸಿದ್ದರಿಂದ ಕಾವೇರಿ ನದಿ ದಂಡೆಯಲ್ಲಿ ಎತ್ತ ನೋಡಿದರೂ ಜನರೇ ಕಾಣುತ್ತಿದ್ದರು. ಮುಂಜಾನೆಯಿಂದ ಸೂರ್ಯ ಮುಳುಗುವವರೆಗೂ ಜನರು ಆಗಮಿಸಿ ಪಿತೃಗಳಿಗೆ ಪೂಜೆ ಸಲ್ಲಿಸಿದರು. ಹೆಚ್ಚು ಜನರು ಆಗಮಿಸಿದ್ದರಿಂದ ನದಿ ತೀರದ ಪ್ರದೇಶಗಳಲ್ಲಿ ವಾಹನ ದಟ್ಟಣೆಯಾಗಿತ್ತು. ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು.
'ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕಿಗೆ ಹರಿಯುತ್ತದೆ. ಜತೆಗೆ ಎಲ್ಲಮೂಲ ಸೌಕರ್ಯಗಳು ಇವೆ. ಹೆಚ್ಚಿನ ಸಂಖ್ಯೆಯಲ್ಲಿ ಪುರೋಹಿತರು ಇದ್ದಾರೆ. ಹಾಗಾಗಿ ಪ್ರತಿ ವರ್ಷ ಮಹಾಲಯ ಅಮಾವಾಸ್ಯೆ ಪಿತೃಪಕ್ಷದಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಜನರು ಆಗಮಿಸಿ ಪಿತೃಗಳಿಗೆ ತಿಲತರ್ಪಣ, ಪಿಂಡ ಪ್ರದಾನ, ಆಮದಾನ (ಎಡೆ ಇಡುವುದು) ಪೂಜೆಗಳನ್ನು ನೆರವೇರಿಸುತ್ತಾರೆ' ಎಂದು ಶ್ರೀ ಚಾಮುಂಡೇಶ್ವರಿ ದೇವಾಲಯ ಪ್ರಧಾನ ಅರ್ಚಕ ಲಕ್ಷೀಶ ತಿಳಿಸಿದ್ದಾರೆ.
ಕಾವೇರಿ ನದಿಗೆ ಹಾರಿ ಆತ್ಮಹತ್ಯೆ
ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಯುವಕ ಶ್ರೀರಂಗಪಟ್ಟಣ ಕಾವೇರಿ ನದಿಗೆ ಬಿದ್ದು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟಿ.ನರಸೀಪುರ ತಾಲೂಕು, ಬನ್ನೂರು ಹೋಬಳಿ, ಕರಿಹುರುಳಿಕೊಪ್ಪಲು ಗ್ರಾಮದ ನಾಗೇಗೌಡ ಅವರ ಪುತ್ರ ಸಂತೋಷ್ ಕೆ.ಎನ್(24) ಮೃತನು. ಈತ ಮೈಸೂರು ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.
ನದಿಯಿಂದ ಶವ ಮೇಲೆತ್ತಿರುವ ಶ್ರೀರಂಗಪಟ್ಟಣ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳು ಸಾವು
ಕಳೆದ 5 ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಕೆ.ಆರ್.ಪೇಟೆ ತಾಲೂಕು ಬಲ್ಲೇನಹಳ್ಳಿ ಗ್ರಾಮದ ಸಿಂಗಯ್ಯ ಅವರ ಪತ್ನಿ ನರಸಮ್ಮ(70) ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ. ಮೃತರು ಕಳೆದ 5 ದಿನಗಳ ಹಿಂದೆ ಸಂಬಧಿಕರ ಮನೆಗೆ ಹೋಗಿ ಮಗನ ಜತೆ ಬೈಕ್ನಲ್ಲಿ ಸ್ವಗ್ರಾಮಕ್ಕೆ ಹಿಂದುರುಗುತ್ತಿದ್ದಾಗ ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಗ್ರಾಮದ ಹೊರವಲಯದಲ್ಲಿರುವ ಗಣಪತಿ ದೇವಾಲಯ ಬಳಿ ಬೈಕ್ಗೆ ಹಿಂದಿನಿಂದ ಆಟೋ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದರು. ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ನಾನಾ ಜಿಲ್ಲೆಗಳಿಂದ ಜನರು ಆಗಮಿಸಿದ್ದರಿಂದ ಕಾವೇರಿ ನದಿ ದಂಡೆಯಲ್ಲಿ ಎತ್ತ ನೋಡಿದರೂ ಜನರೇ ಕಾಣುತ್ತಿದ್ದರು. ಮುಂಜಾನೆಯಿಂದ ಸೂರ್ಯ ಮುಳುಗುವವರೆಗೂ ಜನರು ಆಗಮಿಸಿ ಪಿತೃಗಳಿಗೆ ಪೂಜೆ ಸಲ್ಲಿಸಿದರು. ಹೆಚ್ಚು ಜನರು ಆಗಮಿಸಿದ್ದರಿಂದ ನದಿ ತೀರದ ಪ್ರದೇಶಗಳಲ್ಲಿ ವಾಹನ ದಟ್ಟಣೆಯಾಗಿತ್ತು. ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು.
'ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕಿಗೆ ಹರಿಯುತ್ತದೆ. ಜತೆಗೆ ಎಲ್ಲಮೂಲ ಸೌಕರ್ಯಗಳು ಇವೆ. ಹೆಚ್ಚಿನ ಸಂಖ್ಯೆಯಲ್ಲಿ ಪುರೋಹಿತರು ಇದ್ದಾರೆ. ಹಾಗಾಗಿ ಪ್ರತಿ ವರ್ಷ ಮಹಾಲಯ ಅಮಾವಾಸ್ಯೆ ಪಿತೃಪಕ್ಷದಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಜನರು ಆಗಮಿಸಿ ಪಿತೃಗಳಿಗೆ ತಿಲತರ್ಪಣ, ಪಿಂಡ ಪ್ರದಾನ, ಆಮದಾನ (ಎಡೆ ಇಡುವುದು) ಪೂಜೆಗಳನ್ನು ನೆರವೇರಿಸುತ್ತಾರೆ' ಎಂದು ಶ್ರೀ ಚಾಮುಂಡೇಶ್ವರಿ ದೇವಾಲಯ ಪ್ರಧಾನ ಅರ್ಚಕ ಲಕ್ಷೀಶ ತಿಳಿಸಿದ್ದಾರೆ.
ಕಾವೇರಿ ನದಿಗೆ ಹಾರಿ ಆತ್ಮಹತ್ಯೆ
ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಯುವಕ ಶ್ರೀರಂಗಪಟ್ಟಣ ಕಾವೇರಿ ನದಿಗೆ ಬಿದ್ದು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟಿ.ನರಸೀಪುರ ತಾಲೂಕು, ಬನ್ನೂರು ಹೋಬಳಿ, ಕರಿಹುರುಳಿಕೊಪ್ಪಲು ಗ್ರಾಮದ ನಾಗೇಗೌಡ ಅವರ ಪುತ್ರ ಸಂತೋಷ್ ಕೆ.ಎನ್(24) ಮೃತನು. ಈತ ಮೈಸೂರು ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.
ನದಿಯಿಂದ ಶವ ಮೇಲೆತ್ತಿರುವ ಶ್ರೀರಂಗಪಟ್ಟಣ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳು ಸಾವು
ಕಳೆದ 5 ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಕೆ.ಆರ್.ಪೇಟೆ ತಾಲೂಕು ಬಲ್ಲೇನಹಳ್ಳಿ ಗ್ರಾಮದ ಸಿಂಗಯ್ಯ ಅವರ ಪತ್ನಿ ನರಸಮ್ಮ(70) ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ. ಮೃತರು ಕಳೆದ 5 ದಿನಗಳ ಹಿಂದೆ ಸಂಬಧಿಕರ ಮನೆಗೆ ಹೋಗಿ ಮಗನ ಜತೆ ಬೈಕ್ನಲ್ಲಿ ಸ್ವಗ್ರಾಮಕ್ಕೆ ಹಿಂದುರುಗುತ್ತಿದ್ದಾಗ ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಗ್ರಾಮದ ಹೊರವಲಯದಲ್ಲಿರುವ ಗಣಪತಿ ದೇವಾಲಯ ಬಳಿ ಬೈಕ್ಗೆ ಹಿಂದಿನಿಂದ ಆಟೋ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದರು. ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.