ಆ್ಯಪ್ನಗರ

ನಾವೆಲ್ಲರೂ ಚೆನ್ನಾಗಿದ್ದೇವೆ, ದಯವಿಟ್ಟು ಅಪಪ್ರಚಾರ ಮಾಡಬೇಡಿ: ವೀರ ಯೋಧ ಗುರು ಪತ್ನಿ ಮನವಿ

ನಮ್ಮ ಕುಟುಂಬಕ್ಕೆ 15 ಕೋಟಿ ರೂ. ಹಣ ಬಂದಿದೆ ಎನ್ನುವುದೆಲ್ಲಾ ಶುದ್ಧ ಸುಳ್ಳು. ಇದರಲ್ಲಿ ಯಾವ ಅನುಮಾನವೂ ಬೇಡ. ನನ್ನ ಖಾತೆಯನ್ನು ಪರಿಶೀಲಿಸಿ, ಸ್ಟೇಟ್‌ಮೆಂಟ್ ತೆಗೆಸಿ ನೋಡಿ. ದೇಶಭಕ್ತನ ಪತ್ನಿಯಾಗಿ ನಾನು ಹಣದ ಬಗ್ಗೆ ಎಂದೂ ಯೋಚನೆ ಮಾಡಿಲ್ಲ. ಹಾಗೆ ಮಾಡಿದರೆ ನನ್ನ ಗಂಡನಿಗೆ ಯಾರ ಗೌರವವೂ ಉಳಿಯುವುದಿಲ್ಲ. ನಾನೂ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

Vijaya Karnataka Web 2 Mar 2019, 9:22 pm
ನಾವೆಲ್ಲರೂ ಚೆನ್ನಾಗಿದ್ದೇವೆ, ದಯವಿಟ್ಟು ಅಪಪ್ರಚಾರ ಮಾಡಬೇಡಿ: ವೀರ ಯೋಧ ಗುರು ಪತ್ನಿ ಮನವಿ
Vijaya Karnataka Web Martyr Guru

ಮಂಡ್ಯ: ನಮ್ಮ ಕುಟುಂಬದಲ್ಲಿ ಯಾರೂ ಜಗಳವಾಡಿಲ್ಲ. ಮುಂದೆ ಆಡುವುದೂ ಇಲ್ಲ. ನಾವೆಲ್ಲರೂ ಚೆನ್ನಾಗಿದ್ದೇವೆ. ವಿನಾಕಾರಣ ಅಪಪ್ರಚಾರ ಮಾಡಬೇಡಿ ಪ್ಲೀಸ್ ಎಂದು ವೀರಯೋಧ ಗುರು ಅವರ ಪತ್ನಿ ಕಲಾವತಿ ಮನವಿ ಮಾಡಿದರು.

ನಮ್ಮ ಕುಟುಂಬಕ್ಕೆ 15 ಕೋಟಿ ರೂ. ಹಣ ಬಂದಿದೆ ಎನ್ನುವುದೆಲ್ಲಾ ಶುದ್ಧ ಸುಳ್ಳು. ಇದರಲ್ಲಿ ಯಾವ ಅನುಮಾನವೂ ಬೇಡ. ನನ್ನ ಖಾತೆಯನ್ನು ಪರಿಶೀಲಿಸಿ, ಸ್ಟೇಟ್‌ಮೆಂಟ್ ತೆಗೆಸಿ ನೋಡಿ. ದೇಶಭಕ್ತನ ಪತ್ನಿಯಾಗಿ ನಾನು ಹಣದ ಬಗ್ಗೆ ಎಂದೂ ಯೋಚನೆ ಮಾಡಿಲ್ಲ. ಹಾಗೆ ಮಾಡಿದರೆ ನನ್ನ ಗಂಡನಿಗೆ ಯಾರ ಗೌರವವೂ ಉಳಿಯುವುದಿಲ್ಲ. ನಾನೂ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ನಮ್ಮ ಕುಟುಂಬಕ್ಕೆ ಸಹಾಯಧನ ಬಂದಿದೆ. ಕಷ್ಟದಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇವೆ. ನಮ್ಮ ಕುಟುಂಬದಲ್ಲಿ ಆ ರೀತಿಯ ಯಾವುದೇ ಘಟನೆ ನಡೆದಿಲ್ಲ. ನಮ್ಮ ಕುಟುಂಬಕ್ಕೆ ಜನರು ಸಹಾಯ ಮಾಡುತ್ತಿರೋದನ್ನು ನೋಡಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅದು ಕೇವಲ ಊಹಾಪೋಹ. ಇದನ್ನು ಯಾರೂ ನಂಬಬೇಡಿ ಎಂದು ಕೋರಿದರು.

ಗುರು ನನ್ನ ಸ್ವಂತ ಅತ್ತೆಯ ಮಗ. ಅತ್ತೆಯವರು ನನ್ನನ್ನು ಮಗಳಂತೆ ನೋಡಿಕೊಳ್ಳುತ್ತಿದ್ದಾರೆ. ನನ್ನ ಪತಿ ಮಾಡಬೇಕಾದ ಕನಸುಗಳನ್ನು ನನಸು ಮಾಡುವ ದಿಕ್ಕಿನಲ್ಲಿ ನಾನು ಹಾಗೂ ನನ್ನ ಕುಟುಂಬದ ಹಿರಿಯರು-ಕಿರಿಯರು ನಡೆದುಕೊಳ್ಳುತ್ತೇವೆ. ವಿನಾಕಾರಣ ಸುಳ್ಳು ಸುದ್ದಿ ಹರಡಬೇಡಿ ಎಂದು ಮನವಿ ಮಾಡಿದರು.

ನಮ್ಮ ಕುಟುಂಬದ ದುಃಖ-ದುಮ್ಮಾನಗಳಲ್ಲಿ ಸಹಕರಿಸಿದ, ಆರ್ಥಿಕ, ಮಾನಸಿಕ, ನೈತಿಕ ಬೆಂಬಲ ನಿಂತ ಸರಕಾರ, ಜನರು, ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕೈಮುಗಿದರು. ಗೋಷ್ಠಿಯಲ್ಲಿ ಯೋಧ ಗುರು ಅವರ ಪತ್ನಿ, ಅತ್ತೆ ಚಿಕ್ಕತಾಯಮ್ಮ, ಮಾವ ಶಿವಣ್ಣ, ನಗರಸಭೆ ಮಾಜಿ ಸದಸ್ಯ ಎಂ.ವಿ.ಪದ್ಮಾವತಿ, ಪಿ.ಶ್ವೇತಾ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ