ಆ್ಯಪ್ನಗರ

ವಿದ್ಯುತ್‌ ಸ್ಪರ್ಶ: ರೈತ ಸಾವು

ತಾಲೂಕಿನ ಮಾದೇಗೌಡನಕೊಪ್ಪಲು ಹೊರವಲಯದಲ್ಲಿ ಬುಧವಾರ ಕೃಷಿ ಪಂಪ್‌ಸೆಟ್‌ ಮನೆಯಲ್ಲಿ ವಿದ್ಯುತ್‌ ಸ್ಪರ್ಶದಿಂದ ರೈತ ಮೃತಪಟ್ಟಿದ್ದಾರೆ.

Vijaya Karnataka 5 Jul 2018, 5:00 am
ಮಂಡ್ಯ: ತಾಲೂಕಿನ ಮಾದೇಗೌಡನಕೊಪ್ಪಲು ಹೊರವಲಯದಲ್ಲಿ ಬುಧವಾರ ಕೃಷಿ ಪಂಪ್‌ಸೆಟ್‌ ಮನೆಯಲ್ಲಿ ವಿದ್ಯುತ್‌ ಸ್ಪರ್ಶದಿಂದ ರೈತ ಮೃತಪಟ್ಟಿದ್ದಾರೆ.
Vijaya Karnataka Web power touch the farmer death
ವಿದ್ಯುತ್‌ ಸ್ಪರ್ಶ: ರೈತ ಸಾವು


ಗ್ರಾಮದ ನಿವಾಸಿ ಮಹೇಶ್‌(43) ಮೃತ ರೈತ. ಜಮೀನಿಗೆ ನೀರು ಹಾಯಿಸುವ ಸಲುವಾಗಿ ಮಹೇಶ್‌ ಪಂಪ್‌ಸೆಟ್‌ ಮನೆಗೆ ತೆರಳಿ ಸ್ಟಾರ್ಟರ್‌ ಬಾಕ್ಸ್‌ ಆನ್‌ ಮಾಡಿದ್ದಾರೆ. ಆದರೆ, ಅದೇ ವೇಳೆ ಸ್ಟಾರ್ಟರ್‌ ಬಾಕ್ಸ್‌ನಲ್ಲಿ ಗ್ರೌಂಡಿಂಗ್‌ ಆಗಿದ್ದರಿಂದ ಮಹೇಶ್‌ ಅವರಿಗೆ ವಿದ್ಯುತ್‌ ಶಾಕ್‌ ಹೊಡೆದಿದೆ. ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.

ಮೃತ ಮಹೇಶ್‌ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾನೆ. ಬುಧವಾರ ಸಂಜೆ ಅಂತ್ಯಕ್ರಿಯೆ ನಡೆಯಿತು. ವಿಷಯ ತಿಳಿದು ಸೆಸ್ಕ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

''ಪಂಪ್‌ಸೆಟ್‌ ಮನೆಯೊಳಗೆ ಈ ಘಟನೆ ನಡೆದಿದೆ. ಈ ಬಗ್ಗೆ ದೊರೆತ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲನೆ ನಡೆಸಲಾಗಿದೆ,'' ಎಂದು ಮಂಡ್ಯ ಗ್ರಾಮಾಂತರ ಸೆಸ್ಕ್‌ ಸಹಾಯಕ ಕಾರ‍್ಯಪಾಲಕ ಎಂಜಿನಿಯರ್‌ ಜಯಶಂಕರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ