ಆ್ಯಪ್ನಗರ

ಪ್ರಮೀಳಾರ್ಜುನೀಯಂ ನಾಟಕ ಪ್ರದರ್ಶನ ಇಂದು

ವಿಕ ಸುದ್ದಿಲೋಕ ಮಂಡ್ಯ ಷೇಕ್ಸ್‌ಪಿಯರ್‌ ರಚನೆಯ 'ಧಿಮಿಡ್‌ ಸಮ್ಮರ್‌ ನೈಟ್‌ ಡ್ರೀಮ್ಸ್‌' ನಾಟಕದ ಕನ್ನಡ ರೂಪಾಂತರ 'ಧಿಪ್ರಮೀಳಾರ್ಜುನೀಯಂ' ನಾಟಕ ಪ್ರದರ್ಶನವು ನಗರದಲ್ಲಿ ನ...

Vijaya Karnataka 17 Nov 2018, 5:00 am
ಮಂಡ್ಯ: ಷೇಕ್ಸ್‌ಪಿಯರ್‌ ರಚನೆಯ 'ಧಿಮಿಡ್‌ ಸಮ್ಮರ್‌ ನೈಟ್‌ ಡ್ರೀಮ್ಸ್‌' ನಾಟಕದ ಕನ್ನಡ ರೂಪಾಂತರ 'ಧಿಪ್ರಮೀಳಾರ್ಜುನೀಯಂ' ನಾಟಕ ಪ್ರದರ್ಶನವು ನಗರದಲ್ಲಿ ನ.17ರಂದು ನಡೆಯಲಿದೆ.
Vijaya Karnataka Web pramilarjunaniyam dram play today in mandya
ಪ್ರಮೀಳಾರ್ಜುನೀಯಂ ನಾಟಕ ಪ್ರದರ್ಶನ ಇಂದು


ಕರ್ನಾಟಕ ನಾಟಕ ಅಕಾಡೆಮಿ, ಜನದನಿ ಸಾಂಸ್ಕೃತಿಕ ಟ್ರಸ್ಟ್‌ ಹಾಗೂ ಕರ್ನಾಟಕ ಸಂಘದ ಸಹಯೋಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ಇಡೀ ಕಾರ‍್ಯಕ್ರಮದ ನಿರ್ವಹಣೆ ಜವಾಬ್ದಾರಿ ಜವಾಬ್ದಾರಿಯನ್ನು ಮಕ್ಕಳೇ ವಹಿಸಿರುವುದು ಈ ನಾಟಕ ಪ್ರದರ್ಶನದ ವಿಶೇಷತೆಯಾಗಿದೆ.

ನಾಟಕದ ಉದ್ಘಾಟನೆ, ವೇದಿಕೆ ಕಾರ‍್ಯಕ್ರಮದ ಅಧ್ಯಕ್ಷತೆ ಹಾಗೂ ಅತಿಥಿ, ಗಣ್ಯರಾಗಿ ಮಕ್ಕಳೇ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ 6.30ಕ್ಕೆ ರಂಗಭೂಮಿಯ ಬಾಲಪ್ರತಿಭೆ ಚರಿತ ಕೆ.ಕೋಮಲ್‌ಕುಮ್‌ ಅಧ್ಯಕ್ಷತೆಯಲ್ಲಿ ಬಾಲ ರಂಗಭೂಮಿ ಕಲಾವಿದ ಎಸ್‌.ಎಲ್‌.ಉಲ್ಲಾಸ್‌ ವೈಚಾರಿಕೆ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡುವರು. ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಆಟಗಾರ ಬಿ.ಪಿ.ತೇಜಸ್‌ಗೌಡ ಬೆಳತೂರು, ಉದಯೋನ್ಮುಖ ಗಾಯಕಿ ವಿಭಾ ನಿಧಿ ಶಿವಂ, ರಾಷ್ಟ್ರ ಮಟ್ಟದ ರಸಪ್ರಶ್ನೆ ಸ್ಪರ್ಧೆಯ ವಿಜೇತೆ ಎಂ.ಲಕ್ಷ್ಯಾ, ರಾಷ್ಟ್ರ ಮಟ್ಟದ ಕರಾಟೆ ಪಟು ವಿಷ್ಣು ಮೊದಲಿಯಾರ್‌ ಭಾಗವಹಿಸುವರು.

ಷೇಕ್ಸ್‌ಪಿಯರ್‌ ರಚನೆಯ 'ಧಿಮಿಡ್‌ ಸಮ್ಮರ್‌ ನೈಟ್‌ ಡ್ರೀಮ್ಸ್‌' ನಾಟಕವನ್ನು ಎಂ.ಎಲ್‌.ಶ್ರೀಕಂಠೇಗೌಡ 'ಧಿಪ್ರಮೀಳಾರ್ಜುನೀಯಂ' ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಚಿತ್ರನಟ ಮೂಗು ಸುರೇಶ್‌ ನೇತೃತ್ವದ ಸಾಫಲ್ಯ ತಂಡವು ನಾಟಕವನ್ನು ಪಸ್ತುತಪಡಿಸಲಿದೆ ಎಂದು ಜನದನಿ ಸಾಂಸ್ಕೃತಿಕ ಟ್ರಸ್ಟ್‌ನ ಅಧ್ಯಕ್ಷ ಕೆ.ಜಯರಾಂ, ನಾಟಕ ಪ್ರದರ್ಶನ ಸಂಘಟಕ ಎಂ.ಸಿ.ಲಂಕೇಶ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ