ಆ್ಯಪ್ನಗರ

ರಾಜೀನಾಮೆಗೆ ಒತ್ತಡ: ಗ್ರಾಪಂ ಸದಸ್ಯರು, ಪಿಡಿಒ ವಿರುದ್ಧ ಅಧ್ಯಕ್ಷೆ ಆರೋಪ

ಪಾಂಡವಪುರ: ನಾನೊಬ್ಬ ಮಹಿಳೆ ಎಂಬ ಕಾರಣಕ್ಕೆ ಪಿಡಿಒ ಹಾಗೂ ಸದಸ್ಯರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಹಿರೇಮರಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್‌.ಹೇಮಾವತಿ ಆರೋಪಿಸಿದ್ದಾರೆ.

Vijaya Karnataka 29 Sep 2018, 5:00 am
ಪಾಂಡವಪುರ: ನಾನೊಬ್ಬ ಮಹಿಳೆ ಎಂಬ ಕಾರಣಕ್ಕೆ ಪಿಡಿಒ ಹಾಗೂ ಸದಸ್ಯರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಹಿರೇಮರಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್‌.ಹೇಮಾವತಿ ಆರೋಪಿಸಿದ್ದಾರೆ.
Vijaya Karnataka Web pressure to resign president allege grapam members pdo
ರಾಜೀನಾಮೆಗೆ ಒತ್ತಡ: ಗ್ರಾಪಂ ಸದಸ್ಯರು, ಪಿಡಿಒ ವಿರುದ್ಧ ಅಧ್ಯಕ್ಷೆ ಆರೋಪ


''ಅಧ್ಯಕ್ಷೆಯಾದ ಬಳಿಕ ಪಂಚಾಯಿತಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದಿದ್ದರೂ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕು ಎನ್ನುವ ಕಾರಣಕ್ಕಾಗಿ ಆರೋಪಗಳನ್ನು ಮಾಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ,'' ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

''ನನ್ನ ಗಮನಕ್ಕೆ ಬಾರದೆಯೇ ಸೆ.26ರಂದು ಪಿಡಿಒ ಹಾಗೂ ಸದಸ್ಯರು ಉಪಾಧ್ಯಕ್ಷೆ ಚಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಕರೆದಿದ್ದರು. ನಾನು ಹೋದಾಗ ಸಭೆ ನಡೆಯುತ್ತಿತ್ತು. ಹಾಜರಾತಿ ಪುಸ್ತಕದಲ್ಲಿ ಅಧ್ಯಕ್ಷೆ ಗೈರು ಎಂದು ಬರೆದಿದ್ದರು. ಪಿಡಿಒ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು ಸದಸ್ಯರೊಂದಿಗೆ ಸೇರಿಕೊಂಡು ರಾಜಕೀಯ ಮಾಡುತ್ತಿದ್ದಾರೆ,'' ಎಂದು ಆರೋಪಿಸಿದರು.

ಪಿಡಿಒ ವಿರುದ್ಧ ಆರೋಪ: ''ಪಂಚಾಯಿತಿಯಲ್ಲಿ ನನ್ನ ಮಾತಿಗೆ ಸ್ವಲ್ಪವೂ ಕಿಮ್ಮತ್ತು ಕೊಡೋದಿಲ್ಲ. ಪಿಡಿಒ ಅವರು ನನಗೆ ಗೊತ್ತಿಲ್ಲದೆಯೇ ಕೆಲಸ ಮಾಡಿ, ಬಿಲ್‌ಗೆ ಸಹಿಹಾಕಿ ಎಂದು ಪೀಡಿಸುತ್ತಾರೆ. ''ನನ್ನ ಗಮನಕ್ಕೆ ಬಾರದೆ ಯಾವುದೇ ಕೆಲಸ ಮಾಡಿದರೂ ಸಹಿ ಹಾಕೋದಿಲ್ಲ'' ಎಂದು ಹೇಳಿದ್ದರಿಂದ ಪಿಡಿಒ ನನ್ನ ವಿರುದ್ಧ ಸದಸ್ಯರೊಂದಿಗೆ ಸೇರಿಕೊಂಡು ಮಸಲತ್ತು ನಡೆಸುತ್ತಿದ್ದಾರೆ,'' ಎಂದು ಹರಿಹಾಯ್ದರು.

''ನನ್ನ ಅವಧಿಯಲ್ಲಿ ಯಾವುದೇ ವಸತಿ ಯೋಜನೆ ಅಕ್ರಮ ಬಳಕೆಯಾಗಿಲ್ಲ. ಆದರೂ ಕುಟುಂಬದ ಸದಸ್ಯರಿಗೆ ವಸತಿ ಯೋಜನೆ ನೀಡಿದ್ದಾರೆ ಎಂದು ನನ್ನ ವಿರುದ್ಧ ಆರೋಪಿಸುತ್ತಿದ್ದಾರೆ. ಈ ಬಗ್ಗೆ ತನಿಖೆಯಾಗಲಿ. ಈ ಹಿಂದೆ ಪಂಚಾಯಿತಿಯ ಅಧ್ಯಕ್ಷ ರಾಗಿದ್ದ ಸುನೀಲ್‌ಕುಮಾರ್‌ ಅವರ ಅವಧಿಯಲ್ಲಿ ಸದಸ್ಯೆ ಮಂಗಳಮ್ಮ ಎಂಬುವರ ಅತ್ತೆಯ ಹೆಸರಿಗೆ ಎರಡು ವಸತಿ ಯೋಜನೆಯನ್ನು ನೀಡುವ ಮೂಲಕ ಭ್ರಷ್ಟಾಚಾರ ನಡೆಸಿದ್ದರು. ಈ ಬಗ್ಗೆ ನಾನು ಮೇಲಧಿಕಾರಿಗೆ ದೂರು ನೀಡಿದ್ದು, ಇದು ತನಿಖೆಯಲ್ಲಿ ಸಾಬೀತಾಗಿದೆ,'' ಎಂದರು.

ಅಧ್ಯಕ್ಷೆ ಪತಿ ಮಂಜುನಾಥ್‌, ಮುಖಂಡ ಎಚ್‌.ಎಸ್‌.ಮಂಜುನಾಥ್‌ ಗೋಷ್ಠಿಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ