ಆ್ಯಪ್ನಗರ

ಯೋಜನೆಗಳು ತೆಂಗು ಬೆಳೆಗಾರರಿಗೆ ತಲುಪುತ್ತಿಲ್ಲ

ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೊಳಿಸುತ್ತಿರುವ ಯೋಜನೆಗಳು ನಿರ್ದಿಷ್ಟ ಸಮಯದಲ್ಲಿ ತೆಂಗು ಬೆಳೆಗಾರರಿಗೆ ತಲುಪುತ್ತಿಲ್ಲವೆಂದು ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಶಂಕರ್‌ನಾರಾಯಣ್‌ ರೆಡ್ಡಿ ಆರೋಪಿಸಿದರು.

Vijaya Karnataka 21 Jun 2019, 5:00 am
ಮದ್ದೂರು : ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೊಳಿಸುತ್ತಿರುವ ಯೋಜನೆಗಳು ನಿರ್ದಿಷ್ಟ ಸಮಯದಲ್ಲಿ ತೆಂಗು ಬೆಳೆಗಾರರಿಗೆ ತಲುಪುತ್ತಿಲ್ಲವೆಂದು ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಶಂಕರ್‌ನಾರಾಯಣ್‌ ರೆಡ್ಡಿ ಆರೋಪಿಸಿದರು.
Vijaya Karnataka Web MDY-MDY20MDR1


ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆಯ ಸಭಾಂಗಣದಲ್ಲಿ ಬುಧವಾರ ನಡೆದ ತೆಂಗು ಬೆಳೆಗಾರರ ಸಂಘದ ಪದಾಧಿಕಾರಿಗಳ ಸಭೆ ವೇಳೆ ಮಾತನಾಡಿ, ರಾಜ್ಯದಲ್ಲಿ ತೆಂಗು ಬೆಳೆಯನ್ನು ಉಳಿಸಿ ಬೆಳೆಸಲು ಸರಕಾರಗಳು ಅಗತ್ಯ ಕ್ರಮವಹಿಸುವ ಜತೆಗೆ ಪ್ರೋತ್ಸಾಹಿಸುವ ಕೆಲಸವಾಗಬೇಕೆಂದರು.

ನೆರೆಯ ಕೇರಳ ರಾಜ್ಯದಲ್ಲಿ ತೆಂಗು ಬೆಳೆಗಾರರಿಗೆ ಹಲವು ಯೋಜನೆಗಳು ರೂಪಿಸಿದ್ದು, ಅದರಂತೆಯೇ ರಾಜ್ಯದಲ್ಲೂ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿ ಅರ್ಹ ಫಲಾನುಭವಿಗಳಿಗೆ ವ್ಯವಸ್ಥಿತವಾಗಿ ತಲುಪಲು ಆಡಳಿತ ನಡೆಸುವ ಸರಕಾರಗಳು ಮುಂದಾಗಬೇಕೆಂದರು.

ರಾಜ್ಯದಲ್ಲಿ ಅತಿ ಹೆಚ್ಚು ತೆಂಗು ಬೆಳೆ ಬೆಳೆಯುತ್ತಿದ್ದರೂ ಸಮರ್ಪಕವಾದ ಸರ್ವೇ ಕಾರ್ಯ ನಡೆಯದ ಕಾರಣ ರಾಜ್ಯವು ನಾಲ್ಕನೇ ಸ್ಥಾನದಲ್ಲಿರುವುದು ದುರಂತವೆಂದ ಅವರು ಬೀದರ್‌ನಿಂದ ಚಾಮರಾಜನಗರವರೆವಿಗೆ 30 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ತೆಂಗು ಬೆಳೆಯಿದ್ದು ಸ್ಪಷ್ಟ ಮಾಹಿತಿ ಇಲ್ಲದ ಸರಕಾರ ಕೂಡಲೇ ಸರ್ವೇ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿದರು.

ತೆಂಗು ಬೆಳೆ ಅಭಿವೃದ್ಧಿ ಮತ್ತು ಸಂರಕ್ಷ ಣೆ ಕುರಿತಾಗಿ ಬಾಗಲಕೋಟೆ ಕೃಷಿ ವಿಶ್ವ ವಿದ್ಯಾಲಯಕ್ಕೆ ಸರಕಾರ ಜವಾಬ್ದಾರಿ ನೀಡಿದೆ. ತುಮಕೂರು, ಮಂಡ್ಯ, ಚಾಮರಾಜನಗರ ಹಾಗೂ ಮೈಸೂರು ವ್ಯಾಪ್ತಿಯಲ್ಲಿ ಅಧಿಕ ತೆಂಗು ಬೆಳೆಯಿದ್ದು ಜಿಕೆವಿಕೆ ಮೂಲಕ ತೆಂಗು ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸುವಂತೆ ಸರಕಾರವನ್ನು ಒತ್ತಾಯಿಸಿದರು.

ಕೊಬ್ಬರಿ, ಕಾಯಿ, ಎಳನೀರು, ನೀರಾ ಮತ್ತಿತರ ಉತ್ಪನ್ನಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ತೆಂಗು ಬೆಳೆಗಾರರ ಹಿತ ರಕ್ಷ ಣೆಗೆ ಸರಕಾರ ಮುಂದಾಗುವ ಜತೆಗೆ ನೀರಾ ಉತ್ಪಾದನೆಗೆ ಉತ್ತೇಜನ ನೀಡಿ ಇದರನ್ವಯ ಗುಡಿ ಕೈಗಾರಿಕೆಗೆ ಅನುವುಮಾಡಿಕೊಡುವಂತೆ ಕೋರಿದರು. ರಾಜ್ಯ ಸರಕಾರ ಒಣಗಿ ನಿಂತಿರುವ ತೆಂಗಿನ ಮರಗಳಿಗೆ ಕೇವಲ 120 ರೂ. ಪರಿಹಾರ ವಿತರಿಸುತ್ತಿದ್ದು, ಮರಕ್ಕೆ 3200ರೂ. ವಿತರಸಲು ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.

ಮುಂದಿನ ದಿನಗಳಲ್ಲಿ ಜಿಲ್ಲಾ, ತಾಲೂಕು ಹಾಗೂ ಹೋಬಳಿಮಟ್ಟಗಳಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡುವ ಮೂಲಕ ತೆಂಗು ಬೆಳೆಗಾರರಿಗೆ ನ್ಯಾಯಕೊಡಿಸಲು ಸಂಘಟನೆ ಮುಂದಾಗಬೇಕೆಂದು ಹೇಳಿದರು. ಸಂಘಟನೆಯ ರಾಜ್ಯಾ ಉಪಾಧ್ಯಕ್ಷ ನಂಜೇಗೌಡ, ಪ್ರಧಾನ ಕಾರ್ಯದರ್ಶಿ ಭರತ್‌ಕುಮಾರ್‌, ಲೋಕೇಶ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ