ಶ್ರೀರಂಗಪಟ್ಟಣ: ಗ್ರಾಮ ಪಂಚಾಯಿತಿ ನೌಕರರಿಗೆ ಇಎಫ್ಎಂಎಸ್ ಮೂಲಕ ವೇತನ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾ.ಪಂ. ನೌಕರರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾ.ಪಂ.ಕಚೇರಿ ಎದುರು ಜಮಾವಣೆಗೊಂಡ ಪ್ರತಿಭನಾಕಾರರು, ಈ ಹಿಂದಿನ ಸರಕಾರ ಗ್ರಾ.ಪಂ.ನೌಕರರಿಗೆ ಎಲೆಕ್ಟ್ರಾನಿಕ್ ಫಂಡ್ ಮನಿ ಸಿಸ್ಟಮ್ ಮೂಲಕ ನೇರವಾಗಿ ವೇತನ ನೀಡುವಂತೆ ಆದೇಶ ನೀಡಿತ್ತು. ತಾ.ಪಂ. ಇಒ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚತಂತ್ರದ ತಂತ್ರಾಂಶದಲ್ಲಿ ಎಲ್ಲಾ ನೌಕರರ ಹೆಸರು ನಮೂದಿಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದರೂ ಮೂರು ತಿಂಗಳೂ ಕಳೆದರೂ ಸರಕಾರ ನೌಕರರ ವೇತನ ನೀಡಿಲ್ಲ ಎಂದು ದೂರಿದರು.
ಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣರಾಗಿದ್ದು, 10 ವರ್ಷ ಸೇವೆ ಸಲ್ಲಿಸಿರುವ ನೌಕರರಿಗೆ ಹಿಂದಿನಂತೆ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಬೇಕು. ನೌಕರರಿಗೆ ಪಿಂಚಣಿ, ವೈದ್ಯಕೀಯ ವೆಚ್ಚ ಹಾಗೂ ಗ್ರಾಚುಟಿಗಳು ಸಿಗುವಂತೆ ಕ್ರಮ ವಹಿಸಬೇಕು, ನಗರಾಭಿವೃದ್ಧಿ ಇಲಾಖೆಯಂತೆ ಗ್ರಾ.ಪಂ.ನೌಕರರಿಗೆ ಸೇವಾ ನಿಯಮಗಳಿಗೆ ಸೂಕ್ತ ಆದೇಶ ಹೊರಡಿಸಬೇಕು, 2011ರ ಜನಗಣತಿ ಆಧಾರದ ಮೇಲೆ ಗ್ರಾ.ಪಂ.ಗಳನ್ನು ಗ್ರೇಡ್2 ನಿಂದ ಗ್ರೇಡ್1ಗೆ ಮೇಲ್ದರ್ಜೆಗೇರಿಸಬೇಕು, ಎಂ.ಎಸ್.ಸ್ವಾಮಿ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ತಾ.ಪಂ. ಸಹಾಯಕ ನಿರ್ದೇಶಕ ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾ.ಪಂ.ನೌಕರರ ಸಂಘದ ಅಧ್ಯಕ್ಷ ಆನಂದ್, ಉಪಾಧ್ಯಕ್ಷ ಪದ್ಮನಾಭ್, ಕಾರ್ಯದರ್ಶಿ ಬಸವರಾಜು, ತಿಮ್ಮರಾಜು, ಪ್ರಸನ್ನ, ಚೆನ್ನೇಗೌಡ, ಶಂಕರ್, ಬಾಲನಾಗು, ಸುಭಾಷ್, ಪ್ರಸನ್ನ ಸೇರಿದಂತೆ ಬಿಲ್ ಕಲೆಕ್ಟರ್ಗಳು, ವಾಟರ್ಮನ್ ಹಾಗೂ ಸ್ವೀಪರ್ಗಳು ಹಾಜರಿದ್ದರು.
ತಾ.ಪಂ.ಕಚೇರಿ ಎದುರು ಜಮಾವಣೆಗೊಂಡ ಪ್ರತಿಭನಾಕಾರರು, ಈ ಹಿಂದಿನ ಸರಕಾರ ಗ್ರಾ.ಪಂ.ನೌಕರರಿಗೆ ಎಲೆಕ್ಟ್ರಾನಿಕ್ ಫಂಡ್ ಮನಿ ಸಿಸ್ಟಮ್ ಮೂಲಕ ನೇರವಾಗಿ ವೇತನ ನೀಡುವಂತೆ ಆದೇಶ ನೀಡಿತ್ತು. ತಾ.ಪಂ. ಇಒ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚತಂತ್ರದ ತಂತ್ರಾಂಶದಲ್ಲಿ ಎಲ್ಲಾ ನೌಕರರ ಹೆಸರು ನಮೂದಿಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದರೂ ಮೂರು ತಿಂಗಳೂ ಕಳೆದರೂ ಸರಕಾರ ನೌಕರರ ವೇತನ ನೀಡಿಲ್ಲ ಎಂದು ದೂರಿದರು.
ಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣರಾಗಿದ್ದು, 10 ವರ್ಷ ಸೇವೆ ಸಲ್ಲಿಸಿರುವ ನೌಕರರಿಗೆ ಹಿಂದಿನಂತೆ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಬೇಕು. ನೌಕರರಿಗೆ ಪಿಂಚಣಿ, ವೈದ್ಯಕೀಯ ವೆಚ್ಚ ಹಾಗೂ ಗ್ರಾಚುಟಿಗಳು ಸಿಗುವಂತೆ ಕ್ರಮ ವಹಿಸಬೇಕು, ನಗರಾಭಿವೃದ್ಧಿ ಇಲಾಖೆಯಂತೆ ಗ್ರಾ.ಪಂ.ನೌಕರರಿಗೆ ಸೇವಾ ನಿಯಮಗಳಿಗೆ ಸೂಕ್ತ ಆದೇಶ ಹೊರಡಿಸಬೇಕು, 2011ರ ಜನಗಣತಿ ಆಧಾರದ ಮೇಲೆ ಗ್ರಾ.ಪಂ.ಗಳನ್ನು ಗ್ರೇಡ್2 ನಿಂದ ಗ್ರೇಡ್1ಗೆ ಮೇಲ್ದರ್ಜೆಗೇರಿಸಬೇಕು, ಎಂ.ಎಸ್.ಸ್ವಾಮಿ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ತಾ.ಪಂ. ಸಹಾಯಕ ನಿರ್ದೇಶಕ ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾ.ಪಂ.ನೌಕರರ ಸಂಘದ ಅಧ್ಯಕ್ಷ ಆನಂದ್, ಉಪಾಧ್ಯಕ್ಷ ಪದ್ಮನಾಭ್, ಕಾರ್ಯದರ್ಶಿ ಬಸವರಾಜು, ತಿಮ್ಮರಾಜು, ಪ್ರಸನ್ನ, ಚೆನ್ನೇಗೌಡ, ಶಂಕರ್, ಬಾಲನಾಗು, ಸುಭಾಷ್, ಪ್ರಸನ್ನ ಸೇರಿದಂತೆ ಬಿಲ್ ಕಲೆಕ್ಟರ್ಗಳು, ವಾಟರ್ಮನ್ ಹಾಗೂ ಸ್ವೀಪರ್ಗಳು ಹಾಜರಿದ್ದರು.