ಆ್ಯಪ್ನಗರ

ಅಂಬೇಡ್ಕರ್‌ ಪ್ರತಿಮೆ ಅನಾವರಣಕ್ಕೆ ಯತ್ನ: ಪೊಲೀಸರಿಂದ ತಡೆ

ಶಾಸಕ ಸುರೇಶ್‌ಗೌಡ ಭರವಸೆ ವಿಕ ಸುದ್ದಿಲೋಕ ನಾಗಮಂಗಲ ಕಳೆದ ಮೂರು ವರ್ಷಗಳಿಂದ ವಿವಾದಕ್ಕೀಡಾಗಿರುವ ಪಟ್ಟಣದ ಮಿನಿವಿಧಾನಸೌಧದ ಮುಂಭಾಗದ ಡಾಬಿಆರ್‌...

Vijaya Karnataka 26 Jun 2018, 5:00 am
ವಾರದಲ್ಲಿ ಸಮಸ್ಯೆ ಇತ್ಯರ್ಥ: ಶಾಸಕ ಸುರೇಶ್‌ಗೌಡ ಭರವಸೆ
Vijaya Karnataka Web protester try to inaugurate ambetkar statue in nagamangala
ಅಂಬೇಡ್ಕರ್‌ ಪ್ರತಿಮೆ ಅನಾವರಣಕ್ಕೆ ಯತ್ನ: ಪೊಲೀಸರಿಂದ ತಡೆ


ನಾಗಮಂಗಲ: ಕಳೆದ ಮೂರು ವರ್ಷಗಳಿಂದ ವಿವಾದಕ್ಕೀಡಾಗಿರುವ ಪಟ್ಟಣದ ಮಿನಿವಿಧಾನಸೌಧದ ಮುಂಭಾಗದ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಅನಾವರಣಕ್ಕೆ ತಾಲೂಕಿನ ಕೆಲ ದಲಿತ ಮುಖಂಡರು ವಿಫಲ ಯತ್ನ ನಡೆಸಿದರು.

ಕಳೆದ ಮೂರು ವರ್ಷಗಳ ಹಿಂದೆ ಪಟ್ಟಣದ ಮಿನಿವಿಧಾನಸೌಧದ ಮುಂಭಾಗದಲ್ಲಿ ಡಾ.ಅಂಬೇಡ್ಕರ್‌ ಪ್ರತಿಮೆ ಪ್ರತಿಷ್ಠಾಪನೆಗೆ ಸಂಬಂಧಿಧಿಸಿದಂತೆ ವಿವಾದ ಉಂಟಾಗಿ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿವಾದಿತ ಪ್ರತಿಮೆಯನ್ನು ಅನಾವರಣ ಮಾಡುವಂತೆ ದಲಿತ ಸಂಘಟನೆಯ ಪದಾಧಿಧಿಕಾರಿಗಳು ಸರಕಾರ ಹಾಗೂ ತಾಲೂಕು ಆಡಳಿತದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಆದರೆ, ಪ್ರತಿಮೆ ಅನಾವರಣಕ್ಕೆ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ಮೂರು ವರ್ಷಗಳಿಂದ ಪ್ರತಿಷ್ಠಾಪನೆಯಾಗದೆ ಅನಾಥವಾಗಿ ನಿಂತಿರುವ ಅಂಬೇಡ್ಕರ್‌ ಪ್ರತಿಮೆ ಅನಾವರಣಕ್ಕೆ ಸಂಬಂಧಿಧಿಸಿದಂತೆ ಶಾಸಕ ಸುರೇಶ್‌ಗೌಡ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ ಅವರೊಂದಿಗೆ ಮೌಖಿಕವಾಗಿ ಚರ್ಚಿಸಿರುವುದಾಗಿ ದಲಿತ ಮುಖಂಡರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಭಾನುವಾರ ಪ್ರತಿಮೆ ಅನಾವರಣ ಮಾಡಲು ಮುಂದಾದ ದಲಿತ ಮುಖಂಡರು, ಕ್ರೇನ್‌ ಯಂತ್ರದೊಂದಿಗೆ ಮಿನಿವಿಧಾನಸೌಧ ಆವರಣ ಪ್ರೇವೇಶಿಸಿದರು.

ಈ ಸಂದರ್ಭ ತಹಸೀಲ್ದಾರ್‌ ಎಂ.ನಂಜುಂಡಯ್ಯ, ವಿವಾದಿತ ಅಂಬೇಡ್ಕರ್‌ ಪ್ರತಿಮೆಗೆ ಸಂಬಂಧಿಧಿಸಿದ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅನಾವರಣಗೊಳಿಸಲು ಸಾಧ್ಯವಿಲ್ಲ. ಅಂಬೇಡ್ಕರ್‌ ಪ್ರತಿಮೆಗೆ ಬಿಗಿ ಬಂದೋಬಸ್ತ್‌ನೊಂದಿಗೆ ರಕ್ಷ ಣೆ ಒದಗಿಸುವಂತೆ ಪೊಲೀಸ್‌ ಅಧಿಧಿಕಾರಿಗಳಿಗೆ ಲಿಖಿತ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ, ಪ್ರತಿಮೆ ಅನಾವರಣ ಯತ್ನಕ್ಕೆ ಪೊಲೀಸರು ಬ್ರೇಕ್‌ ಹಾಕಿದರು.

ಪ್ರತಿಭಟನೆ : ಪ್ರತಿಮೆ ಅನಾವರಣ ಮಾಡಲು ಅವಕಾಶ ನೀಡದ ತಾಲೂಕು ಆಡಳಿತ ಹಾಗೂ ಪೊಲೀಸರ ಕ್ರಮ ಖಂಡಿಸಿ ದಲಿತ ಮುಖಂಡರು, ಮಿನಿವಿಧಾನಸೌಧದ ಮುಂಭಾಗದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಪ್ರತಿಭಟನೆ ನಡೆಸಿದರು.

ಶಾಸಕರ ಭೇಟಿ, ಅಧಿಧಿಕಾರಿಗಳಿಗೆ ತರಾಟೆ: ಅಂಬೇಡ್ಕರ್‌ ಪ್ರತಿಮೆ ಅನಾವರಣಕ್ಕೆ ಸಂಬಂಧಿಧಿಸಿದಂತೆ ದಲಿತ ಮುಖಂಡರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸುರೇಶ್‌ಗೌಡ, ತಹಸೀಲ್ದಾರ್‌ ಎಂ.ನಂಜುಂಡಯ್ಯ ಮತ್ತು ಪೊಲೀಸ್‌ ವೃತ್ತ ನಿರೀಕ್ಷ ಕ ಡಿ.ಪಿ.ಧನರಾಜ್‌ ಅವರನ್ನು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡರು.

ಪ್ರಕರಣಕ್ಕೆ ಸಂಬಂಧಿಧಿಸಿದಂತೆ ಜಿಲ್ಲಾಡಳಿತ ಅಥವಾ ನ್ಯಾಯಾಲಯದ ತಡೆಯಾಜ್ಞೆಯಿದ್ದರೆ ಅದರ ಆದೇಶಪ್ರತಿ ಹಾಜರುಪಡಿಸಿ ಎಂದು ತಾಕೀತು ಮಾಡಿದಾಗ ಅಧಿಧಿಕಾರಿಗಳು ಚಡಪಡಿಸಿದರು. ಪ್ರಕರಣಕ್ಕೆ ಸಂಬಂಧಿಧಿಸಿದಂತೆ ನ್ಯಾಯಾಲಯದಲ್ಲಿ ಯಾವುದೇ ತಡೆಯಾಜ್ಞೆ ಇಲ್ಲದಿದ್ದರೂ ಹಿರಿಯ ಅಧಿಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ, ತಾಲೂಕಿನಲ್ಲಿ ಶಾಂತಿ ನೆಮ್ಮದಿ ಕದಡುವ ಕೆಲಸ ಮಾಡುತ್ತಿದ್ದೀರಿ ಎಂದು ಗುಡುಗಿದ ಶಾಸಕರು, ನಿಮ್ಮ ವ್ಯಾಪ್ತಿ ಬಿಟ್ಟು ಬೇರೆ ಇಲಾಖೆ ವ್ಯಾಪ್ತಿಗೆ ಅನವಶ್ಯಕವಾಗಿ ತಲೆಹಾಕಬಾರದು ಎಂದು ಪೊಲೀಸ್‌ ಅಧಿಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ವಾರದೊಳಗೆ ಪ್ರತಿಮೆ ಅನಾವರಣ ಭರವಸೆ : ಬಳಿಕ ಪ್ರತಿಭಟನಾ ನಿರತ ದಲಿತ ಮುಖಂಡರನ್ನು ಭೇಟಿ ಮಾಡಿದ ಶಾಸಕ ಸುರೇಶ್‌ಗೌಡ, ಅಂಬೇಡ್ಕರ್‌ ಪ್ರತಿಮೆ ಅನಾವಣರಣಕ್ಕೆ ಸಂಬಂಧಿಧಿಸಿದಂತೆ ತಾವು ಈಗಾಗಲೇ ಮುಖ್ಯಮಂತ್ರಿ, ಗೃಹಮಂತ್ರಿ ಸೇರಿದಂತೆ ಹಿರಿಯ ಅಧಿಧಿಕಾರಿಗಳ ಗಮನಕ್ಕೆ ತಂದಿದ್ದು, ಈ ಕುರಿತು ಬೆಂಗಳೂರಿನಲ್ಲಿ ಜಿಲ್ಲಾಧಿಧಿಕಾರಿ ಸೇರಿದಂತೆ ಹಿರಿಯ ಪೊಲೀಸ್‌ ಅಧಿಧಿಕಾರಿಗಳ ಸಭೆ ಕರೆದಿದ್ದಾರೆ. ಪ್ರತಿಮೆ ಅನಾವರಣಕ್ಕೆ ಯಾವುದೇ ತೊಂದರೆಯಿಲ್ಲ. ಸ್ಥಳೀಯ ಮತ್ತು ಪೊಲೀಸ್‌ ಅಧಿಧಿಕಾರಿಗಳ ನಿರ್ಲಕ್ಷ ್ಯದಿಂದಾಗಿ ಪ್ರತಿಮೆ ಕೆಲ ವರ್ಷಗಳಿಂದ ಅನಾಥವಾಗಿ ನಿಂತಿದೆ. ಇದಕ್ಕೆ ಅಂತಿಮ ರೂಪ ನೀಡಿ, ಇದೇ ಅಧಿಧಿಕಾರಿಗಳಿಂದ ಇನ್ನೊಂದು ವಾರದಲ್ಲಿ ಅಂಬೇಡ್ಕರ್‌ ಪ್ರತಿಮೆಯನ್ನು ಅನಾವರಣ ಮಾಡಿಸುವ ಮೂಲಕ ಈ ವಿವಾದಕ್ಕೆ ತೆರೆ ಎಳೆಯಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.

ಜಿ.ಪಂ.ಸದಸ್ಯ ಮುತ್ತಣ್ಣ, ದಸಂಸ ರಾಜ್ಯ ಮುಖಂಡ ವೆಂಕಟಗಿರಿಯಯ್ಯ, ಬಿಎಸ್‌ಪಿ ಪಕ್ಷ ದ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ತಾಲೂಕು ಘಟಕದ ಅಧ್ಯಕ್ಷ ಮಹದೇವು, ಮುಳಕಟ್ಟೆ ಶಿವರಾಮಯ್ಯ, ಕಂಚಿನಕೋಟೆ ಮೂರ್ತಿ, ಜಾನಯ್ಯ, ಸೇರಿದಂತೆ ಹಲವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ