ಆ್ಯಪ್ನಗರ

23ಕ್ಕೆ ದಿ.ಪುಟ್ಟಣ್ಣಯ್ಯ ಪುತ್ಥಳಿ ಅನಾವರಣ

ವಿಕ ಸುದ್ದಿಲೋಕ ಮಂಡ್ಯ ಪಾಂಡವಪುರ ತಾಲೂಕು ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಡಿ23ರಂದು ರೈತನಾಯಕ ದಿವಂಗತ ಕೆಎಸ್‌...

Vijaya Karnataka 21 Dec 2018, 5:00 am
ಮಂಡ್ಯ: ಪಾಂಡವಪುರ ತಾಲೂಕು ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಡಿ.23ರಂದು ರೈತನಾಯಕ ದಿವಂಗತ ಕೆ.ಎಸ್‌.ಪುಟ್ಟಣ್ಣಯ್ಯ ಅವರ ಪುತ್ಥಳಿ ಅನಾವರಣ, ಕಾಯಕ ಪ್ರಶಸ್ತಿ ಪ್ರದಾನ ಹಾಗೂ ರೈತ ದಿನಾಚರಣೆ ಸಮಾರಂಭ ಆಯೋಜಿಸಲಾಗಿದೆ ಎಂದು ರಾಜ್ಯ ರೈತಸಂಘದ ಪ್ರಧಾನ ಕಾರ‍್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದರು.
Vijaya Karnataka Web puttannaiah puththali unveiled on 23rd at ennehole koppal pandavapura taluk
23ಕ್ಕೆ ದಿ.ಪುಟ್ಟಣ್ಣಯ್ಯ ಪುತ್ಥಳಿ ಅನಾವರಣ


ರೈತಸಾರಥಿ ಕೆ.ಎಸ್‌.ಪುಟ್ಟಣ್ಣಯ್ಯ ಅಭಿಮಾನಿ ಬಳಗ, ಕರ್ನಾಟಕ ರಾಜ್ಯ ರೈತಸಂಘ, ಹಸಿರು ಸೇನೆ ಹಾಗೂ ಎಣ್ಣೆಕೊಳೆಕೊಪ್ಪಲು ಗ್ರಾಮಸ್ಥರ ಸಹಕಾರದಲ್ಲಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಮಾರಂಭ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪುಟ್ಟಣ್ಣಯ್ಯ ಪುತ್ಥಳಿಯನ್ನು ಸ್ಥಾಪಿಸಲಾಗುತ್ತಿದೆ. ಎಣ್ಣೆಹೊಳೆಕೊಪ್ಪಲು ಗ್ರಾಮಸ್ಥರು ಈ ಕಾರ‍್ಯಕ್ಕೆ ಸಹಕಾರ ನೀಡಿದ್ದಾರೆ. ಅಂದು ಬೆಳಗ್ಗೆ 10ಕ್ಕೆ ಕ್ಯಾತನಹಳ್ಳಿ ಗ್ರಾಮದಲ್ಲಿನ ಪುಟ್ಟಣ್ಣಯ್ಯ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಬೆಳಗ್ಗೆ 11ಕ್ಕೆ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಪುತ್ಥಳಿಯನ್ನು ಅನಾವರಣ ಮಾಡುವರು ಎಂದರು.

ಸ್ವರಾಜ್‌ ಇಂಡಿಯಾ ಪಕ್ಷದ ಅಧ್ಯಕ್ಷ ಪ್ರೊ.ಯೋಗೇಂದ್ರ ಯಾದವ್‌ ಕಾರ‍್ಯಕ್ರಮ ಉದ್ಘಾಟಿಸುವರು. ಎಣ್ಣೆಹೊಳೆಕೊಪ್ಪಲು ಗ್ರಾಮದ ಹಿರಿಯ ರೈತ ಮುಖಂಡ ವೈ.ಜಿ.ಬಾಲಕೃಷ್ಣೇಗೌಡ ಅಧ್ಯಕ್ಷತೆ ವಹಿಸುವರು. ರೈತಸಂಘದ ಪ್ರಧಾನ ಕಾರ‍್ಯದರ್ಶಿ ಬಡಗಲಪುರ ನಾಗೇಂದ್ರ ಪ್ರಾಸ್ತಾವಿಕ ಭಾಷಣ ಮಾಡುವರು. ಕೆಎಸ್‌ಪಿ ಕುರಿತು ಅವರ ಪುತ್ರ ಪಿ.ದರ್ಶನ್‌ ಪುಟ್ಟಣ್ಣಯ್ಯ ಮಾತನಾಡುವರು.

ಸಾಹಿತಿ ದೇವನೂರು ಮಹಾದೇವ, ಹಾಸನ ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು, ದಸಂಸ ಮುಖಂಡ ಗುರುಪ್ರಸಾದ್‌ ಕೆರೆಗೋಡು, ತಾ.ಪಂ. ಸದಸ್ಯೆ ಲಕ್ಷ್ಮಮ್ಮ ರಂಗಸ್ವಾಮಿ, ಗ್ರಾ.ಪಂ. ಸದಸ್ಯೆ ಗಾಯಿತ್ರಿ, ಚಿಂತಕ ಪರಶುರಾಮೇಗೌಡ, ಕರ್ನಾಟಕ ಜನಶಕ್ತಿ ಸಂಘಟನೆಯ ಡಾ.ವಾಸು, ಕೆಎಸ್‌ಪಿ ಪತ್ನಿ ಸುನಿತಾ ಪುಟ್ಟಣ್ಣಯ್ಯ, ಪುತ್ರಿಯರಾದ ಸ್ಮಿತಾ, ಅಕ್ಷತಾ, ರೈತಮುಖಂಡರಾದ ಚಾಮರಸ ಮಾಲೀ ಪಾಟೀಲ್‌, ಕೆ.ಟಿ.ಗಂಗಾಧರ್‌, ಚುಕ್ಕಿ ನಂಜುಂಡಸ್ವಾಮಿ, ನಂದಿನಿ ಜಯರಾಂ, ಕೆ.ಟಿ.ಗೋವಿಂದೇಗೌಡ ಸೇರಿದಂತೆ ಹಲವರು ಭಾಗವಹಿಸುವರು ಎಂದು ತಿಳಿಸಿದರು.

ಇದೇ ವೇಳೆ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗೋಪಾಲಕೃಷ್ಣೇಗೌಡ(ನಿವೃತ್ತ ಐಎಎಸ್‌ ಅಧಿಕಾರಿ), ಡಾ.ಶಂಕರೇಗೌಡ(ಚರ್ಮರೋಗ ತಜ್ಞ), ಮಂಜು(ರಾಷ್ಟ್ರ ಪ್ರಶಸ್ತಿ ಪುರಸ್ಕೃತ), ಪರಶುರಾಮ್‌(ಪತ್ರಿಕೋದ್ಯಮ), ರಮೇಶ್‌(ಪರಿಸರ), ದೇವರಾಜು, ಮನೋಹರ್‌(ಕೃಷಿ), ಗೋವಿಂದಪ್ಪ(ಕೂಲಿ ಕಾರ್ಮಿಕರು), ಗೋವಿಂದಣ್ಣ, ಪದ್ಮರಾಜ್‌(ಶವ ಸಂಸ್ಕಾರ ಮಾಡುವವರು), ರಂಗಮ್ಮ, ರಂಗಯ್ಯ(ಪೌರಕಾರ್ಮಿಕರು), ವೆಂಕಟೇಶ್‌(ತಬಲ), ಭೂಮೇಶ್‌(ಹಾಲು ಕರೆಯುವ ಕಾಯಕ), ಪುನೀತ್‌ಕುಮಾರ್‌(ಪಿಎಚ್‌ಡಿ), ದಾಸಣ್ಣ (ಮಡಿ ಮಾಡುವವರು), ಅಭಿಲಾಷ್‌, ಚಂದ್ರಪ್ರಭ, ನಿಂಗರಾಜು(ಕಲಾವಿದರು), ಚಿಕ್ಕತಿಮ್ಮಯ್ಯ(ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ), ಎನ್‌.ಮಹದೇವಪ್ಪ(ರಾಜ್ಯ ಪ್ರಶಸ್ತಿ ಪುರಸ್ಕೃತ), ಡಾ.ಶ್ರೀನಿವಾಸ್‌, ಶಂಕರ್‌(ಸಮಾಜಸೇವೆ), ದೇವೇಗೌಡ(ಸಾವಯವ ಕೃಷಿ), ಪಿ.ಹರ್ಷವರ್ಧನ(ಯುವ ಕೃಷಿಕ), ಸಿದ್ದೇಗೌಡ(ಶ್ರಮಿಕರು), ವೈರಮುಡಿ(ತಮಟೆ), ಗೌರಮ್ಮ(ನಾಟಿ ಮಾಡುವ ಕಾಯಕ), ಯೋಗಿರಾಜ್‌(ಶಿಲ್ಪಿ), ನವೀನ್‌ ಸಂಗಾಪುರ(ರೇಷ್ಮೆ ಕೃಷಿ), ಎಚ್‌.ವೈ.ಚಕ್ರಪಾಣಿ(ಪ್ರಗತಿಪರ ಕೃಷಿ) ಅವರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ವಿವರಿಸಿದರು.

ನಾಮಕರಣಕ್ಕೆ ಒತ್ತಾಯ: ಮಂಡ್ಯದ ಯಾವುದಾದರೊಂದು ವೃತ್ತ ಹಾಗೂ ವಿ.ಸಿ.ಫಾರ್ಮ್‌ ಸಭಾಂಗಣಕ್ಕೆ ಕೆ.ಎಸ್‌.ಪುಟ್ಟಣ್ಣಯ್ಯ ಅವರ ಹೆಸರಿಡಬೇಕು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆ.ಎಸ್‌.ಪುಟ್ಟಣ್ಣಯ್ಯ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಬಡಗಲಪುರ ನಾಗೇಂದ್ರ ಒತ್ತಾಯಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷ ಎಸ್‌.ಸುರೇಶ್‌, ರೈತಸಂಘದ ರಾಜ್ಯ ಕಾರ‍್ಯದರ್ಶಿ ಗೋಪಾಲ್‌, ಜಿ.ಪಂ. ಮಾಜಿ ಸದಸ್ಯ ಎ.ಎಲ್‌.ಕೆಂಪೂಗೌಡ, ರೈತಮುಖಂಡರಾದ ರಾಮಕೃಷ್ಣಯ್ಯ, ಲತಾ ಶಂಕರ್‌, ಎಣ್ಣೆಹೊಳೆಕೊಪ್ಪಲು ಮಂಜುನಾಥ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ