ಆ್ಯಪ್ನಗರ

ಮೀನಿನ ಬಲೆಯಲ್ಲಿ ಹೆಬ್ಬಾವು..! ಕೆರೆಯ ಮಧ್ಯದಲ್ಲಿ ಒದ್ದಾಡುತ್ತಿದ್ದ ಉರಗ ರಕ್ಷಿಸಿದ ಗ್ರಾಮಸ್ಥರು

ಮೀನುಗಾರರು ಗ್ರಾಮಕ್ಕೆ ಹೋಗಿ ವಿಷಯ ತಿಳಿಸಿ ಬರುವಷ್ಟರಲ್ಲಿ ಬಲೆಯನ್ನು ಎಳೆದುಕೊಂಡು ಹೆಬ್ಬಾವು ಕೆರೆಯ ಮಧ್ಯಕ್ಕೆ ಹೋಗಿದೆ. ಇತ್ತ ಹೊರಗೂ ಬರಲಾರದೆ, ಒಳಗೂ ಇರಲಾರದೆ ನರಕ ಯಾತನೆ ಅನುಭವಿಸುತ್ತಿತ್ತು.

Vijaya Karnataka Web 19 Jan 2020, 6:24 pm
ಭಾರತೀನಗರ (ಮಂಡ್ಯ): ಮದ್ದೂರು ತಾಲೂಕು ಕಾಡುಕೊತ್ತನಹಳ್ಳಿಯ ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಹೆಬ್ಬಾವೊಂದು ಸಿಲುಕಿತ್ತು. ಅಪಾಯದಲ್ಲಿದ್ದ ಬೃಹತ್‌ ಗಾತ್ರದ ಹೆಬ್ಬಾವನ್ನು ಗ್ರಾಮಸ್ಥರು ರಕ್ಷಿಸಿದರು. ಮದ್ದೂರಿನ ಉರಗಪ್ರೇಮಿ ಮಾ.ನ. ಪ್ರಸನ್ನಕುಮಾರ್‌ ಅವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ 10 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
Vijaya Karnataka Web mnd sneak
ಮೀನಿನ ಬಲೆಯಲ್ಲಿ ಹೆಬ್ಬಾವು..! ಕೆರೆಯ ಮಧ್ಯದಲ್ಲಿ ಒದ್ದಾಡುತ್ತಿದ್ದ ಉರಗ ರಕ್ಷಿಸಿದ ಗ್ರಾಮಸ್ಥರು


ಘಟನೆ ವಿವರ: ಗ್ರಾಮದ ಮಹೇಶ್‌ ಎಂಬುವರು ಕೆರೆಯನ್ನು ಗುತ್ತಿಗೆ ಪಡೆದಿದ್ದು, ಮೀನುಗಾರರು ಮೀನು ಹಿಡಿಯಲು ಕೆರೆಯಲ್ಲಿ ಬಲೆ ಹಾಕಿದ್ದರು. ಎಂದಿನಂತೆ ತೆರಳಿ ಮೀನಿನ ಬಲೆಯನ್ನು ಎಳೆದಿದ್ದಾರೆ. ಅಧಿಕ ಭಾರವಿದ್ದ ಕಾರಣ ಎಳೆಯಲು ಸಾಧ್ಯವಾಗಿಲ್ಲ. ಇದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ಬಲೆಗೆ ಹೆಬ್ಬಾವು ಸಿಲುಕಿಕೊಂಡಿತ್ತು. ಮೀನುಗಾರರು ಗ್ರಾಮಕ್ಕೆ ಹೋಗಿ ವಿಷಯ ತಿಳಿಸಿ ಬರುವಷ್ಟರಲ್ಲಿ ಬಲೆಯನ್ನು ಎಳೆದುಕೊಂಡು ಹೆಬ್ಬಾವು ಕೆರೆಯ ಮಧ್ಯಕ್ಕೆ ಹೋಗಿದೆ. ಇತ್ತ ಹೊರಗೂ ಬರಲಾರದೆ, ಒಳಗೂ ಇರಲಾರದೆ ನರಕ ಯಾತನೆ ಅನುಭವಿಸುತ್ತಿತ್ತು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ತೆಪ್ಪದ ಮೂಲಕ ಕೆರೆಯ ಮಧ್ಯೆ ತೆರಳಿ ಹೆಬ್ಬಾವು ರಕ್ಷಣೆಗೆ ಮುಂದಾದರೂ ಸಾಧ್ಯವಾಗಿಲ್ಲ. ಬಳಿಕ ಉರಗ ಪ್ರೇಮಿ ಮಾ.ನ. ಪ್ರಸನ್ನಕುಮಾರ್‌ ಅವರನ್ನು ಕರೆಸಿ ಹಾವನ್ನು ರಕ್ಷಿಸಲಾಗಿದೆ. ನಂತರ ಅರಣ್ಯ ಸಿಬ್ಬಂದಿ ಜತೆ ತೆರಳಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

20 ಕೆ.ಜಿ ತೂಕದ ಹೆಬ್ಬಾವನ್ನು ರಕ್ಷಿಸಿದ ಮಹಿಳೆ : ಸಾಹಸಕ್ಕೆ ನೆಟ್ಟಿಗರು ಫಿದಾ : ಇಲ್ಲಿದೆ ವಿಡಿಯೋ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ