ಆ್ಯಪ್ನಗರ

ಅಂಗನವಾಡಿ ಗೋದಾಮಿನಲ್ಲಿ ಆಹಾರ ಅಕ್ರಮ ದಾಸ್ತಾನು

ಅಂಗನವಾಡಿಗಳಿಗೆ ಪೂರೈಕೆ ಮಾಡುವ ಪೌಷ್ಟಿಕಾಂಶ ಆಹಾರ ಪದಾರ್ಥದ ಗೋದಾಮಿನಲ್ಲಿ ಅಕ್ರಮ ದಾಸ್ತಾನು ಮಾಡಲಾಗಿದೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ಪಾಂಡವಪುರದಲ್ಲಿರುವ ಗೋದಾಮಿನ ಮೇಲೆ ಉಪ ವಿಭಾಗಾಧಿಕಾರಿ‌ ಮತ್ತು ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ.

Vijaya Karnataka Web 5 Mar 2018, 4:14 pm
ಮಂಡ್ಯ: ಅಂಗನವಾಡಿಗಳಿಗೆ ಪೂರೈಕೆ ಮಾಡುವ ಪೌಷ್ಟಿಕಾಂಶ ಆಹಾರ ಪದಾರ್ಥದ ಗೋದಾಮಿನಲ್ಲಿ ಅಕ್ರಮ ದಾಸ್ತಾನು ಮಾಡಲಾಗಿದೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ಪಾಂಡವಪುರದಲ್ಲಿರುವ ಗೋದಾಮಿನ ಮೇಲೆ ಉಪ ವಿಭಾಗಾಧಿಕಾರಿ‌ ಮತ್ತು ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ.
Vijaya Karnataka Web raid to anganwadi godown
ಅಂಗನವಾಡಿ ಗೋದಾಮಿನಲ್ಲಿ ಆಹಾರ ಅಕ್ರಮ ದಾಸ್ತಾನು


ಅಧಿಕಾರಿಗಳ ದಾಳಿಯ ವೇಳೆ ಗೋದಾಮಿನಲ್ಲಿ ನಲ್ವತ್ತು ಟನ್‌ಗೂ ಹೆಚ್ಚಿನ ಆಹಾರ ಪದಾರ್ಥ ದಾಸ್ತಾನು ಪತ್ತೆಯಾಗಿದೆ. ಈ ಗೋದಾಮಿನಿಂದ ಕೆ.ಆರ್‌.ಪೇಟೆ ಮತ್ತು ಪಾಂಡವಪುರ ತಾಲೂಕಿನ ಅಂಗನವಾಡಿಗಳಿಗೆ ಆಹಾರ ಪದಾರ್ಥ ಪೂರೈಕೆಯಾಗುತ್ತಿದೆ. ಗೋದಾಮಿನಲ್ಲಿ ಅಕ್ರಮ ದಾಸ್ತಾನಿರುವ ಬಗ್ಗೆ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಗೋದಾಮಿನಲ್ಲಿ ಗೋಧಿ, ಬೇಳೆ, ಮೈದಾ ಸೇರಿ, ರವೆ ಅಪಾರ ಪ್ರಮಾಣದಲ್ಲಿ ಪತ್ತೆಯಾಗಿದೆ. ಅಧಿಕಾರಿಗಳ ತಂಡ ಗೋದಾಮಿನ ವ್ಯವಸ್ಥಾಪಕರಿಂದ ಸಮಗ್ರ ಮತ್ತು ಸಮರ್ಪಕ ಮಾಹಿತಿ ಪಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ