ಆ್ಯಪ್ನಗರ

ರಾಜ್ಯೋತ್ಸವ ಆಚರಿಸದ ಗ್ರಾಪಂ ಎದುರು ಪ್ರತಿಭಟನೆ

ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಕನ್ನಡ ರಾಜ್ಯೋತ್ಸವ ಆಚರಣೆ ಮಾಡದ ಕ್ರಮ ಖಂಡಿಸಿ ಗ್ರಾಮದ ಯುವಕರು ಕಚೇರಿ ಎದುರು ಕನ್ನಡ ಬಾವುಟ ಹಿಡಿದು ಶುಕ್ರವಾರ ಪ್ರತಿಭಟನೆ ...

Vijaya Karnataka 2 Nov 2019, 5:00 am
ಶ್ರೀರಂಗಪಟ್ಟಣ: ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಕನ್ನಡ ರಾಜ್ಯೋತ್ಸವ ಆಚರಣೆ ಮಾಡದ ಕ್ರಮ ಖಂಡಿಸಿ ಗ್ರಾಮದ ಯುವಕರು ಕಚೇರಿ ಎದುರು ಕನ್ನಡ ಬಾವುಟ ಹಿಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web rajyothsava protest against gp
ರಾಜ್ಯೋತ್ಸವ ಆಚರಿಸದ ಗ್ರಾಪಂ ಎದುರು ಪ್ರತಿಭಟನೆ


ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನ ಕಾರರು, ಗ್ರಾ.ಪಂ. ಪಿಡಿಒ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಅರ್ಧ ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಕನ್ನಡ ರಾಜ್ಯೋತ್ಸವ ನಾಡಹಬ್ಬ ಎಲ್ಲಾಸರಕಾರಿ ಕಚೇರಿಗಳಲ್ಲಿಯೂ ನಾಡಹಬ್ಬ ಆಚರಣೆ ಮಾಡಬೇಕು. ಗ್ರಾ.ಪಂ. ಪಿಡಿಒ ಹಾಗೂ ಕಾರ‍್ಯದರ್ಶಿ ಕಚೇರಿಯಲ್ಲಿಕನ್ನಡ ರಾಜ್ಯೋತ್ಸವ ಆಚರಣೆ ಮಾಡಿಲ್ಲ. ಇದು ನಾಡಹಬ್ಬಕ್ಕೆ ಮಾಡಿದ ಅವಮಾನ. ಗ್ರಾಪಂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿಲ್ಲ. ಸಂಬಂಧಪಟ್ಟ ಕನ್ನಡ ರಾಜ್ಯೋತ್ಸವ ಆಚರಣೆ ಮಾಡದ ಗ್ರಾ.ಪಂ.ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಧ್ರುವ, ಕರೀಗೌಡ, ರಕ್ಷಿತ್‌, ನಂದೀಶ್‌ ಇತರರು ಹಾಜರಿದ್ದರು. ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿ ಕಚೇರಿ ಪಿಡಿಒ ಅಧಿಕೃತವಾಗಿ ರಜೆ ತೆಗೆದುಕೊಂಡಿದ್ದಾರೆ. ಅಲ್ಲಿನ ಕಾರ‍್ಯದರ್ಶಿ ಹಾಗೂ ಸಿಬ್ಬಂದಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕಿತ್ತು. ಗ್ರಾ.ಪಂ ಕಚೇರಿಯಲ್ಲಿಕನ್ನಡ ರಾಜ್ಯೋತ್ಸವ ಆಚರಣೆ ಮಾಡದ ಸಂಬಂಧ ದೂರುಗಳು ಬಂದಿವೆ ಗ್ರಾ.ಪಂ ಕಾರ‍್ಯದರ್ಶಿಗೆ ಕಾರಣ ಕೇಳಿ ನೋಟಿಸ್‌ ನೀಡುತ್ತೇನೆ. ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಾ.ಪಂ. ಕಾರ‍್ಯ ನಿರ್ವ ಹಣಾಧಿಕಾರಿ ನಾಗವೇಣಿ ವಿಜಯಕರ್ನಾಟಕಕ್ಕೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ