ಆ್ಯಪ್ನಗರ

ಆರ್‌ಸಿಇಪಿ ವಿರೋಧಿಸಿ ನಾಳೆ ಧರಣಿ

ವಿಕ ಸುದ್ದಿಲೋಕ ಮಂಡ್ಯ ಪ್ರಾದೇಶಿಕ ಆರ್ಥಿಕ ಸಹಭಾಗಿತ್ವಕ್ಕೆ ಈಗಾಗಲೆ ಸಹಿ ಹಾಕಲು ಮುಂದಾಗಿರುವ ಕೇಂದ್ರ ಸರಕಾರದ ನಡೆ ರೈತರಿಗೆ ಕಂಟಕವಾಗಲಿದೆ ಇದನ್ನು ವಿರೋಧಿಸಿ ಅ...

Vijaya Karnataka 30 Oct 2019, 5:00 am
ಮಂಡ್ಯ: ಪ್ರಾದೇಶಿಕ ಆರ್ಥಿಕ ಸಹಭಾಗಿತ್ವಕ್ಕೆ ಈಗಾಗಲೆ ಸಹಿ ಹಾಕಲು ಮುಂದಾಗಿರುವ ಕೇಂದ್ರ ಸರಕಾರದ ನಡೆ ರೈತರಿಗೆ ಕಂಟಕವಾಗಲಿದೆ. ಇದನ್ನು ವಿರೋಧಿಸಿ ಅ.31 ರಂದು ನಗರದಲ್ಲಿಪ್ರತಿಭಟನೆ ನಡೆಸಲಾಗುವುದು ಎಂದು ಮನ್‌ಮುಲ್‌ ಅಧ್ಯಕ್ಷ ರಾಮಚಂದ್ರ ಹೇಳಿದರು.
Vijaya Karnataka Web rally tomorrow against the rcep in mandya
ಆರ್‌ಸಿಇಪಿ ವಿರೋಧಿಸಿ ನಾಳೆ ಧರಣಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕದಂತೆ ಒತ್ತಾಯಿಸಿ ಮನ್‌ಮುಲ್‌ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಇತರೆ ಸಂಸ್ಥೆಗಳಿಂದ ಪ್ರತಿಭಟನೆ ನಡೆಸ ಲಾಗುವುದು. ಅಂದು ಬೆಳಗ್ಗೆ 11 ಕ್ಕೆ ಸಿಲ್ವರ್‌ ಜ್ಯೂಬಿಲಿ ಪಾರ್ಕ್ನಲ್ಲಿಸಾವಿ ರಾರು ಸಂಖ್ಯೆಯಲ್ಲಿಜನರು ಸೇರಲಿ ದ್ದಾರೆ. ನಂತರ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿಸಾಗಿ, ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನಾ ರಾರ‍ಯಲಿ ಮಾಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿತಿಳಿಸಿದರು. ಹಾಲು ಉತ್ಪಾದಕರಿಗೆ ಮರಣ ಶಾಸನವಾ ಗಲಿರುವ ಆರ್‌ಸಿಇಪಿ ಒಪ್ಪಂದಕ್ಕೆ ಯಾವುದೇ ಕಾರಣಕ್ಕೂ ಸಹಿ ಹಾಕಬಾರದು.
ಈಗಾಗಲೇ ಹೈನುಗಾರಿಕೆ ನಂಬಿಕೊಂಡಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಒಪ್ಪಂದದಿಂದ ಇನ್ನಷ್ಟು ಸಂಕಷ್ಟಕ್ಕೆ ಸಿಲಿಕಿಸುವ ಹುನ್ನಾರ ಮಾಡುವ ಪರಿ ಬಿಡಬೇಕು. ಜಿಲ್ಲೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಮಾರಾಟ ಪ್ರತಿನಿಧಿಗಳು ಪ್ರತಿಭಟನೆಯಲ್ಲಿಪಾಲ್ಗೊಳ್ಳುವಂತೆ ಈಗಾಗಲೇ ಆಹ್ವಾನ ನೀಡಲಾಗಿದೆ. ಬೃಹತ್‌ ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದರು.
ರೈತೋತ್ಪನ್ನಗಳನ್ನು ವಿದೇಶ ದಿಂದ ಆಮದು ಮಾಡಿಕೊಳ್ಳುವ ಕೆಲಸಕ್ಕೆ ಮುಂದಾಗಿರುವ ಕ್ರಮ ಕೈಬಿಡಬೇಕು. ಹೈನುಗಾರಿಕೆ ವಿದೇಶ ದಿಂದ ಆಮದು ಮಾಡಿಕೊಳ್ಳುವ ಉದ್ಯಮದಲ್ಲಿಮುಂದಿರುವ ನ್ಯೂಜಿಲ್ಯಾಂಡ್‌ ದೇಶಗಳಿಂದ ಯಾವುದೇ ತೆರಿಗೆ ಇಲ್ಲದೆ ಹಾಲು, ಬೆಣ್ಣೆ, ಚೀಸ್‌, ಹಾಲಿನಪುಡಿ ಉತ್ಪನ್ನಗಳು ಭಾರತಕ್ಕೆ ಭಾರೀ ಪ್ರಮಾಣದಲ್ಲಿಬರಲಿದೆ. ಇದರಿಂದ ಇಲ್ಲಿನ ಹಾಲು ಉತ್ಪಾದಕರು ತತ್ತರಿಸಲಿದ್ದಾರೆ. ಕೃಷಿ ಹಾಗೂ ಹೈನು ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿಮನ್‌ಮುಲ್‌ ನಿರ್ದೇಶಕರಾದ ಯು.ಸಿ.ಶಿವಕುಮಾರ್‌, ಬೋರೇಗೌಡ, ಕೆ.ರವಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ