ಆ್ಯಪ್ನಗರ

ಕಿಸಾನ್‌ ಮಾನ್‌ಧನ್‌ ರೈತ ಪಿಂಚಣಿಗೆ ನೋಂದಾಯಿಸಿ

ಕೇಂದ್ರ ಸರಕಾರ ಕಿಸಾನ್‌ ಮಾನ್‌ಧನ್‌ ರೈತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹೇಳಿದರು.

Vijaya Karnataka 14 Sep 2019, 5:00 am
ಪಾಂಡವಪುರ: ಕೇಂದ್ರ ಸರಕಾರ ಕಿಸಾನ್‌ ಮಾನ್‌ಧನ್‌ ರೈತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹೇಳಿದರು.
Vijaya Karnataka Web 13PND02_17


ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿತಾಪಂ ಅಧ್ಯಕ್ಷೆ ಸುಮಲತಾ ಮಹೇಶ್‌ ಅಧ್ಯಕ್ಷತೆಯಲ್ಲಿಶುಕ್ರವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿಇಲಾಖೆಯ ಪ್ರಗತಿ ವಿವರವನ್ನು ನೀಡಿದರು.

ಕಿಸಾನ್‌ ಮಾನ್‌ಧನ್‌ ರೈತ ಪಿಂಚಣಿ ಯೋಜನೆಯಲ್ಲಿ18-40 ವರ್ಷದ ಒಳಗಿನ, ಆರ್‌ಟಿಸಿ ಹೊಂದಿರುವ, 5 ಎಕರೆ ಒಳಗಿನ ಸಣ್ಣ ಹಿಡುವಳಿ ರೈತರು ಸಾಮಾನ್ಯ ನಾಗರಿಕ ಸೇವಾ ಕೇಂದ್ರಗಳಿಗೆ ತೆರಳಿ ತಮ್ಮ ಹಸೆರನ್ನು ನೋಂದಣಿ ಮಾಡಿಸಿಕೊಂಡರೆ 60 ವರ್ಷದ ನಂತರ ಆ ರೈತರಿಗೆ ಪ್ರತಿ ತಿಂಗಳು 3 ಸಾವಿರ ರೂ.ಪಿಂಚಣಿ ಸೌಲಭ್ಯ ದೊರೆಯಲಿದೆ. ಆದ್ದರಿಂದ ಪ್ರತಿಯೊಬ್ಬ ರೈತರು ಕಿಸಾನ್‌ ಮಾನ್‌ಧನ್‌ ಪಿಂಚಣಿ ಯೋಜನೆ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ತಾಪಂ ಇಒ ಆರ್‌.ಪಿ.ಮಹೇಶ್‌ ಮಾತನಾಡಿ, ತಾಲೂಕಿನ ಜಕ್ಕನಹಳ್ಳಿ ಹಾಗೂ ಮೇಲುಕೋಟೆ ಭಾಗದ ಹಳ್ಳಿಗಳಲ್ಲಿಕೋತಿಗಳ ಹಾವಳಿ ಹೆಚ್ಚಾಗಿವೆ. ಇದರಿಂದ ಮನೆಯಲ್ಲಿಯಾವುದೇ ವಸ್ತುಗಳನ್ನು ಇಡಲು ಬಿಡುತ್ತಿಲ್ಲ. ಹಾಗಾಗಿ ಕೋತಿಗಳನ್ನು ಹಿಡಿದು ಬೇರೆಗೆ ಬಿಡುವಂತೆ ಆ ಭಾಗದ ಗ್ರಾಮಗಳ ರೈತರು, ಸಾರ್ವಜನಿಕರು ನನಗೆ ದೂರು ಸಲ್ಲಿಸಿದ್ದಾರೆ. ಹಾಗಾಗಿ ಈ ಬಗ್ಗೆ ಕ್ರಮತೆಗೆದುಕೊಳ್ಳಿ ಎಂದು ವಲಯ ಅರಣ್ಯಾಧಿಕಾರಿ ಅನಿತಾ ಅವರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಅನಿತಾ ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚೆರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಅಲ್ಲದೆ ಅರಣ್ಯ ಇಲಾಖೆಗಳಿಂದ ಮರಗಳನ್ನು ಬೆಳೆಸಿ ಪ್ಲಾಂಟೇಷನ್‌ ಮಾಡುವುದಕ್ಕಾಗಿ ರೈತರಿಗೆ ನೀಡಲಾಗುತ್ತಿದೆ. ಗಿಡಗಳ ಅವಶ್ಯಕತೆ ಇರುವ ರೈತರು ಗಿಡಗಳನ್ನು ಪಡೆದು ನಾಟಿ ಮಾಡಿ, ಇಲ್ಲಖಾಲಿ ಜಾಗ ಇರುವ ರೈತರು ನಮಗೆ ಮನವಿ ಸಲ್ಲಿಸಿದರೆ ನಾವೇ ಗಿಡಗಳನ್ನು ನಾಟಿ ಮಾಡಿಸುತ್ತೇವೆ ಎಂದರು.

''ಕೆಆರ್‌ಎಸ್‌ ಹಿನ್ನೀರು ಹಾಗೂ ನಾಲೆಗಳ ಬದಿಯಲ್ಲಿಗಿಡಗಳನ್ನು ನಾಟಿ ಮಾಡುವಂತೆ ಹೀಗಾಗಲೇ ಸೂಚನೆ ಬಂದಿದೆ. ಆದ್ದರಿಂದ ತೋಟಗಾರಿಗೆ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಆ ಪ್ರದೇಶದಲ್ಲಿಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ತೋಟಗಾರಿಗೆ ಇಲಾಖೆಯಿಂದ ಹಣ್ಣಿನ ಗಿಡಗಳನ್ನು ನೆಟ್ಟರೆ ಅನುಕೂಲವಾಗುತ್ತದೆ''ಎಂದು ಇಒ ಆರ್‌.ಪಿ.ಮಹೇಶ್‌ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಗೆ ಹಲವು ಗ್ರಾಮಗಳಲ್ಲಿಅಂಗನವಾಡಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಭೂಮಿ ನೀಡಿದ್ದರೂ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಇದುವರೆಗೂ ಏಕೆ ಮುಂದಾಗಿಲ್ಲ. ಕೆಲವು ಅಂಗನವಾಡಿಗಳು ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆಗಳಲ್ಲಿಇಲ್ಲಎಂಬುವುದರ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಕ್ರಮತೆಗೆದುಕೊಳ್ಳಿ ಎಂದು ಇಒ ಮಹೇಶ್‌ ಸಿಡಿಪಿಒ ಕಚೇರಿ ಮೇಲ್ವಿಚಾರಿಕಿಗೆ ತಾಕೀತು ಮಾಡಿದರು.

ಸೆಸ್ಕ್‌ ಎಇಇ ವಿ.ಪುಟ್ಟಸ್ವಾಮಿ ಮಾತನಾಡಿ, ಸೆಸ್ಕ್‌ ಇಲಾಖೆಯಿಂದ ಬಿಪಿಎಲ್‌ ಕಾರ್ಡ್‌ ಹೊಂದಿರುವ ಸುಮಾರು 8800 ಮಂದಿಗೆ 40 ಯೂನಿಟ್‌ ಮಿತಿಗೊಳಿಸಿ ವಿದ್ಯುತ್‌ ನೀಡಲಾಗುತ್ತಿದೆ. 7800 ರೈತರಿಗೆ ನಿತ್ಯ 7 ಗಂಟೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಉಜ್ವಲ ಯೋಜನೆಯಡಿ 165 ರೂ. ಬೆಲೆಬಾಳುವ ವಿದ್ಯುತ್‌ ಬಲ್ಪ್‌ಗಳನ್ನು ಕೇವಲ 70 ರೂ.ಗೆ ಮಾರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ ಮಹೇಶ್‌ ಸರ್ವೇ ನಂಬರ್‌ ಭೂಮಿಯಲ್ಲಿಮನೆಗಳನ್ನು ನಿರ್ಮಿಸುವ ರೈತರಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಬಗ್ಗೆ ಖುದ್ದು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿ ನಂತರ ವಿದ್ಯುತ್‌ ಸಂಪರ್ಕ ಕಲ್ಪಿಸಿ ಎಂದು ಸೂಚಿಸಿದರು.

ಇಒ ಮಹೇಶ್‌ ಮಾತನಾಡಿ, ಎಲ್ಲಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗೆ ನಿಗದಿಪಡಿಸಿರುವ ಗುರಿಗಳನ್ನು ತಲುಪುವ ನಿಟ್ಟಿನಲ್ಲಿಕೆಲಸ ಮಾಡಬೇಕು ಎಂದು ಸೂಚಿಸಿದರು.

ತಾಪಂನಲ್ಲಿಬಸವ ವಸತಿ ಯೋಜನೆಯಡಿ 480 ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳನ್ನು ಆಯ್ಕೆಮಾಡಿ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ನರೇಗಾ ಯೋಜನೆಯಲ್ಲಿಶೇ.48 ರಷ್ಟು ಪ್ರಗತಿ ಸಾಧಿಸಿದ್ದೇವೆ. ತಾಪಂಗೆ 2 ಕೋಟಿ ರೂ. ಅನುದಾನ ಬಂದಿದ್ದೂ ಎಲ್ಲದಕ್ಕೂ ಕ್ರಿಯಾ ಯೋಜನೆ ತಯಾರಿಸಲಾಗಿದೆ. ತಾಲೂಕಿನಲ್ಲಿರುವ 24 ಗ್ರಾಪಂ ವ್ಯಾಪ್ತಿಯಲ್ಲೂಸಹ ಕುಡಿಯುವ ನೀರಿಗೆ ಯಾವುದೇ ತೊಂದರೆ ಎದುರಾಗದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿಆರೋಗ್ಯ, ತೋಟಗಾರಿಕೆ, ಶಿಕ್ಷಣ, ಸಮಾಜಕಲ್ಯಾಣ, ಹಿಂದುಳಿದ ವರ್ಗ, ರೇಷ್ಮೆ, ಹೇಮಾವತಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ವಿವರವನ್ನು ಅಧಿಕಾರಿಗಳು ಸಭೆಗೆ ವಿವವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ