ಆ್ಯಪ್ನಗರ

ರಕ್ತದೊತ್ತಡಕ್ಕೆ ಬೇಸತ್ತು ನಿವೃತ್ತ ನೌಕರ ನೇಣಿಗೆ ಶರಣು

ರಕ್ತದೊತ್ತಡಕ್ಕೆ ಬೇಸತ್ತು ನಿವೃತ್ತ ನೌಕರ ನೇಣಿಗೆ ಶರಣು ವಿಕ ಸುದ್ದಿಲೋಕ ಶ್ರೀರಂಗಪಟ್ಟಣ (ಮಂಡ್ಯ) ಪಟ್ಟಣದ ಲಾಡ್ಜ್‌ವೊಂದರಲ್ಲಿ ಕೆಪಿಟಿಸಿಎಲ್‌ ನಿವೃತ್ತ ನೌಕರರೊಬ್ಬರು ...

Vijaya Karnataka 21 Jun 2018, 5:00 am
ಶ್ರೀರಂಗಪಟ್ಟಣ (ಮಂಡ್ಯ): ಪಟ್ಟಣದ ಲಾಡ್ಜ್‌ವೊಂದರಲ್ಲಿ ಕೆಪಿಟಿಸಿಎಲ್‌ ನಿವೃತ್ತ ನೌಕರರೊಬ್ಬರು ಬುಧವಾರ ನೇಣಿಗೆ ಶರಣಾಗಿದ್ದಾರೆ.
Vijaya Karnataka Web retired government employee suicide in srirangapattana
ರಕ್ತದೊತ್ತಡಕ್ಕೆ ಬೇಸತ್ತು ನಿವೃತ್ತ ನೌಕರ ನೇಣಿಗೆ ಶರಣು


ಕೆಪಿಟಿಸಿಎಲ್‌ ನಿವೃತ್ತ ನೌಕರ ರಾಮಕೃಷ್ಣ (70) ಮೃತ. ಪಟ್ಟಣದ ಲಾv್ಜ…ನಲ್ಲಿ ಮಂಗಳವಾರ ರಾತ್ರಿ ಕೊಠಡಿ ಪಡೆದು ಉಳಿದುಕೊಂಡಿದ್ದ ರಾಮಕೃಷ್ಣ ಅವರು, ತಾನು ತಂಗಿದ್ದ ಕೊಠಡಿಯಲ್ಲಿ ಬುಧವಾರ ಮುಂಜಾನೆ ನೇಣಿಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಲಾಡ್ಜ್‌ನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಕೆಳಗಿಳಿಸಿ, ಶವ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸಿದರು.

''ಹಲವು ವರ್ಷಗಳಿಂದ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಾವಿಗೂ ಮುನ್ನ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ತಮ್ಮ ಅಂತ್ಯಕ್ರಿಯೆ ವೈದ್ದಿಕ ಕಾರ‍್ಯವನ್ನು ಭಾನುಪ್ರಕಾಶ್‌ ಶರ್ಮಾ ಅವರಿಂದಲೇ ಮಾಡಿಸಬೇಕು ಎಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,'' ಎಂದು ಪೋಲಿಸರು ತಿಳಿಸಿದ್ದಾರೆ. ಮೃತರ ಪುತ್ರಿ ಕೆ.ಆರ್‌.ಆಸ್ಪತ್ರೆಯಲ್ಲಿ ನೇತ್ರ ತಜ್ಞ ವೈದ್ಯರಾಗಿದ್ದು, ಅಳಿಯ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಡಿಯೋಲಾಜಿಸ್ವ್‌ ವೈದ್ಯ ಎಂದು ತಿಳಿದುಬಂದಿದೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ