ಮಳವಳ್ಳಿ: ಆಟೋರಿಕ್ಷಾ ಡಿಕ್ಕಿಯೊಡೆದು ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾದ ಚಾಲಕನಿಗೆ ಇಲ್ಲಿನ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.
ತಾಲೂಕಿನ ಕಿರುಗಾವಲಿನ ಆಟೋರಿಕ್ಷಾ ಚಾಲಕ ಬಸವರಾಜು ಶಿಕ್ಷೆಗೊಳಗಾದವ.
ಕಿರುಗಾವಲು ಬಳಿ ಸೆ.13, 2015 ರಂದು ರಸ್ತೆ ಎಡಭಾಗದಲ್ಲಿ ವಿಜಯಕುಮಾರ್ ಹಾಗೂ ಮತ್ತಿಬ್ಬರು ಮಾತನಾಡುತ್ತ ನಿಂತಿದ್ದಾಗ ಆಟೋ ಡಿಕ್ಕಿ ಹೊಡೆದ ಪರಿಣಾಮ ವಿಜಯಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದರು. ಮತ್ತಿಬ್ಬರು ಗಾಯಗೊಂಡಿದ್ದರು. ಚಾಲಕನ ಅತಿವೇಗ ಹಾಗೂ ಅಜಾಗರೂಕತೆನಿಂದ ಅಪಘಾತವಾಗಿದೆ ಎಂದು ಸಿಪಿಐ ಎಸ್.ಕೆ ರಮೇಶ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಸರಕಾರಿ ವಕೀಲರಾದ ಅನುಪಮಾ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ವಿ.ಪ್ರಕಾಶ ಅವರು, ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.