ಆ್ಯಪ್ನಗರ

10 ಕಿ.ಮೀ.ಯೊಳಗಿನ ಕಬ್ಬು ಸಾಗಣೆಗೆ 113ರೂ.

ಮಂಡ್ಯ : ಮೈಸೂರು ಸಕ್ಕರೆ ಕಂಪನಿ(ಮೈಷುಗರ್‌) ಕಬ್ಬು ಸರಬರಾಜು ಮಾಡುವ ಸಾಗಣೆ ದರವನ್ನು ನಿಗದಿ ಮಾಡುವ ಸಲುವಾಗಿ ಪ್ರಧಾನ ವ್ಯವಸ್ಥಾಪಕರ ಕಚೇರಿಯಲ್ಲಿ ಲಾರಿ ಮತ್ತು ಟ್ರ್ಯಾಕ್ಟರ್‌ ಮಾಲೀಕರು, ರೈತ ಪ್ರತಿನಿಧಿಗಳ ಸಭೆ ನಡೆಯಿತು.

Vijaya Karnataka 25 Aug 2018, 5:00 am
ಮಂಡ್ಯ : ಮೈಸೂರು ಸಕ್ಕರೆ ಕಂಪನಿ(ಮೈಷುಗರ್‌) ಕಬ್ಬು ಸರಬರಾಜು ಮಾಡುವ ಸಾಗಣೆ ದರವನ್ನು ನಿಗದಿ ಮಾಡುವ ಸಲುವಾಗಿ ಪ್ರಧಾನ ವ್ಯವಸ್ಥಾಪಕರ ಕಚೇರಿಯಲ್ಲಿ ಲಾರಿ ಮತ್ತು ಟ್ರ್ಯಾಕ್ಟರ್‌ ಮಾಲೀಕರು, ರೈತ ಪ್ರತಿನಿಧಿಗಳ ಸಭೆ ನಡೆಯಿತು.
Vijaya Karnataka Web rs 113 for sugarcane transport within 10 km
10 ಕಿ.ಮೀ.ಯೊಳಗಿನ ಕಬ್ಬು ಸಾಗಣೆಗೆ 113ರೂ.


ಸಭೆಯಲ್ಲಿ ಪ್ರಸಕ್ತ ಸಾಲಿನ ಸಾಗಣೆ ದರ ನಿಗದಿ ಮಾಡಲಾಯಿತು. 1 ರಿಂದ 10 ಕಿ.ಮೀ ವ್ಯಾಪ್ತಿಗೆ 113 ರೂ., 10ರಿಂದ 15 ಕಿ.ಮೀ ವ್ಯಾಪ್ತಿಗೆ 135 ರೂ., 15ರಿಂದ 20 ಕಿ.ಮೀ ವ್ಯಾಪ್ತಿಗೆ 155 ರೂ., 20ರಿಂದ 25 ಕಿ.ಮೀ ವ್ಯಾಪ್ತಿಗೆ 177 ರೂ., 25ರಿಂದ 30 ಕಿ.ಮೀ ವ್ಯಾಪ್ತಿಗೆ 195 ರೂ., 30 ಕೀ.ಮೀ ಮೇಲ್ಪಟ್ಟು ಪ್ರತಿ ಕಿ.ಮೀಗೆ 4.30 ರೂ. ನಿಗದಿ ಮಾಡಲಾಯಿತು.

ಕಬ್ಬು ಕಟಾವು ಮಾಡುವ ದರವನ್ನು ಪ್ರತಿ ಟನ್‌ಗೆ 300 ರೂ.ಗಳನ್ನು ಕಬ್ಬಿನ ಬಿಲ್ಲಿನಲ್ಲಿ ಕಟಾವು ಮಾಡಿಕೊಂಡು ಪಾವತಿಸಲು ತೀರ್ಮಾನಿಸಲಾಯಿತು. ಕಬ್ಬು ಕಟಾವು ಮಾಡಿ ಲಾರಿ ಅಥವಾ ಟ್ರ್ಯಾಕ್ಟರ್‌ಗಳಿಗೆ ತುಂಬಿಸುವ ಎಲ್ಲ ಲೇಬರ್‌ ಗ್ಯಾಂಗ್‌ ಅಥವಾ ಲೇಬರ್‌ ಗ್ಯಾಂಗ್‌ಗಳ ಮುಖ್ಯಸ್ಥರಿಗೆ ಪ್ರಸ್ತತ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಚಾಲ್ತಿಯಲ್ಲಿರುವ ವಾಡಿಕೆಯಂತೆ ಪ್ರತಿ ಟನ್‌ಗೆ ರೂ.15ರಂತೆ ಕಾರ್ಖಾನೆಯಿಂದ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ಪ್ರಧಾನ ವ್ಯವಸ್ಥಾಪಕ ಕೆ.ಎಂ.ಬೋರೇಗೌಡ,ಆರ್‌ಟಿಓ ಅಧಿಕಾರಿ ಆನಂದಗೌಡ, ರೈತ ಮುಖಂಡರಾದ ಶಂಭೂನಹಳ್ಳಿ ಸುರೇಶ್‌, ಕೆ.ಎಸ್‌.ಸುಧೀರ್‌ಕುಮಾರ್‌, ಚಂದ್ರಶೇಖರ್‌, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕೃಷ್ಣ, ಲಾರಿ ಮಾಲೀಕರ ಸಂಘದ ಬಾಲು, ನಾಗರಾಜು ಹಾಜರಿದ್ದರು.

ಎಂಡಿವೈ23ಕೆ6


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ