ಆ್ಯಪ್ನಗರ

ಬಿ.ಜಯಶ್ರೀಗೆ ಸಮಾಜಸೇವಾ ಪ್ರಶಸ್ತಿ ಪ್ರದಾನ

ಬಿ...

Vijaya Karnataka 20 Mar 2019, 5:00 am
ಭಾರತೀನಗರ (ಮಂಡ್ಯ ಜಿಲ್ಲೆ): ಪುರುಷ ಪ್ರಧಾನ ಸಮಾಜ ಎಂಬ ಕಳಂಕದಿಂದ ಈ ಜಗತ್ತು ನಿಧಾನವಾಗಿ ಹೊರಬರುತ್ತಿದ್ದು, ಪುರುಷರ ಸಾಧನೆ ಹಿಂದೆ ಮಹಿಳೆಯರ ಪಾಲೂ ಇರುತ್ತದೆ ಎಂದು ಕಲಾವಿದೆ ಹಾಗೂ ರಾಜ್ಯಸಭೆ ಮಾಜಿ ಸದಸ್ಯೆ ಡಾ.ಬಿ.ಜಯಶ್ರೀ ಅಭಿಪ್ರಾಯಪಟ್ಟರು.
Vijaya Karnataka Web samaja seva award for actress b jayashree
ಬಿ.ಜಯಶ್ರೀಗೆ ಸಮಾಜಸೇವಾ ಪ್ರಶಸ್ತಿ ಪ್ರದಾನ


ಭಾರತೀ ಕಾಲೇಜಿನಲ್ಲಿ ಪದ್ಮ ಮಾದೇಗೌಡ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪದ್ಮ ಜಿ.ಮಾದೇಗೌಡ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

''ಪ್ರತಿ ಗಂಡಿನ ಸಾಧನೆ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಇದು ಮಹಿಳೆಯರಿಗೆ ಸಂತಸ ತರುವ ವಿಚಾರ. ಪುರುಷರ ಯಶಸ್ಸಿಗೆ ಮಹಿಳೆಯರು ಕಾರಣವಾಗುತ್ತಿರುವುದು ಮಹಿಳೆಯರಿಗೆ ಸಿಕ್ಕಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತೀಕ. ಬಹಳ ಹಿಂದೆ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಇರುವ, ಪುರುಷರ ಅಡಿಯಾಳಾಗಿ ಬದುಕುವ ಕಾಲ ಇತ್ತು. ಆಗ ಪುರುಷರು ತೋರಿದ ದಾರಿಯಲ್ಲಿ ಮಹಿಳೆಯರು ನಡೆಯಬೇಕಾದ ಅನಿವಾರ್ಯತೆಯೂ ಇತ್ತು. ಆದರೆ ಈಗ ಆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಿಳಿಯಾದಂತೆ ಕಾಣುತ್ತಿದೆ,'' ಎಂದರು.

ಸಹಾಯಕ ಪ್ರಾಧ್ಯಾಪಕ ಡಾ.ಸುತ್ತೂರು ಎಸ್‌.ಮಾಲಿನಿ ಮಾತನಾಡಿ, ''ಪ್ರಸ್ತುತ ಗಂಡಿನಷ್ಟೇ ಹೆಣ್ಣಿಗೂ ಸಮಾನತೆಯಿದೆ. ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಈಗ ಸಾಕಷ್ಟು ಸುಧಾರಿಸಿವೆ,'' ಎಂದರು. ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಹಿರಿಯ ಕಲಾವಿದೆ ಡಾ.ಬಿ.ಜಯಶ್ರೀ ಅವರಿಗೆ ಪದ್ಮ ಮಾದೇಗೌಡ ಸಮಾಜಸೇವಾ ಪ್ರಶಸ್ತಿಯೊಂದಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.

ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರವರ್ತಕ ಕಲೆಗಳ ವಿವಿ ವಿಶ್ರಾಂತ ಕುಲಪತಿ ಡಾ.ಸರ್ವಮಂಗಳ ಶಂಕರ್‌ ಅಧ್ಯಕ್ಷತೆ ವಹಿಸಿದ್ದರು.

ಜಿಕೆವಿಕೆ ಕೃಷಿ ವಿದ್ಯಾಲಯದ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌, ಭಾರತೀ ಕಾಲೇಜಿನ ಅಧ್ಯಕ್ಷ ಮಧು ಮಾದೇಗೌಡ, ಮಾಜಿ ಸಂಸದ ಮಾದೇಗೌಡರ ಪುತ್ರರಾದ ಡಾ.ಪ್ರಕಾಶ್‌, ಪ್ರಾಶುಪಾಲ ಪ್ರೊ.ಮಾಯಿಗೌಡ, ರಂಜಿತ್‌ ಡಾ.ಬೋರಪ್ಪ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ