ಆ್ಯಪ್ನಗರ

ಶಾಲೆಯ ವಾಟರ್ ಟ್ಯಾಂಕ್‌‌ಗೆ ವಿಷ ಬೆರೆಸಿದ ದುಷ್ಕರ್ಮಿಗಳು; 11 ವಿದ್ಯಾರ್ಥಿಗಳು ಅಸ್ವಸ್ಥ

ವಿದ್ಯಾರ್ಥಿಗಳ ಸಾಮೂಹಿಕ ಹತ್ಯೆಗೆ ಸಂಚು ನಡೆಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

Vijaya Karnataka Web 15 Jul 2019, 2:32 pm
ಮಂಡ್ಯ: ಪ್ರೌಢ ಶಾಲೆಯ ವಾಟರ್ ಟ್ಯಾಂಕ್‌ಗೆ ದುಷ್ಕರ್ಮಿಗಳು ವಿಷ ಬೆರೆಸಿದ ಪರಿಣಾಮ ಆ ನೀರು ಕುಡಿದು 11 ಮಕ್ಕಳು ಅಸ್ವಸ್ಥಗೊಂಡ ಹೇಯ ಪ್ರಕರಣ ಜಿಲ್ಲೆಯ ಎ.ಹುಲ್ಲುಕೆರೆ ಗ್ರಾಮದಲ್ಲಿ ನಡೆದಿದೆ.
Vijaya Karnataka Web Poisonised


ಹುಲ್ಲುಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಘಟನೆ ನಡೆದಿದ್ದು, ಯಾರೋ ದುಷ್ಕರ್ಮಿಗಳು ಕುಡಿಯುವ ನೀರಿನ ವಾಟರ್ ಟ್ಯಾಂಕ್ ಗೆ ಕ್ರಿಮಿನಾಶಕ ಮಿಶ್ರಣ ಮಾಡಿದ್ದರು. ವಿಷ ವಿದ್ಯಾರ್ಥಿಗಳಲ್ಲಿ ಐವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು, ಅಸ್ವಸ್ಥ ವಿದ್ಯಾರ್ಥಿಗಳಿಗೆ ಕೊತ್ತತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ದರ್ಶನ್, ಧನುಷ್ ,ಶಿವಲಿಂಗ, ಯಶವಂತ್,ಮಯೂರ್,ಚಂದು,ಸೋಮಶೇಖರ್, ನಿಶಾ,ಪ್ರಜ್ವಲ್ ,ತೇಜು ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳಾಗಿದ್ದಾರೆ.

ಇಲಿ ಸೇರಿದಂತೆ ಇತರೆ ಕ್ರಿಮಿಕೀಟಗಳಿಂದ ಬೆಳೆ ರಕ್ಷಣೆ ಬಳಸುವ ಕಾಳು ಮಾದರಿಯ ಕ್ರಿಮಿನಾಷಕ ಪೋರೇಟ್ ಎಂಬ ಕ್ರಿಮಿನಾಶಕವನ್ನು ಬರೋಬ್ಬರಿ 1 ಕೆಜಿಯಷ್ಟು ಮಕ್ಕಳು ಕುಡಿಯುವ ನೀರಲ್ಲಿ ಸುರಿಯಲಾಗಿದೆ. ಕಳೆದ ರಾತ್ರಿ ಈ ದುಷ್ಕೃತ್ಯವನ್ನು ನಡೆಸಲಾಗಿದ್ದು, ಮುಂಜಾನೆ ಹಾಲು ಸೇವಿಸುವ ಮುನ್ನ ಲೋಟ ತೊಳೆಯಲು ಹೋದಾಗ ಕೆಲವು ಮಕ್ಕಳು ನೀರು ಕುಡಿದಿದ್ದರು.

ಕುಡಿದ ಬಳಿಕ ನೀರು ಕೆಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಕೆಲ ನಿಮಿಷದಲ್ಲೇ ಮಕ್ಕಳಿಗೆ ಹೊಟ್ಟೆ ನೋವು, ತಲೆ ಸುತ್ತು ಕಾಣಿಸಿಕೊಂಡು ಅಸ್ವಸ್ಥಗೊಂಡರು.

ತಕ್ಷಣ ವಾಂತಿ ಮಾಡಿಸಿ ಆಸ್ಪತ್ರೆಗೆ ಸಾಗಿಸಿದರಿಂದ ಭಾರಿ ದೊಡ್ಡ ಅನಾಹುತ ತಪ್ಪಿದೆ. ಅಸ್ವಸ್ಥಗೊಂಡಿರುವ ಮಕ್ಕಳಲ್ಲಿ ಆರು ಮಂದಿ ನೀರು ಸೇವಿಸಿದ್ದು, ಉಳಿದ ಮಕ್ಕಳು ವಾಸನೆ ಬಂದ ತಕ್ಷಣ ಬಾಯಲ್ಲಿದ್ದ ನೀರನ್ನು ಉಗಿದಿದ್ದಾರೆ ಎಂದು ತಿಳಿದು ಬಂದಿದೆ.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು , ಸ್ಥಳಕ್ಕೆ ಪೊಲೀಸರು, ಶ್ವಾನ ದಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ