ಆ್ಯಪ್ನಗರ

ಹಿರಿಯ ದಂಪತಿಗಳಿಗೆ ಸನ್ಮಾನ

ಐವತ್ತು ವರ್ಷಗಳಿಗೂ ಹೆಚ್ಚಿನ ದಾಂಪತ್ಯದ ಸಾರ್ಥಕ ಬದುಕು ಸಾಗಿಸಿದ ದಂಪತಿಗಳನ್ನು ಸನ್ಮಾನಿಸುವ ವಿಶೇಷ ಕಾರ‌್ಯಕ್ರಮಕ್ಕೆ ತಾಲೂಕಿನ ಲಾಳನಕೆರೆ ಗ್ರಾಮ ಸಾಕ್ಷಿಯಾಯಿತು. ಮೂರು ಹಿರಿಯ ಜೋಡಿ ಜೀವಗಳನ್ನು ಗೌರವಿಸಿ ಸಮಾಜ ಮತ್ತು ಕುಟುಂಬಕ್ಕೆ ಜೀವನಾನುಭವದ ಸಲಹೆ ನೀಡಿಲಾಯಿತು.

Vijaya Karnataka 12 Sep 2017, 5:15 am
ಮಂಡ್ಯ: ಐವತ್ತು ವರ್ಷಗಳಿಗೂ ಹೆಚ್ಚಿನ ದಾಂಪತ್ಯದ ಸಾರ್ಥಕ ಬದುಕು ಸಾಗಿಸಿದ ದಂಪತಿಗಳನ್ನು ಸನ್ಮಾನಿಸುವ ವಿಶೇಷ ಕಾರ‌್ಯಕ್ರಮಕ್ಕೆ ತಾಲೂಕಿನ ಲಾಳನಕೆರೆ ಗ್ರಾಮ ಸಾಕ್ಷಿಯಾಯಿತು. ಮೂರು ಹಿರಿಯ ಜೋಡಿ ಜೀವಗಳನ್ನು ಗೌರವಿಸಿ ಸಮಾಜ ಮತ್ತು ಕುಟುಂಬಕ್ಕೆ ಜೀವನಾನುಭವದ ಸಲಹೆ ನೀಡಿಲಾಯಿತು.
Vijaya Karnataka Web senior couples honored
ಹಿರಿಯ ದಂಪತಿಗಳಿಗೆ ಸನ್ಮಾನ


ಸನ್‌ಪ್ಯೂರ್ ಕಂಪನಿ ಸಹಯೋಗದಲ್ಲಿ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ಮಂಡ್ಯ ಯೂತ್ ಗ್ರೂಪ್ ರಾತ್ರಿ ‘ಪಡಸಾಲೆ’ ಶೀರ್ಷಿಕೆಯಡಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವು ಮೂವರು ಹಿರಿಯ ದಂಪತಿಗಳ ಸನ್ಮಾನಕ್ಕೆ ವೇದಿಕೆಯಾಗಿತ್ತು. ಹಿರಿಯ ದಂಪತಿಗಳಾದ ಶಿವಮ್ಮ-ನಂಜುಂಡಪ್ಪ, ಪುಟ್ಟನಿಂಗಮ್ಮ-ಭೋಗಪ್ಪ, ಸಿದ್ದಮ್ಮ- ಮರಿಸಿದ್ದಯ್ಯ ಅವರನ್ನು ಸನ್ಮಾನ ಸ್ವೀಕರಿಸಿ, ನೆರೆದಿದ್ದವರನ್ನು ಹರಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ 250ಕ್ಕೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು. ಇದರೊಂದಿಗೆ 15 ಮಂದಿಗೆ ಇಸಿಜಿ, 12 ಜನರಿಗೆ ದೈಹಿಸಿ ಚಿಕಿತ್ಸೆ, 20 ಜನರಿಗೆ ಕೊಬ್ಬಿನಂಶ ತಪಾಸಣೆ ಮಾಡಲಾ ಯಿತು. ಸನ್‌ಫಾರ್ಮಾ, ಇಂಟಾಸ್, ಆರ್ಡೈನ್, ಆರ್‌ಪಿಜಿ ಔಷಧ ಕಂಪನಿಗಳ ಪ್ರಾಯೊಜಕತ್ವದಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚು ಮೌಲ್ಯದ ಔಷಧ ಗಳನ್ನು ಶಿಬಿರದಲ್ಲಿ ಉಚಿತವಾಗಿ ವಿತರಿಸಲಾಯಿತು.

‘ಬಸ್ಸಿಲ್ಲದ ಊರುಗಳು’ ಘೋಷಣೆಯಡಿ ನಡೆದ ಶಿಬಿರ ಉದ್ಘಾಟಿಸಿದ ಮಂಡ್ಯ ಯೂತ್ ಗ್ರೂಪ್‌ನ ಅಧ್ಯಕ್ಷ ಡಾ.ಅನಿಲ್‌ಆನಂದ್, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರತಿಯೊಂದು ಗ್ರಾಮಕ್ಕೂ ಬಸ್ ಸೌಲಭ್ಯ ಕಲ್ಪಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಲಾಳನಕೆರೆ ಗ್ರಾಮದ ಎಲ್.ಎಸ್.ಮಧು, ಮಂಜು ನಾಥ್ ಸಿದ್ದೇಶ್, ಗ್ರಾಪಂ ಸದಸ್ಯರಾದ ಮಹದೇವಪ್ಪ, ಶಿವಮಲ್ಲಸ್ವಾಮಿ, ಯೂತ್ ಗ್ರೂಪ್ ಪದಾಧಿಕಾರಿಗಳಾದ ವಿನಯ್, ದರ್ಶನ್, ಮಲ್ಲೇಶ್, ಭರತ್, ಸೈಯದ್, ಸಾಗರ್, ಕಾರ್ತಿಕ್, ವಿನಯ್, ಕಿರಣ್, ಸಂದೇಶ್‌ಬಾಬು ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ