ನೀರಲ್ಲಿ ಮುಳುಗಿದ ಆಶ್ರಮ: ಗೌತಮ ಕ್ಷೇತ್ರದ ಶ್ರೀ ಗಜಾನನ ಸ್ವಾಮೀಜಿ ಸ್ಥಳಾಂತರ
ಕಳೆದ ಬಾರಿ ಸಹ ಗೌತಮ ಆಶ್ರಮಕ್ಕೆ ನೀರು ನುಗ್ಗಿತ್ತು.
Vijaya Karnataka Web 11 Aug 2019, 11:51 am
ಶ್ರೀರಂಗಪಟ್ಟಣ: ಕೆ.ಆರ್.ಎಸ್. ಡ್ಯಾಂ ನಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕಾವೇರಿ ನಡುಗಡ್ಡೆಯಲ್ಲಿದ್ದ ಗೌತಮ ಕ್ಷೇತ್ರದ ಶ್ರೀ ಗಜಾನನ ಸ್ವಾಮೀಜಿ ಅವರನ್ನು ಸ್ಥಳಾಂತರ ಮಾಡಲಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿದ್ದ ಗೌತಮ ಕ್ಷೇತ್ರ ಆಶ್ರಮದ ಗಜಾನನ ಸ್ವಾಮೀಜಿ ಅಲ್ಲಿಂದ ಕದಲಲು ಒಪ್ಪಿರಲಿಲ್ಲ. ತಾಲೂಕು ಆಡಳಿತದ ಅಧಿಕಾರಿಗಳು ಮನವೊಲಿಸಿ ಆಶ್ರಮದಲ್ಲಿದ್ದ ಸ್ವಾಮೀಜಿ ಸೇರಿ 7 ಜನರನ್ನು ನಡುಗಡ್ಡೆಯ ಸಮೀಪದ ದೊಡ್ಡೇಗೌಡನಕೊಪ್ಪಲು ಗ್ರಾಮದ ಮನೆಯೊಂದಕ್ಕೆ ಸ್ಥಳಾಂತರ ಮಾಡಿದ್ದಾರೆ.
ಕಳೆದ ವರ್ಷ ಪ್ರವಾಹ ಬಂದರೂ ಗಜಾನನ ಸ್ವಾಮೀಜಿ ಆಶ್ರಮದಲ್ಲೇ ಉಳಿದುಕೊಂಡಿದ್ದರು. NDRF ಸಿಬ್ಬಂದಿ ಸ್ವಾಮೀಜಿ ರಕ್ಷಣೆಗೆ ತೆರಳಿದ್ದರೂ ಅಲ್ಲಿಂದ ಬರಲು ಅವರು ಒಪ್ಪಿರಲಿಲ್ಲ. ಈ ಬಾರೀ ಪ್ರವಾಹ ಹೆಚ್ಚಿನ ಮಟ್ಟದಲ್ಲಿರುವ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಾಮೀಜಿ ಅವರನ್ನು ಸ್ಥಳಾಂತರ ಮಾಡಲಾಗಿದೆ. ಸಂತ್ರಸ್ಥ ಆಶ್ರಮವಾಸಿಗಳಿಗೆ ತಾಲೂಕು ಆಡಳಿತದಿಂದ ಮೂಲ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿದ್ದ ಗೌತಮ ಕ್ಷೇತ್ರ ಆಶ್ರಮದ ಗಜಾನನ ಸ್ವಾಮೀಜಿ ಅಲ್ಲಿಂದ ಕದಲಲು ಒಪ್ಪಿರಲಿಲ್ಲ. ತಾಲೂಕು ಆಡಳಿತದ ಅಧಿಕಾರಿಗಳು ಮನವೊಲಿಸಿ ಆಶ್ರಮದಲ್ಲಿದ್ದ ಸ್ವಾಮೀಜಿ ಸೇರಿ 7 ಜನರನ್ನು ನಡುಗಡ್ಡೆಯ ಸಮೀಪದ ದೊಡ್ಡೇಗೌಡನಕೊಪ್ಪಲು ಗ್ರಾಮದ ಮನೆಯೊಂದಕ್ಕೆ ಸ್ಥಳಾಂತರ ಮಾಡಿದ್ದಾರೆ.
ಕಳೆದ ವರ್ಷ ಪ್ರವಾಹ ಬಂದರೂ ಗಜಾನನ ಸ್ವಾಮೀಜಿ ಆಶ್ರಮದಲ್ಲೇ ಉಳಿದುಕೊಂಡಿದ್ದರು. NDRF ಸಿಬ್ಬಂದಿ ಸ್ವಾಮೀಜಿ ರಕ್ಷಣೆಗೆ ತೆರಳಿದ್ದರೂ ಅಲ್ಲಿಂದ ಬರಲು ಅವರು ಒಪ್ಪಿರಲಿಲ್ಲ. ಈ ಬಾರೀ ಪ್ರವಾಹ ಹೆಚ್ಚಿನ ಮಟ್ಟದಲ್ಲಿರುವ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಾಮೀಜಿ ಅವರನ್ನು ಸ್ಥಳಾಂತರ ಮಾಡಲಾಗಿದೆ. ಸಂತ್ರಸ್ಥ ಆಶ್ರಮವಾಸಿಗಳಿಗೆ ತಾಲೂಕು ಆಡಳಿತದಿಂದ ಮೂಲ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ.