ಆ್ಯಪ್ನಗರ

ಚಂದ್ರವನ ಆಶ್ರಮ ಉದ್ಘಾಟಿಸಿದ್ದ ಸಿದ್ದಗಂಗಾ ಶ್ರೀ

ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿಗಳು ಪಟ್ಟಣದ ಹೊರವಲಯದಲ್ಲಿರುವ ಚಂದ್ರವನ ಆಶ್ರಮ ಹಾಗೂ ಪಾಂಡವಪುರ ತಾಲೂಕಿನ ಬೇಬಿ ಮಠದ ಜತೆ ನಿಕಟ ಸಂಬಂಧ ಹೊಂದಿದ್ದರು.

Vijaya Karnataka 22 Jan 2019, 5:00 am
ಶ್ರೀರಂಗಪಟ್ಟಣ: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿಗಳು ಪಟ್ಟಣದ ಹೊರವಲಯದಲ್ಲಿರುವ ಚಂದ್ರವನ ಆಶ್ರಮ ಹಾಗೂ ಪಾಂಡವಪುರ ತಾಲೂಕಿನ ಬೇಬಿ ಮಠದ ಜತೆ ನಿಕಟ ಸಂಬಂಧ ಹೊಂದಿದ್ದರು.
Vijaya Karnataka Web siddaganga sri lanka inaugurated chandravana ashram
ಚಂದ್ರವನ ಆಶ್ರಮ ಉದ್ಘಾಟಿಸಿದ್ದ ಸಿದ್ದಗಂಗಾ ಶ್ರೀ


1996ರಲ್ಲಿ ಬೇಬಿ ಮಠವನ್ನು ಶ್ರೀ ಶಿವಕುಮಾರ ಸ್ವಾಮೀಜಿಗಳು ಉದ್ಘಾಟಿಸಿದ್ದು, ಶತಾಯುಷಿ ಮರಿದೇವರು ಸ್ವಾಮೀಜಿ ಆಗ ಅಲ್ಲಿ ಮಠಾಧಿಪತಿಯಾಗಿದ್ದರು. ಅವರ ನಂತರ ಮಠದ ಪೀಠಾಧಿಕಾರಿಯಾದ ಶ್ರೀ ತ್ರಿನೇತ್ರ ಮಹಂತ ಶಿಯೋಗಿ ಸ್ವಾಮೀಜಿ ಅವರೂ ಶ್ರೀ ಶಿವಕುಮಾರ ಸ್ವಾಮೀಜಿ ಬಗ್ಗೆ ಅಪಾರ ಗೌರವ ಇಟ್ಟುಕೊಂಡು ಚಂದ್ರವನ ಆಶ್ರಮವನ್ನು ಹಠ ತೊಟ್ಟು ಅವರಿಂದಲೇ 2011ರ ಲ್ಲಿ ಉದ್ಘಾಟನೆ ಮಾಡಿಸಿದ್ದರು.

ಮೊಟ್ಟ ಮೊದಲು ಚಂದ್ರವನ ಆಶ್ರಮದ ಶಕ್ತಿಧಾಮದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳೇ ಶಿವಪೂಜೆ ನಡೆಸಿದ್ದರು. ಅವರ ಮಾರ್ಗದರ್ಶನದಲ್ಲಿ ಶ್ರೀ ತ್ರಿನೇತ್ರ ಸ್ವಾಮೀಜಿ ಪೂಜಾ ಕಾರ‍್ಯಕ್ರಮಗಳನ್ನು ಮಾಡಿದ್ದರು.

''ಚಂದ್ರವನ ಆಶ್ರಮ ಕಾವೇರಿ ನದಿ ತಟದಲ್ಲಿರುವುದರಿಂದ ಈ ಮಠಕ್ಕೆ ಭವಿಷ್ಯವಿದೆ. ಶಿವನ ಆರಾಧನೆ, ನಾಡಿನ ಜನರ ಒಳಿತಿಗೆ ಶ್ರಮಿಸುವ ಮೂಲಕ ಮಠವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಸಿದ್ಧಗಂಗಾ ಶ್ರೀಗಳು ಆಶೀರ್ವದಿಸಿದ್ದರು. 10 ದಿನಗಳ ಹಿಂದಷ್ಟೇ ಮಠಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದೆ. ಅವರ ಆರೋಗ್ಯದ ಸ್ಥಿತಿ ಕಂಡು ನೋವಾಗಿತ್ತು'' ಎಂದು ಶ್ರೀ ತ್ರಿನೇತ್ರ ಸ್ವಾಮೀಜಿ ಹೇಳಿದರು.

''ಪ್ರತಿ ವರ್ಷ ಏಪ್ರಿಲ್‌ನಲ್ಲಿ ಶ್ರೀ ಶಿವಕಮಾರ ಸ್ವಾಮೀಜಿಗಳ ಹುಟ್ಟು ಹಬ್ಬದಲ್ಲಿ ಭಾಗವಹಿಸುತ್ತಿದ್ದೆ. ಎಲ್ಲಾ ಸ್ವಾಮೀಜಿಗಳು ಶ್ರೀಗಳ ದೇವರ ಕೋಣೆಯಲ್ಲಿ ಕುಳಿತು ಅವರ ಪಾದಪೂಜೆ ನೆರವೇರಿಸಿ, ಶಿವಪೂಜೆ ಮಾಡುತ್ತಿದ್ದೆವು. ನಂತರ ಜತೆಯಲ್ಲಿಯೇ ಕುಳಿತು ಪ್ರಸಾದ ಸ್ವೀಕರಿಸುತ್ತಿದ್ದೆವು'' ಎಂದು ನೆಪಿಸಿಕೊಂಡರು.

ನೂರು ವರ್ಷ ದಾಟಿದ ಮೇಲೆ ಪುಣ್ಯ ಪುರುಷರಾಗುತ್ತಾರೆ. ಶರಣರನ್ನು ಮರಣದಲ್ಲಿ ನೋಡಿ ಎಂಬುದು ಶರಣರ ಮಾತು. ಶಂಕರಾಚಾರ‍್ಯ, ಬುದ್ಧ, ಬಸವ ಇನ್ನಿತರ ಶರಣರಂತೆ ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ ಹೆಸರು ಜಗತ್ತು ಇರುವವರೆಗೂ ಇರುತ್ತದೆ. ಶ್ರೀಗಳು ಎಲ್ಲಾ ಪ್ರಶಸ್ತಿಗಳನ್ನು ಮೀರಿದ ದೈವತ್ವ ಹೊಂದಿದ್ದರು. ಅವರಿಗೆ ಕೇಂದ್ರ ಸರಕಾರ 'ಭಾರತ ರತ್ನ' ಪ್ರಶಸ್ತಿ ನೀಡಬೇಕು.

- ಶ್ರೀ ತ್ರಿನೇತ್ರ ಮಹಂತ ಶಿಯೋಗಿ ಸ್ವಾಮೀಜಿ, ಚಂದ್ರವನ ಆಶ್ರಮ, ಶ್ರೀರಂಗಪಟ್ಟಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ