ಆ್ಯಪ್ನಗರ

ಎಲ್ಲೆಲ್ಲೂ ಶಿವ ನಾಮ ಸ್ಮರಣೆ

ಜಿಲ್ಲೆಯಲ್ಲಿ ಸೋಮವಾರ ಸಂಭ್ರಮದಿಂದ ಮಹಾ ಶಿವರಾತ್ರಿ ಹಬ್ಬ ಆಚರಿಸಲಾಯಿತು. ಜಿಲ್ಲೆಯ ಎಲ್ಲ ಶಿವಾಲಯಗಳು ಮತ್ತು ಶನೇಶ್ವರಸ್ವಾಮಿ ದೇವಸ್ಥಾನ ಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಅಲಂಕಾರ, ಹೋಮಗಳು ನಡೆದವು.

ವಿಕ ಸುದ್ದಿಲೋಕ 8 Mar 2016, 5:15 am
ಮಂಡ್ಯ: ಜಿಲ್ಲೆಯಲ್ಲಿ ಸೋಮವಾರ ಸಂಭ್ರಮದಿಂದ ಮಹಾ ಶಿವರಾತ್ರಿ ಹಬ್ಬ ಆಚರಿಸಲಾಯಿತು. ಜಿಲ್ಲೆಯ ಎಲ್ಲ ಶಿವಾಲಯಗಳು ಮತ್ತು ಶನೇಶ್ವರಸ್ವಾಮಿ ದೇವಸ್ಥಾನ ಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಅಲಂಕಾರ, ಹೋಮಗಳು ನಡೆದವು.
Vijaya Karnataka Web siva was nominated for anywhere from memory
ಎಲ್ಲೆಲ್ಲೂ ಶಿವ ನಾಮ ಸ್ಮರಣೆ


ಮಾಂಡವ್ಯ ಋಷಿಯ ತಪೋಭೂಮಿ ಮಂಡ್ಯ ನಗರದಲ್ಲಿ ಪುರಾಣ ಪ್ರಸಿದ್ಧವಾದುದು ಶ್ರೀಅರ್ಕೇಶ್ವರ ಸ್ವಾಮಿ ದೇವಾಲಯ. ಮಹಾಶಿವರಾತ್ರಿ ಪ್ರಯುಕ್ತ ನವಗ್ರಹ ಹೋಮ ಸೇರಿದಂತೆ ನಾನಾ ಹೋಮ- ಹವನಗಳು, ಶಿವಾರಾಧನೆ, ಭಜನೆ, ರಾತ್ರಿಯಿಡೀ ಜಾಗರಣೆ ನಡೆಯಲಿದೆ. ಮಂಗಳವಾರ ಬೆಳಗ್ಗೆ 8ರಿಂದಲೇ ಅನ್ನಸಂತರ್ಪಣೆ ಆರಂಭಗೊಳ್ಳಲಿದೆ.

ಮಂಡ್ಯದ ಬನ್ನೂರು ರಸ್ತೆಯಲ್ಲಿನ ಶ್ರೀ ಶನೇಶ್ವರಸ್ವಾಮಿ ದೇವಾಲ ಯದಲ್ಲಿ ಶಿವರಾತ್ರಿ ಅಂಗ ವಾಗಿ ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾ ಭಿಷೇಕ, ಶನೇಶ್ವರ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಹಳೇ ನಗರದ ಸಕಲೇಶ್ವರ ದೇವಸ್ಥಾನ, ಶ್ರೀಕನ್ಯಕಾ ಪರಮೇಶ್ವರಿ ದೇವಾಲಯ, ಹೊಸಹಳ್ಳಿ, ಕಲ್ಲಹಳ್ಳಿ, ಬೋವಿಕಾಲನಿ, ಚಾಮುಂಡೇಶ್ವರಿನಗರ, ಸ್ವರ್ಣಸಂದ್ರ, ರಾಗಿಮುದ್ದನಹಳ್ಳಿಯ ಶನೇಶ್ವರಸ್ವಾಮಿ ದೇವಾಲಯ ದಲ್ಲೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ತಾಲೂಕಿನ ಚಿಕ್ಕಮಂಡ್ಯದ ಶ್ರೀ ಶನೇಶ್ವರಸ್ವಾಮಿ ದೇಗುಲ ಆವರಣದಲ್ಲಿ ನಿರ್ಮಿಸಿರುವ 12 ಅಡಿ ಎತ್ತದ ಈಶ್ವರನ ಪ್ರತಿಮೆಗೆ ಹಬ್ಬದ ಪ್ರಯುಕ್ತ ಭಾನುವಾರ ದಿನವಿಡೀ ವಿಶೇಷ ಪೂಜೆಗಳು ನಡೆದವರು. ಹಳೇಬೂದ ನೂರು ಗ್ರಾಮದ ಶ್ರೀ ಅಂಕನಾಥೇಶ್ವರ ಸ್ವಾಮಿ ದೇಗುಲ ದಲ್ಲೂ ವಿಶೇಷ ಪೂಜೆ, ಪುರಸ್ಕಾರಗಳನ್ನು ನಡೆಸಲಾಯಿ ತು. ಬೆಳಗ್ಗೆಯಿಂದ ಸಂಜೆವರೆಗೆ ಭಕ್ತರು ದೇವಾಲಯ ಗಳಿಗೆ ಭೇಟಿ ನೀಡಿ ಹಬ್ಬದ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು. ರಾತ್ರಿಯಿಂದ ಮಂಗಳವಾರ ಮುಂಜಾನೆವರೆಗೆ ಜಾಗರಣೆ ಪ್ರಯುಕ್ತ ನಾನಾ ಜಾವದ ಪೂಜಾ ಕಾರ‌್ಯಕ್ರಮಗಳು, ಪ್ರಸಾದ ವಿನಿಯೋಗ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ