ಆ್ಯಪ್ನಗರ

ಒಡೆದ ಯುಜಿಡಿ ಪೈಪ್‌: ರಸ್ತೆಯಲ್ಲಿ ದುರ್ನಾಥ

ಶ್ರೀರಂಗಪಟ್ಟಣ : ಶ್ರೀರಂಗಪಟ್ಟಣ ಹೊರವಲಯದಲ್ಲಿರುವ ಗಂಜಾಂನ ನಿಮಿಷಾಂಬ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಒಳಚರಂಡಿ ನೀರು ಸರಬರಾಜು ಮಾಡುವ ಯುಜಿಡಿ ಪೈಪ್‌ಲೈನ್‌ ಒಡೆದಿದ್ದು ಕಲುಷಿತ ನೀರು ರಸ್ತೆಯಲ್ಲಿ ಹರಿಯುತ್ತಿದೆ.

Vijaya Karnataka 13 Jun 2018, 5:00 am
ಶ್ರೀರಂಗಪಟ್ಟಣ : ಶ್ರೀರಂಗಪಟ್ಟಣ ಹೊರವಲಯದಲ್ಲಿರುವ ಗಂಜಾಂನ ನಿಮಿಷಾಂಬ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಒಳಚರಂಡಿ ನೀರು ಸರಬರಾಜು ಮಾಡುವ ಯುಜಿಡಿ ಪೈಪ್‌ಲೈನ್‌ ಒಡೆದಿದ್ದು ಕಲುಷಿತ ನೀರು ರಸ್ತೆಯಲ್ಲಿ ಹರಿಯುತ್ತಿದೆ.
Vijaya Karnataka Web split ugd pipe street stench
ಒಡೆದ ಯುಜಿಡಿ ಪೈಪ್‌: ರಸ್ತೆಯಲ್ಲಿ ದುರ್ನಾಥ


ಪರಿಣಾಮ ರಸ್ತೆಯಲ್ಲಿ ಸಂಚರಿಸುವವರಿಗೆ ದುರ್ನಾಥ ಮೂಗಿಗೆ ರಾಚುತ್ತಿದೆ. ಜತೆಗೆ ಅಕ್ಕ ಪಕ್ಕ ವಾಹನಗಳು ಸಾಗಿದಾಗ ತ್ಯಾಜ್ಯ ನೀರು ಮೈ ಮೇಲೆ ಎರಚುತ್ತಿದೆ ಎಂದು ದೂರಿದರು. ಸಮೀಪದಲ್ಲೇ ಇರುವ ನಿವಾಸಿಗಳಿಗೂ ತೊಂದರೆಯಾಗುತ್ತಿದೆ. ಶೀಘ್ರ ಯುಜಿಡಿ ಪೈಪ್‌ಲೈನ್‌ ದುರಸ್ತಿಗೊಳಿಸಬೇಕೆಂದು ಗಂಜಾಂ ಗ್ರಾಮಸ್ಥರು ಹಾಗೂ ನಿಮಿಷಾಂಬ ದೇವಿ ಭಕ್ತರ ಒತ್ತಾಯಿಸಿದ್ದಾರೆ.

20 ದಿನಗಳಿಂದಲೂ ಕಲುಷಿತ ನೀರು ಸೋರಿಕೆಯಾಗುತ್ತಿದ್ದು, ಗಬ್ಬು ವಾಸನೆಯಿಂದಾಗಿ ಸ್ಥಳೀಯರು ಕಿರಿ, ಕಿರಿ ಅನುಭವಿಸಬೇಕಾಗಿದೆ. ಕಲುಷಿತ ನೀರು ಹರಿಯುವ ಸ್ಥಳದಲ್ಲಿ ಕ್ರಿಮಿ, ಕೀಟ ಹಾಗೂ ಸೊಳ್ಳೆಗಳ ಸಂತತಿ ಹೆಚ್ಚಾಗಿದೆ. ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸಬೇಕು, ಯುಜಿಡಿ ಪೈಪ್‌ಲೈನ್‌ ದುರಸ್ತಿಗೊಳಿಸಬೇಕೆಂದು ದಸಂಸ ತಾಲೂಕು ಸಂಚಾಲಕ ಗಂಜಾಂ ರವಿಚಂದ್ರ ದೂರಿದ್ದಾರೆ.

''ಗಂಜಾಂ ನಿಮಿಷಾಂಬ ದೇವಾಲಯ ರಸ್ತೆ ಬದಿ ಯುಜಿಡಿ ಪೈಪ್‌ಲೈನ್‌ ಜಾಯಿಂಟ್‌ ಪೈಪ್‌ ಒಡೆದಿದ್ದರಿಂದ ಕಲುಷಿತ ನೀರು ಸೋರಿಕೆಯಾಗುತ್ತಿತ್ತು. ದುರಸ್ತಿ ಕೂಡ ಮಾಡಲಾಗಿದೆ. ಹೆಚ್ಚು ನೀರು ಹರಿದಾಗ ಮತ್ತೆ ನೀರು ಸೋರಿಕೆಯಾಗುತ್ತಿದೆ. ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಯುಜಿಡಿ ಪೈಪ್‌ಲೈನ್‌ ಸರಿಪಡಿಸಲಾಗುವುದು'' ಎಂದು ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ