ಆ್ಯಪ್ನಗರ

ದಸರೆಯಲ್ಲಿಆಡಿ ಸಂಭ್ರಮಿಸಿದ ಮಹಿಳೆಯರು

ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿನಾಡಹಬ್ಬ ದಸರಾ ಆಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ಮಂಗಳವಾರ ಮಹಿಳಾ ದಸರಾ ಸಂಭ್ರಮದಿಂದ ...

Vijaya Karnataka 2 Oct 2019, 5:00 am
ಶ್ರೀರಂಗಪಟ್ಟಣ: ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿನಾಡಹಬ್ಬ ದಸರಾ ಆಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ಮಂಗಳವಾರ ಮಹಿಳಾ ದಸರಾ ಸಂಭ್ರಮದಿಂದ ನಡೆಯಿತು.
Vijaya Karnataka Web srirangapattana dasara celebration
ದಸರೆಯಲ್ಲಿಆಡಿ ಸಂಭ್ರಮಿಸಿದ ಮಹಿಳೆಯರು


ದೇವಾಲಯ ಎದುರು ಮಹಿಳೆಯರಿಗೆ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿಚುಕ್ಕಿ ರಂಗೋಲಿ, ಎಳೆ ರಂಗೋಲಿ, ಬಾತುಕೋಳಿ ರಂಗೋಲಿ, ಗಿಳಿ ರಂಗೋಲಿ ಸೇರಿದಂತೆ ನಾನಾ ಚಿತ್ತಾರ ಬಿಡಿಸಿ ಗಮನ ಸೆಳೆದರು. ದೇವಾಲಯ ಬಲಭಾಗದಲ್ಲಿರುವ ಆವರಣದಲ್ಲಿನೀರು ತುಂಬಿದ ಬಿಂದಿಗೆ ಹೊತ್ತು ಮಹಿಳೆಯರು ಗೆಲುವಿಗಾಗಿ ಓಡಿದರು. ಓಡುವ ಭರದಲ್ಲಿಕೆಲ ಸ್ಪರ್ಧಾಳಗಳ ತಲೆ ಮೇಲಿದ್ದ ಬಿಂದಿಗೆ ಕೈ ತಪ್ಪಿ ಕೆಳಗೆ ಬಿದ್ದು ನಿರಾಸೆ ಅನುಭವಿಸಿದರು. ನಿಂಬೆ ಹಾಗೂ ಸ್ಪೂನ್‌ ಸ್ಪರ್ಧೆ ಗಮನ ಸೆಳೆಯಿತು.

ಉತ್ಸಾಹದಿಂದಲೇ ಮಹಿಳೆಯರು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಮಡಕೆ ಒಡೆದರು. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್‌, ಪ್ರಥಮ ದರ್ಜೆ ಸಹಾಯಕ ಮೋಹನ್‌, ಬಿಇಒ ರುಕ್ಸನಾ ನಾಜನೀನ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ