ಶ್ರೀರಂಗಪಟ್ಟಣ: ಮಹದಾಯಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು ಪ್ರಧಾನಮಂತ್ರಿಗಳು ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಸಾರ್ವಜನಿಕರು ಶುಕ್ರವಾರ ಪತ್ರ ಬರೆಯುವ ಮೂಲಕ ಪತ್ರ ಚಳುವಳಿ ನಡೆಸಿದರು.
ಪಟ್ಟಣದ ಅಂಚೆ ಕಚೇರಿ ಎದುರು ಸೇರಿದ ಸಾರ್ವಜನಿಕರು ನ್ಯಾಯಾಲಯ ಉತ್ತರ ಕರ್ನಾಟದಕ ಜನರ ಕುಡಿಯುವ ನೀರಿನ ಹಕ್ಕನ್ನು ಕಸಿದುಕೊಂಡಿದೆ. ನ್ಯಾಯಾಲಯ ರಾಜ್ಯದ ಮಧ್ಯಾಂತರ ಅರ್ಜಿಯನ್ನು ವಜಾಗೊಳಿಸಿರುವುದರಿಂದ ರಾಜ್ಯಕ್ಕೆ ನ್ಯಾಯ ಸಿಗುವ ವಾತವರಣವಿಲ್ಲ. ಹಾಗಾಗಿ ಪ್ರಧಾನ ಮಂತ್ರಿಗಳ ಮಧ್ಯ ಪ್ರವೇಶಿಸಬೇಕು. ಗೋವಾ ಹಾಗೂ ರಾಜ್ಯದ ನಡುವೆ ಇರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಪ್ರಧಾನ ಮಂತ್ರಿಗಳ ವಿಳಾಸಕ್ಕೆ ಪತ್ರ ರವಾನಿಸಿದರು.
ಬಿಜೆಪಿ ಮುಖಂಡ ಕೆ.ಬಲರಾಂ, ಯೊಗೇಶ್, ಗಿರೀಶ್, ಪಾಪು ಮತ್ತಿತರರು ಹಾಜರಿದ್ದರು.