ಮಂಡ್ಯ: ಜನಪದ ಗೀತೆಗಳ ಮೂಲಕ ನಮ್ಮ ಪೂರ್ವಿಕರು ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡುತ್ತಿದ್ದರು ಎಂದು ಪಿಇಟಿ ಅಧ್ಯಕ್ಷ ಡಾ.ಎಚ್.ಡಿ.ಚೌಡಯ್ಯ ಅಭಿಪ್ರಾಯಪಟ್ಟರು.
ನಗರದ ಪಿ.ಇ.ಎಸ್ ಕಾಲೇಜಿನ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್, ಪಿ.ಇ.ಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗ 24ನೇ ವರ್ಷದ ಕೆ.ವಿ.ಶಂಕರಗೌಡ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕೆ.ವಿ.ಶಂಕರಗೌಡರ ಸ್ಮರಣಾರ್ಥ ಪ್ರತಿ ವರ್ಷ ಜನಪದ ಗೀತೆ ಸ್ಪರ್ಧೆ ಆಯೋಜಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸ್ಪರ್ಧಾಳುಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿತ್ತು. ಇದರಿಂದ ಸ್ಪರ್ಧೆಯನ್ನು ನಿಲ್ಲಿಸುವ ಆಲೋಚನೆ ಮಾಡಲಾಗಿತ್ತು. ಆದರೆ, ಈ ಬಾರಿ ಸುಮಾರು 70ಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡಿದ್ದು, ಸ್ಪರ್ಧೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪ್ರತಿ ವರ್ಷ ನಡೆಸಲಾಗುವುದು ಎಂದು ಹೇಳಿದರು.
ತೀರ್ಪುಗಾರ ಎಚ್.ಎಂ.ಶಿವಮಹಾದೇವ ಮಾತನಾಡಿ, ಮೂಲದಾಟಿಯ ಜನಪದ ಗೀತೆಗಳು ಹೆಚ್ಚು ಜನರನ್ನು ತಲುಪಬೇಕು. ಹೀಗಾಗಿ ಸ್ಪರ್ಧೆಗಳಲ್ಲಿ ಮೂಲದಾಟಿಯ ಹಾಡುಗಳನ್ನು ಗಾಯಕರು ಹೆಚ್ಚು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಪರ್ಧೆಯಲ್ಲಿ ಎಲ್ಲ ಸ್ಪರ್ಧಾಳುಗಳು ಉತ್ತಮವಾಗಿ ಹಾಡುವ ಮೂಲಕ ಗಮನ ಸೆಳೆದಿದ್ದಾರೆ. ವಿಜೇತರ ಆಯ್ಕೆ ಮಾಡುವಲ್ಲಿ ತೀರ್ಪುಗಾರರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಚಿಕ್ಕ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲೊಂಡಿದ್ದು, ಈ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಎರಡು ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಆರ್.ರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಂತರಾಷ್ಟ್ರೀಯ ಜನಪದ ಗಾಯಕ ತೀರ್ಪುಗಾರ ಸಿ.ನರಸಿಂಹಮೂರ್ತಿ, ಜಿ.ಆರ್.ಗಂಗಾಧರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಪೊ›.ಹೆಚ್.ಜಿ.ಸಿದ್ದಲಿಂಗಪ್ಪ, ಮರಿಯಯ್ಯ ಇತರರು ಹಾಜರಿದ್ದರು.
ಸ್ಪರ್ಧೆಯ ವಿಜೇತರು: ಕಾಲೇಜು ವಿಭಾಗದಲ್ಲಿ ಪಿ.ಇ.ಎಸ್ ಕಾಲೇಜಿನ ಕೆ.ಆರ್.ಚಂದನ್(ಪ್ರಥಮ), ಮೈಸೂರು ಮಾನಸ ಗಂಗೋತ್ರಿಯ ಶರತ್ಕುಮಾರ್(ದ್ವಿತೀಯ), ಮೈಸೂರಿನ ಎಂ.ಐ.ಟಿ ಕಾಲೇಜಿನ ಕೆ.ಎಸ್.ಶಶಾಂಕ್(ತೃತೀಯ), ಮೈಸೂರಿನ ಲಲಿತ ಕಲಾ ಕಾಲೇಜಿನ ಹರೀಶ್ ಹಾಗೂ ತುಮಕೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಸವನಗೌಡ(ಸಮಾಧಾನಕರ) ಬಹುಮಾನ ಪಡೆದಿದ್ದು, ಅತಿಥೇಯ ಪಿ.ಇ.ಎಸ್ ಕಾಲೇಜು ಪರ್ಯಾಯ ಪಾರಿತೋಷಕ ಪ್ರಶಸ್ತಿ ಪಡೆದುಕೊಂಡಿದೆ. ಸಾರ್ವಜನಿಕ ವಿಭಾಗದಲ್ಲಿ ಕೀಲಾರ ಮಂಚೇಗೌಡ(ಪ್ರಥಮ), ಕೀಲಾರ ಕೆ.ಎನ್.ಶಶಾಂಕ್(ದ್ವಿತೀಯ), ಮಂಡ್ಯದ ಸಿ.ಎನ್.ಸುಪ್ರಿಯ(ತೃತೀಯ), ಪುಷ್ಕಲ್ ಹಾಗೂ ಸೃಷ್ಠಿ(ಸಮಾಧಾನಕರ) ಬಹುಮಾನ ಪಡೆದರು.
ನಗರದ ಪಿ.ಇ.ಎಸ್ ಕಾಲೇಜಿನ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್, ಪಿ.ಇ.ಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗ 24ನೇ ವರ್ಷದ ಕೆ.ವಿ.ಶಂಕರಗೌಡ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕೆ.ವಿ.ಶಂಕರಗೌಡರ ಸ್ಮರಣಾರ್ಥ ಪ್ರತಿ ವರ್ಷ ಜನಪದ ಗೀತೆ ಸ್ಪರ್ಧೆ ಆಯೋಜಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸ್ಪರ್ಧಾಳುಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿತ್ತು. ಇದರಿಂದ ಸ್ಪರ್ಧೆಯನ್ನು ನಿಲ್ಲಿಸುವ ಆಲೋಚನೆ ಮಾಡಲಾಗಿತ್ತು. ಆದರೆ, ಈ ಬಾರಿ ಸುಮಾರು 70ಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡಿದ್ದು, ಸ್ಪರ್ಧೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪ್ರತಿ ವರ್ಷ ನಡೆಸಲಾಗುವುದು ಎಂದು ಹೇಳಿದರು.
ತೀರ್ಪುಗಾರ ಎಚ್.ಎಂ.ಶಿವಮಹಾದೇವ ಮಾತನಾಡಿ, ಮೂಲದಾಟಿಯ ಜನಪದ ಗೀತೆಗಳು ಹೆಚ್ಚು ಜನರನ್ನು ತಲುಪಬೇಕು. ಹೀಗಾಗಿ ಸ್ಪರ್ಧೆಗಳಲ್ಲಿ ಮೂಲದಾಟಿಯ ಹಾಡುಗಳನ್ನು ಗಾಯಕರು ಹೆಚ್ಚು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಪರ್ಧೆಯಲ್ಲಿ ಎಲ್ಲ ಸ್ಪರ್ಧಾಳುಗಳು ಉತ್ತಮವಾಗಿ ಹಾಡುವ ಮೂಲಕ ಗಮನ ಸೆಳೆದಿದ್ದಾರೆ. ವಿಜೇತರ ಆಯ್ಕೆ ಮಾಡುವಲ್ಲಿ ತೀರ್ಪುಗಾರರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಚಿಕ್ಕ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲೊಂಡಿದ್ದು, ಈ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಎರಡು ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಆರ್.ರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಂತರಾಷ್ಟ್ರೀಯ ಜನಪದ ಗಾಯಕ ತೀರ್ಪುಗಾರ ಸಿ.ನರಸಿಂಹಮೂರ್ತಿ, ಜಿ.ಆರ್.ಗಂಗಾಧರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಪೊ›.ಹೆಚ್.ಜಿ.ಸಿದ್ದಲಿಂಗಪ್ಪ, ಮರಿಯಯ್ಯ ಇತರರು ಹಾಜರಿದ್ದರು.
ಸ್ಪರ್ಧೆಯ ವಿಜೇತರು: ಕಾಲೇಜು ವಿಭಾಗದಲ್ಲಿ ಪಿ.ಇ.ಎಸ್ ಕಾಲೇಜಿನ ಕೆ.ಆರ್.ಚಂದನ್(ಪ್ರಥಮ), ಮೈಸೂರು ಮಾನಸ ಗಂಗೋತ್ರಿಯ ಶರತ್ಕುಮಾರ್(ದ್ವಿತೀಯ), ಮೈಸೂರಿನ ಎಂ.ಐ.ಟಿ ಕಾಲೇಜಿನ ಕೆ.ಎಸ್.ಶಶಾಂಕ್(ತೃತೀಯ), ಮೈಸೂರಿನ ಲಲಿತ ಕಲಾ ಕಾಲೇಜಿನ ಹರೀಶ್ ಹಾಗೂ ತುಮಕೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಸವನಗೌಡ(ಸಮಾಧಾನಕರ) ಬಹುಮಾನ ಪಡೆದಿದ್ದು, ಅತಿಥೇಯ ಪಿ.ಇ.ಎಸ್ ಕಾಲೇಜು ಪರ್ಯಾಯ ಪಾರಿತೋಷಕ ಪ್ರಶಸ್ತಿ ಪಡೆದುಕೊಂಡಿದೆ. ಸಾರ್ವಜನಿಕ ವಿಭಾಗದಲ್ಲಿ ಕೀಲಾರ ಮಂಚೇಗೌಡ(ಪ್ರಥಮ), ಕೀಲಾರ ಕೆ.ಎನ್.ಶಶಾಂಕ್(ದ್ವಿತೀಯ), ಮಂಡ್ಯದ ಸಿ.ಎನ್.ಸುಪ್ರಿಯ(ತೃತೀಯ), ಪುಷ್ಕಲ್ ಹಾಗೂ ಸೃಷ್ಠಿ(ಸಮಾಧಾನಕರ) ಬಹುಮಾನ ಪಡೆದರು.