ಆ್ಯಪ್ನಗರ

ಗಾರ್ಮೆಂಟ್ಸ್‌ ಅಂಗಡಿ ಬೀಗ ಮುರಿದು ಕಳವು

ವಿಕ ಸುದ್ದಿಲೋಕ ಕಿಕ್ಕೇರಿ ಪಟ್ಟಣದ ಅತ್ಯಂತ ಜನನಿಬಿಡ ಪ್ರದೇಶವಾದ ಮಂದಗೆರೆ ರಸ್ತೆಯಲ್ಲಿ ನಸುಕಿನ ಜಾವ ನ್ಯೂಸ್ಟೈಲ್‌ ಗಾರ್ಮೆಂಟ್ಸ್‌ನ ಷಟರ್‌ನ ಬೀಗ ಮುರಿದು ಭಾನುವಾರ ರಾತ್ರಿ ...

Vijaya Karnataka 6 Aug 2019, 5:00 am
ಕಿಕ್ಕೇರಿ: ಪಟ್ಟಣದ ಅತ್ಯಂತ ಜನನಿಬಿಡ ಪ್ರದೇಶವಾದ ಮಂದಗೆರೆ ರಸ್ತೆಯಲ್ಲಿ ನಸುಕಿನ ಜಾವ ನ್ಯೂಸ್ಟೈಲ್‌ ಗಾರ್ಮೆಂಟ್ಸ್‌ನ ಷಟರ್‌ನ ಬೀಗ ಮುರಿದು ಭಾನುವಾರ ರಾತ್ರಿ ಕಳ್ಳತನ ಮಾಡಲಾಗಿದೆ.
Vijaya Karnataka Web stolen at garments shop in kikkeri
ಗಾರ್ಮೆಂಟ್ಸ್‌ ಅಂಗಡಿ ಬೀಗ ಮುರಿದು ಕಳವು


ಹಿರಿಕಳಲೆ ಗ್ರಾಮದ ಪುಟ್ಟರಾಜೇಗೌಡ ಅವರಿಗೆ ಸೇರಿದ ಅಂಗಡಿಯಾಗಿದ್ದು, ಪ್ರತಿದಿನದಂತೆ ವ್ಯಾಪಾರ ಮುಗಿಸಿ ಬಾಗಿಲನ್ನು ಹಾಕಿ ತೆರಳಿದ್ದಾರೆ.

ತಡರಾತ್ರಿಯಲ್ಲಿ ದುಷ್ಕರ್ಮಿಗಳು ಕೆಳ ಅಂತಸ್ಥಿನಲ್ಲಿರುವ ಅಂಗಡಿಯ ಷಟರ್‌ನ ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ. ಕಳ್ಳರು ಮುಸುಕು ಧರಿಸಿದ್ದು, ಅಂಗಡಿಯಲ್ಲಿರುವ ಕಂಪ್ಯೂಟರ್‌ ಹಾಗು 2 ಸಾವಿರ ನಗದು ಹಲವು ಬಟ್ಟೆ, ಬಿಲ್‌ಬುಕ್‌, ಖಾಲಿಚೆಕ್‌ ಬುಕ್‌, ದೋಚಿ ನಂತರ ಹಾಗೆಯೇ ಷಟರ್‌ನ ಬಾಗಿಲನ್ನು ಮುಚ್ಚಿ ಹೋಗಿದ್ದಾರೆ.

ಬೆಳಗ್ಗೆ ಎಂದಿನಂತೆ ಆಟೋಚಾಲಕರು ಅಂಗಡಿ ಬಳಿಗೆ ಎಂದಿನಂತೆ ಬಂದು ಕೂಳಿತು ಕೊಳ್ಳುವಂತೆ ತೆರಳಿದ್ದ ಸಂದರ್ಭದಲ್ಲಿ ಹೊರಗೆ ಬಟ್ಟೆಯ ಕವರ್‌ಗಳು ಹಾಗು ಬೀಗ ಮುರಿದಿರುವು ಕಂಡು ಮಾಲೀಕರಿಗೆ ಕರೆಮಾಡಿ ತಿಳಿಸಿದ್ದಾರೆ.

ನಂತರ ಒಳ ಪ್ರವೇಶಿಸಿ ನೋಡಲಾಗಿ ಅಂಗಡಿಯಲ್ಲಿ ಹಲವು ವಸ್ತುಗಳು ಕಳುವಾಗಿರುವುದು ತಿಳಿದು ನಂತರ ಅಂಗಡಿಯ ಸಿಸಿ ಟಿವಿಯಲ್ಲಿ ನೋಡಿದಾಗ ತಡರಾತ್ರಿ 1.49ರಲ್ಲಿ ಕಳ್ಳರು ಪ್ರವೇಶಿಸಿರುವುದು ದಾಖಲಾಗಿದ್ದು, ಮುಖಕ್ಕೆ ಮುಸುಕು ಧರಿಸಿರುವುದರಿಂದ ಮುಖ ಚಹರೆ ಪತ್ತೆ ಆಗಿಲ್ಲ. ಬೆಳಗ್ಗೆ ಠಾಣೆಯ ಪೋಲಿಸ್‌ ಅಧಿಕಾರಿಗಳು ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ