ಆ್ಯಪ್ನಗರ

ವಿದ್ಯಾರ್ಥಿ ಅಪಾಯದಿಂದ ಪಾರು

ತಾಲೂಕಿನ ಅರಳಕುಪ್ಪೆಯ ಬಳಿ ಶುಕ್ರವಾರ ದುಷ್ಕರ್ಮಿ ಗಳು 17 ವರ್ಷದ ವಿದ್ಯಾರ್ಥಿಯನ್ನು ಅಪಹರಿಸಿ ಆತನ ಮರ್ಮಾಂಗ ಕತ್ತರಿಸಿದ್ದ ಪ್ರಕರಣದಲ್ಲಿ ಸಂತ್ರಸ್ತ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

Vijaya Karnataka 16 Feb 2020, 5:00 am
ಮರ್ಮಾಂಗ ಕತ್ತರಿಸಿದ್ದ ಪ್ರಕರಣ
Vijaya Karnataka Web CRIME LOGO


ಪಾಂಡವಪುರ:
ತಾಲೂಕಿನ ಅರಳಕುಪ್ಪೆಯ ಬಳಿ ಶುಕ್ರವಾರ ದುಷ್ಕರ್ಮಿ ಗಳು 17 ವರ್ಷದ ವಿದ್ಯಾರ್ಥಿಯನ್ನು ಅಪಹರಿಸಿ ಆತನ ಮರ್ಮಾಂಗ ಕತ್ತರಿಸಿದ್ದ ಪ್ರಕರಣದಲ್ಲಿ ಸಂತ್ರಸ್ತ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

ಕಾಲೇಜಿಗೆಂದು ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಡ್ರಾಪ್‌ ಕೊಡುವ ನೆಪದಲ್ಲಿ ಮೂವರು ಅಪರಿಚಿತರು ಬಿಳಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ವಿದ್ಯಾರ್ಥಿಯ ಮರ್ಮಾಂಗವನ್ನು ಕತ್ತರಿಸಿ ಆತನನ್ನು ಗದ್ದೆಯಲ್ಲಿ ಬಿಸಾಡಿ ಪರಾರಿಯಾಗಿದ್ದರು.

ಘಟನೆಯಲ್ಲಿ ವಿದ್ಯಾರ್ಥಿಯ ಮರ್ಮಾಂಗಕ್ಕೆ ಶೇ.70ರಷ್ಟು ಗಾಯವಾಗಿತ್ತು. ಇದಾದ ಬಳಿಕ ವಿದ್ಯಾರ್ಥಿಯೇ ಪೋಷಕರಿಗೆ ಮೊಬೈಲ್‌ ಕರೆಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದ. ಬಳಿಕ ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮರ್ಮಾಂಗ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಅದು ಯಶಸ್ವಿಯಾಗಿದೆ. ವಿದ್ಯಾರ್ಥಿ ಅಪಾಯದಿಂದ ಪಾರಾಗಿದ್ದಾನೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿ ರುವ ವಿದ್ಯಾರ್ಥಿಯನ್ನು ಭಾನುವಾರದೊಳಗೆ ಸಾಮಾನ್ಯ ವಾರ್ಡ್‌ಗೆ ಶಿಫ್ಟ್‌ ಮಾಡಲಾಗುವುದು. ಬಾಲಕ ಘಟನೆಯ ಗಾಬರಿಯಿಂದ ಹೊರಬಂದಿಲ್ಲ. ಇನ್ನೂ ಎರಡು ದಿನ ಆತನಿಗೆ ಯಾವುದೇ ಒತ್ತಡ ಹಾಕಬೇಡಿ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆಂದು ವಿದ್ಯಾರ್ಥಿಯ ಪೋಷಕರು ತಿಳಿಸಿದ್ದಾರೆ.

ಘಟನೆ ನಡೆದ ಶಾಕ್‌ನಿಂದಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಹಾಗಾಗಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರಾಗಲಿ, ಪೋಷಕರಾಗಲಿ ಬಾಲಕನಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಶನಿವಾರ ಬೆಳಗ್ಗೆ ಪ್ರಜ್ಞೆಬಂದ ಬಳಿಕ ಪೋಷಕರು ಹೋಗಿ ವಿದ್ಯಾರ್ಥಿಯೊಂದಿಗೆ ಚರ್ಚಿಸಿದ ಸಂದರ್ಭದಲ್ಲಿ ಆತ ಗಾಬರಿಯಿಂದಲೇ 'ದುಷ್ಕೃತ್ಯ ಎಸಗಿದವರು ಯಾರೆಂದು ನನಗೆ ಗೊತ್ತಿಲ್ಲ, ಅವರನ್ನು ನಾನು ಇದೇ ಮೊದಲು ನೋಡಿದ್ದು, ಡ್ರಾಪ್‌ಕೊಡುವುದಾಗಿ ಕರೆದುಕೊಂಡು ಹೋಗಿ ಕೃತ್ಯವೆಸಗಿದರು' ಎಂದು ತಿಳಿಸಿದ್ದಾನೆ ಅಷ್ಟೆ. ಅದನ್ನು ಬಿಟ್ಟು ಬೇರೆ ಏನನ್ನೂ ತಿಳಿಸಿಲ್ಲ. ಪೊಲೀಸರಿಗೂ ಸಹ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇರುವ ಒಬ್ಬನೇ ಮಗನಿಗೆ ಹೀಗಾಯಿತಲ್ಲಎಂದು ಬೇಸರಗೊಂಡಿದ್ದೇವೆ. ಘಟನೆಯಿಂದ ನಮಗೆ ತುಂಬಾ ಭಯವಾಗಿದೆ. ಕೃತ್ಯವೆಸಗಿದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಶಿಕ್ಷೆ ಕೊಡಿಸಬೇಕು ಎಂದು ಪೋಷಕರು 'ವಿಜಯಕರ್ನಾಟಕ'ಕ್ಕೆ ತಿಳಿಸಿದರು.

''ಸಾಮಾನ್ಯವಾಗಿ ಇಂತಹ ಘಟನೆಗಳು ಹೆಚ್ಚು ನಡೆಯೋದಿಲ್ಲ. ಅಮಾಯಕ ಹುಡುಗನ್ನು ಕರೆದು ಕೊಂಡು ಹೋಗಿ ಮರ್ಮಾಂಗವನ್ನು ಕತ್ತರಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನುವುದಾದರೆ ಆತನನ್ನು ತೃತೀಯ ಲಿಂಗಿಯನ್ನಾಗಿಸುವ ಹುನ್ನಾರ ನಡೆಸಿರಬಹು ದೇನೋ,'' ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ