ಆ್ಯಪ್ನಗರ

ಪಿಕ್‌ಪಾಕೆಟರ್‌ ಹಿಡಿದು ಪೊಲೀಸರಿಗೊಪ್ಪಿಸಿದ ವಿದ್ಯಾರ್ಥಿಗಳು

ಪಟ್ಟಣದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಂದ ಪಿಕ್‌ ಪಾಕೆಟ್‌ ಮಾಡಿ 30ಸಾವಿರ ರೂ. ಕದ್ದಿದ್ದ ವ್ಯಕ್ತಿಯನ್ನು ವಿದ್ಯಾರ್ಥಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಟ್ಟಣದಲ್ಲಿ ಇಂದು ಬೆಳಿಗ್ಗೆ 8.30ಗಂಟೆ ಸಮಯದಲ್ಲಿ ನಡೆದಿದೆ.

Vijaya Karnataka 22 May 2018, 5:00 am
ಕೆ.ಆರ್‌.ಪೇಟೆ: ಪಟ್ಟಣದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಂದ ಪಿಕ್‌ ಪಾಕೆಟ್‌ ಮಾಡಿ 30ಸಾವಿರ ರೂ. ಕದ್ದಿದ್ದ ವ್ಯಕ್ತಿಯನ್ನು ವಿದ್ಯಾರ್ಥಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಟ್ಟಣದಲ್ಲಿ ಇಂದು ಬೆಳಿಗ್ಗೆ 8.30ಗಂಟೆ ಸಮಯದಲ್ಲಿ ನಡೆದಿದೆ.
Vijaya Karnataka Web students catch pickpocket er
ಪಿಕ್‌ಪಾಕೆಟರ್‌ ಹಿಡಿದು ಪೊಲೀಸರಿಗೊಪ್ಪಿಸಿದ ವಿದ್ಯಾರ್ಥಿಗಳು


ಮೈಸೂರಿನ ಕೆಸರೆ ಬಡಾವಣೆಯ ನಿವಾಸಿ ಸಲ್ಮಾನ್‌(30) ಸಿಕ್ಕಿಬಿದ್ದ ಪಿಕ್‌ಪಾಕೆಟರ್‌. ಪಟ್ಟಣದ ಅಗ್ರಹಾರ ಬಡಾವಣೆಯ ನಿಂಬೆ ಹಣ್ಣ ವ್ಯಾಪಾರಿ ಮಹೇಶ್‌ ಎಂಬುವವರು ನಿಂಬೆಹಣ್ಣು ಖರೀದಿಗೆಂದು ಮೈಸೂರಿಗೆ ಹೋಗುವ ಸಲುವಾಗಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಬಸ್ಸಿಗೆ ಹತ್ತಲು ನೂಕು ನುಗ್ಗಲು ಉಂಟಾಗಿತ್ತು ಇದೇ ಸಮಯವನ್ನು ಉಪಯೋಗಿಸಿಕೊಂಡ ಆರೋಪಿ ಸಲ್ಮಾನ್‌, ಮಹೇಶ್‌ ಅವರ ಜೇಬಿನಲ್ಲಿದ್ದ ಹಣವನ್ನು ಕದ್ದು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಇದೇ ಸಂದರ್ಭದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಸಲ್ಮಾನ್‌ನನ್ನು ಹಣದ ಸಮೇತ ಹಿಡಿದು ಮಹೇಶ್‌ ಅವರಿಗೆ ಹಣ ವಾಪಸ್‌ ಕೊಡಿಸಿದರು. ಇದೇ ವೇಳೆ ಸಾರ್ವಜನಿಕರು ಆರೋಪಿ ಸಲ್ಮಾನ್‌ಗೆ ಧರ್ಮದೇಟು ನೀಡಿ ಪಟ್ಟಣ ಪೊಲೀಸರಿಗೆ ಒಪ್ಪಿಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ಸಬ್‌ಇನ್ಸ್‌ಪೆಕ್ಟರ್‌ಎಚ್‌.ಎಸ್‌.ವೆಂಕಟೇಶ್‌ ಅವರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ