ಆ್ಯಪ್ನಗರ

ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಆದ್ಯತೆ

ಮಂಡ್ಯ ಜಿಲ್ಲೆಯ ರೈತರ ಜೀವನಾಡಿಗ ಮೈಷುಗರ್‌ ಸಕ್ಕರೆ ಕಾರ್ಖಾನೆ, ಪಾಂಡವಪುರ ಮತ್ತು ಚುಂಚನಕಟ್ಟೆ ಸಹಕಾರಿ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಪ್ರಥಮ ಆದ್ಯತೆಯನ್ನು ನೀಡುವುದಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಹೇಳಿದರು.

Vijaya Karnataka 12 Apr 2019, 5:00 am
ಕೆ.ಆರ್‌.ಪೇಟೆ: ಮಂಡ್ಯ ಜಿಲ್ಲೆಯ ರೈತರ ಜೀವನಾಡಿಗ ಮೈಷುಗರ್‌ ಸಕ್ಕರೆ ಕಾರ್ಖಾನೆ, ಪಾಂಡವಪುರ ಮತ್ತು ಚುಂಚನಕಟ್ಟೆ ಸಹಕಾರಿ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಪ್ರಥಮ ಆದ್ಯತೆಯನ್ನು ನೀಡುವುದಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಹೇಳಿದರು.
Vijaya Karnataka Web MDY-MDY11APRKRP8


ತಾಲೂಕಿನ ಸಾರಂಗಿ, ಕೊಟಗಹಳ್ಳಿ, ಸಂತೆಬಾಚಹಳ್ಳಿ, ಅಘಲಯ, ಭಾರತಿಪುರ ಕ್ರಾಸ್‌ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಭೆಯ ಆರಂಭಕ್ಕೂ ಮುನ್ನ ವರುಣನ ಸಿಂಚನವಾಗುವ ಮೂಲಕ ಸುಮಲತಾ ಅವರಿಗೆ ವರುಣನ ಆಶೀರ್ವಾದವೂ ದೊರೆಯಿತು.

ವಿಸಿ ಫಾರಂನಲ್ಲಿ ಕಬ್ಬು ಸಂಶೋಧನಾ ಉನ್ನತೀಕರಣ, ರೇಷ್ಮೆ ಮತ್ತು ಭತ್ತ ತಳಿಗಳ ಸಂಶೋಧನಾ ಕೇಂದ್ರ, ಅಂಬರೀಷ್‌ ಅವರ ಹೆಸರಿನಲ್ಲಿ ಜಿಲ್ಲೆಯ ಯುವಕ ಯುವತಿಯರಿಗೆ ಅನುಕೂಲವಾಗುವಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಸ್ಥಾಪನೆ ಸೇರದಿಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದುಡಿಯುವುದಾಗಿ ಸುಮಲತಾ ಘೋಷಿಸಿದರು.

ನನ್ನೊಂದಿಗೆ ಓಡಾಡಿಕೊಂಡು ನನ್ನ ಗೆಲುವಿಗಾಗಿ ದುಡಿಯುತ್ತಿರುವ ಕಾಂಗ್ರೆಸ್‌ ಪಕ್ಷ ದ ಮುಖಂಡರು ಹಾಗೂ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷ ದಿಂದ ಉಚ್ಛಾಟಿಸಿ ಪಕ್ಷ ವನ್ನು ಜಿಲ್ಲೆಯಲ್ಲಿ ನಿರ್ನಾಮ ಮಾಡಲು ಹೊರಟಿರುವ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ್‌ ಹಾಗೂ ರಾಜ್ಯ ಕಾಂಗ್ರೆಸ್‌ ಮುಖಂಡರಿಗೆ ಇನ್ನೇನು ತಾನೆ ಮಾಡಲು ಸಾಧ್ಯವಿದೆ. ಜಿಲ್ಲೆಯ ಜನರು ನನ್ನೊಂದಿಗಿದ್ದಾರೆ. ನನ್ನನ್ನು ನಂಬಿ ನನ್ನ ಹಿಂದೆ ಬಂದಿರುವ ಕಾರ್ಯಕರ್ತರ ಹಿತ ಕಾಯಲು ನಾನು ಬದ್ಧಳಾಗಿದ್ದೇನೆ ಎಂದು ತಿಳಿಸಿದರು.

ಸುಮಲತಾ ಅಂಬರೀಶ್‌ ಅವರು ಗುರುವಾರ ತಾಲೂಕಿನ ಸಂತೇಬಾಚಹಳ್ಳಿ ಮತ್ತು ಕಿಕ್ಕೇರಿ ಹೋಬಳಿಯ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಕಾಂಗ್ರೇಸ್‌ ಪಕ್ಷ ವನ್ನು ಸದೃಢÜವಾಗಿ ಕಟ್ಟುವ ಬದಲಿಗೆ ಜೆಡಿಎಸ್‌ ಪಕ್ಷ ದೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ ಕಾರ್ಯಕರ್ತರ ಭಾವನೆಗಳಿಗೆ ಆಘಾತವನ್ನು ಉಂಟುಮಾಡಿರುವುದೆ ಅಲ್ಲದೇ ನಿಷ್ಠಾವಂತ ಕಾರ್ಯಕರ್ತರು ಹಾಗೂ ಪಕ್ಷ ದ ಮುಖಂಡರಿಗೆ ಉಚ್ಛಾಟನೆಯ ಶಿಕ್ಷೆಯನ್ನು ನೀಡಲಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರಾರ‍ಯರೂ ಹೆದರಬೇಕಾಗಿಲ್ಲ. ನಿಮ್ಮೊಂದಿಗೆ ನಾನಿದ್ದೇನೆ ಏನು ಮಾಡುತ್ತಾರೋ ನೋಡೋಣ ಜಿಲ್ಲೆಯ ಜನತೆ ನಮ್ಮೊಂದಿಗಿರುವುದರಿಂದ ನಾವ್ಯಾರೂ ಹೆದರಬೇಕಾಗಿಲ್ಲ ಎಂದು ಹೇಳಿದರು.

ನನ್ನನ್ನು ಪರಾಭವಗೊಳಿಸಲು ಇಡಿ ಸರಕಾರವೇ ನನ್ನ ವಿರುದ್ಧ ನಿಂತಿದೆ. ನನ್ನ ವಿರುದ್ಧ ವ್ಯಾಪಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಕೋಮುವಾದಿ ಬಿಜೆಪಿ ಪಕ್ಷ ವನ್ನು ಸೇರುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ನನಗೆ ಬಿಜೆಪಿ ಪಕ್ಷ ದ ವರಿಷ್ಠರು ಯಾವುದೇ ನಿಬಂಧನೆಗಳಿಲ್ಲದೆ ಬೇಷರತ್‌ ಬೆಂಬಲ ನೀಡಿದ್ದಾರೆ. ನಿನ್ನೆ ಮೈಸೂರಿನಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಅಂಬರೀಶ್‌ ಅವರನ್ನು ಹೊಗಳಿರುವ ಪ್ರಧಾನಮಂತ್ರಿ ಮೋದಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹೋರಾಟ ನಡೆಸುತ್ತಿರುವ ಒಬ್ಬ ಹೆಣ್ಣು ಮಗಳ ಸ್ವಾಭಿಮಾನದ ಹೋರಾಟಕ್ಕೆ ಜಯ ನೀಡುವಂತೆ ಮನವಿ ಮಾಡಿದ್ದಾರೆ ಅಷ್ಟೇ. ಇದಕ್ಕೆ ಯಾವುದೇ ವಿಶೇಷ ಅರ್ಥವನ್ನು ಕಲ್ಪಿಸಬೇಕಾಗಿಲ್ಲ ಎಂದು ಸ್ಪಷ್ಠಪಡಿಸಿದ ಸುಮಲತಾ ಜಿಲ್ಲೆಯ ಸ್ವಾಭಿಮಾನದ ಉಳಿವಿಗಾಗಿ ಜನಶಕ್ತಿಯ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ನನ್ನನ್ನು ಹರಸಿ ಆಶೀರ್ವದಿಸಬೇಕೆಂದು ಕೈಮುಗಿದು ಮನವಿ ಮಾಡಿದರು.

ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ಜಿಲ್ಲಾ ಪಂಚಾಯಿತಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಮನ್‌ಮುಲ್‌ ನಿರ್ದೇಶಕರಾದ ಡಾಲುರವಿ, ಮುಖಂಡ ಸಣ್ಣಲಿಂಗೇಗೌಡ, ಪುರಸಭೆ ಮಾಜಿ ಅಧ್ಯಕ್ಷೆ ಶಕುಂತಲಾ, ತಾಲೂಕು ಮಹಿಳಾ ಕಾಂಗ್ರೆಸ್‌ ನಗರ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮಿರಾಜಶೇಖರ್‌, ಮುಖಂಡ ಹಾದನೂರು ಪರಮೇಶ್‌, ತಾಲೂಕು ವೀರಶೈವ ಮಹಾಸಭಾದ ಮಾಜಿಅಧ್ಯಕ್ಷ ಸಾಸಲು ಈರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ