ಆ್ಯಪ್ನಗರ

ಮಂಡ್ಯಕ್ಕೆ ಸುಮಲತಾ ಅಂಬರೀಷ್‌ ಭೇಟಿ

ಲೋಕಸಭೆ ಚುನಾವಣೆ ನಂತರ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಮತ್ತು ಪುತ್ರ ಅಭಿಷೇಕ್‌ ಸಿಂಗಪುರಕ್ಕೆ ತೆರಳಲಿದ್ದಾರೆ ಎಂಬ ವದಂತಿಗೆ ಭಾನುವಾರ ಮಂಡ್ಯಕ್ಕೆ ಭೇಟಿ ನೀಡುವ ಮೂಲಕವೇ ತಿರುಗೇಟು ನೀಡಿದ್ದಾರೆ.

Vijaya Karnataka 22 Apr 2019, 5:00 am
ಸಿಂಗಪುರಕ್ಕೆ ತೆರಳುತ್ತಾರೆ ಎಂಬ ವದಂತಿಗೆ ಉತ್ತರ | ಅಂಬಿ ಅಭಿಮಾನಿ ವಿವಾಹದಲ್ಲಿ ಭಾಗಿ
Vijaya Karnataka Web sumalatha ambarish visits mandya
ಮಂಡ್ಯಕ್ಕೆ ಸುಮಲತಾ ಅಂಬರೀಷ್‌ ಭೇಟಿ


ಮಂಡ್ಯ:
ಲೋಕಸಭೆ ಚುನಾವಣೆ ನಂತರ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಮತ್ತು ಪುತ್ರ ಅಭಿಷೇಕ್‌ ಸಿಂಗಪುರಕ್ಕೆ ತೆರಳಲಿದ್ದಾರೆ ಎಂಬ ವದಂತಿಗೆ ಭಾನುವಾರ ಮಂಡ್ಯಕ್ಕೆ ಭೇಟಿ ನೀಡುವ ಮೂಲಕವೇ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ಮುಗಿದ ಬಳಿಕ ಏ. 19ರಂದು ಸುಮಲತಾ ಮತ್ತು ಅಭಿಷೇಕ್‌ ಸಿಂಗಪುರಕ್ಕೆ ತೆರಳಿದ್ದಾರೆ ಎಂದು ಬಿಂಬಿಸುವ ಫ್ಲೈಟ್‌ ಟಿಕೆಟ್‌ ಅನ್ನು ವೈರಲ್‌ ಮಾಡಲಾಗಿತ್ತು. ಅಲ್ಲದೇ, ಚುನಾವಣೆ ನಂತರ ಸಿನಿಮಾದವರ ಟೂರಿಂಗ್‌ ಟಾಕೀಸ್‌ ಖಾಲಿಯಾಗಲಿದೆ ಎನ್ನುವ ವಿರೋಧಿಗಳ ಹೇಳಿಕೆಗೆ ಸುಮಲತಾ ಮತ್ತು ಅಭಿಷೇಕ್‌ ಜಿಲ್ಲಾ ಭೇಟಿ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ಏ. 19ರಂದು ನಗರಕ್ಕೆ ಆಗಮಿಸಿದ್ದ ಅಭಿಷೇಕ್‌ ಚುನಾವಣಾ ಪ್ರಚಾರದ ವೇಳೆ ಕೊಟ್ಟ ಮಾತಿನಂತೆ ಅಂಬಿ ಅಭಿಮಾನಿಯೊಬ್ಬರ ಅಂಗಡಿಗೆ ಭೇಟಿ ನೀಡಿ ಟೀ ಸವಿದು ನಾನು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದೇನೆ ಎಂದಿದ್ದರು. ಭಾನುವಾರ ಸುಮಲತಾ ಅಂಬರೀಷ್‌ ಮಂಡ್ಯ ನಗರಕ್ಕೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿ ತಮಗಾಗಿ ಚುನಾವಣೆಯಲ್ಲಿ ದುಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ಬಳಿಕ ನಗರದ ಗ್ರೀನ್‌ ಪ್ಯಾಲೇಸ್‌ನಲ್ಲಿ ನಡೆದ ಮಂಡ್ಯ ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಬಾಮೈದ, ಅಂಬಿ ಅಭಿಮಾನಿಯೂ ಆದ ಅಭಿಷೇಕ್‌ ಪಣ್ಣೇದೊಡ್ಡಿ-ಸುಷ್ಮಿತ ಗಂಟಗೌಡನದೊಡ್ಡಿ ವಿವಾಹ ಮಹೋತ್ಸದಲ್ಲಿ ಭಾಗವಹಿಸಿ ವಧು-ವರರಿಗೆ ಶುಭಕೋರುವ ಮೂಲಕ ಜಿಲ್ಲೆಯ ಜನರ ಜತೆ ಇರುತ್ತೇವೆ ಎಂಬ ಸಂದೇಶ ರವಾನಿಸಿದರು. ನಟ ದೊಡ್ಡಣ್ಣ, ಮುಖಂಡರಾದ ಸಚ್ಚಿದಾನಂದ, ಬೇಲೂರು ಸೋಮಶೇಖರ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ