ಆ್ಯಪ್ನಗರ

ಬೈಕ್‌ಗೆ ಸುಮೋ ಡಿಕ್ಕಿ: ಯುವಕ ಸಾವು

ಇಬ್ಬರಿಗೆ ತೀವ್ರ ಗಾಯ: ದೊಡ್ಡರಸಿನಕೆರೆ ಗೇಟ್‌ ಬಳಿ ಘಟನೆ

Vijaya Karnataka 17 Sep 2018, 5:00 am
ಭಾರತೀನಗರ (ಮಂಡ್ಯ): ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ದೊಡ್ಡರಸಿನಕೆರೆ ಗೇಟ್‌ ಬಳಿ ಭಾನುವಾರ ಸಂಜೆ ಬೈಕ್‌ಗೆ ಪ್ರವಾಸಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಂಭೀರಗೊಂಡಿದ್ದಾರೆ.
Vijaya Karnataka Web sumo collides with bike young man dies
ಬೈಕ್‌ಗೆ ಸುಮೋ ಡಿಕ್ಕಿ: ಯುವಕ ಸಾವು


ಕೆ.ಎಂ.ದೊಡ್ಡಿ ನಿವಾಸಿ ವಿಜಯ್‌ಕುಮಾರ್‌(30) ಮೃತ. ಭಾರತೀನಗರದ ಪೆಟ್ರೋಲ್‌ ಬಂಕ್‌ ಮಾಲೀಕ ದೊಡ್ಡಣ್ಣ ಅವರ ಪುತ್ರ ಶಿವಪ್ಪ(35), ಸುನಿಲ್‌ಕುಮಾರ್‌(28) ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾನುವಾರ ಸಂಜೆ 6ರ ಸುಮಾರಿಗೆ ಈ ಮೂವರು ಯುವಕರು ಬೈಕ್‌ನಲ್ಲಿ ಮದ್ದೂರು ಕಡೆಗೆ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಪ್ರಯಾಣಿಕರನ್ನು ಕರೆದೊಯ್ಯುವ ಸುಮೋ ವಾಹನ ಡಿಕ್ಕಿ ಹೊಡೆದಿದೆ. ವಿಜಯ್‌ಕುಮಾರ್‌ ಸ್ಥಳದಲ್ಲೇ ಅಸುನೀಗಿದರೆ, ಶಿವಪ್ಪ ಹಾಗೂ ಸುನಿಲ್‌ಕುಮಾರ್‌ ರಸ್ತೆ ಸಮೀಪದ ಗದ್ದೆಗೆ ಬಿದ್ದು, ಗಾಯಗೊಂಡಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುಗಳನ್ನು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಿದರು.

ಅಪಘಾತಕ್ಕೆ ಬ್ಯಾರಿಕೇಡ್‌ ಕಾರಣ: ಅಪಘಾತ ಸಂಭವಿಸಲು ರಸ್ತೆ ಮಧ್ಯೆ ಇಡಲಾಗಿದ್ದ ಬ್ಯಾರಿಕೇಡ್‌ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆಯ ಬಳಿ ಹೆದ್ದಾರಿಯ ಕಾಮಗಾರಿ ನಡೆಸುತ್ತಿರುವುದರಿಂದ ಕಾವೇರಿ ಕುಡಿಯುವ ನೀರಿನ ಪೈಪ್‌ಲೈನ್‌ ಒಡೆದು ಸಣ್ಣದಾಗಿ ನೀರು ಹರಿಯುತ್ತಿತ್ತು. ಇದು ಹಲವು ದಿನಗಳಿಂದಲೂ ಹರಿಯುತ್ತಿದ್ದು, ಇದನ್ನು ಸರಿಪಡಿಸುವ ಗೋಜಿಗೆ ಯಾರೂ ಮುಂದಾಗಿರಲಿಲ್ಲ. ಕೆ.ಎಂ.ದೊಡ್ಡಿ ಠಾಣಾ ಪೊಲೀಸರು ಆ ಸ್ಥಳದಲ್ಲಿ ರಸ್ತೆ ಕಿರಿದಾಗಿದ್ದರೂ ಬ್ಯಾರಿಕೇಡ್‌ ಇಟ್ಟಿದ್ದರು. ಇದೇ ಅಪಘಾತಕ್ಕೆ ಕಾರಣವೆಂದು ಆರೋಪಿಸಲಾಗಿದೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವಪರೀಕ್ಷೆ ನಡೆಯಿತು. ಕೆ.ಎಂ.ದೊಡ್ಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ