ಆ್ಯಪ್ನಗರ

ಒಕ್ಕಲಿಗ ಅಧಿಕಾರಿಗಳು ಟಾರ್ಗೆಟ್‌: ಆರೋಪ

ಸಿಎಂ ಯಡಿಯೂರಪ್ಪ ಒಕ್ಕಲಿಗ ಅಧಿಕಾರಿಗಳನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

Vijaya Karnataka 4 Aug 2019, 5:00 am
ಕೆ.ಆರ್‌.ಪೇಟೆ: ಸಿಎಂ ಯಡಿಯೂರಪ್ಪ ಒಕ್ಕಲಿಗ ಅಧಿಕಾರಿಗಳನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
Vijaya Karnataka Web target of vokkaliga officers accused
ಒಕ್ಕಲಿಗ ಅಧಿಕಾರಿಗಳು ಟಾರ್ಗೆಟ್‌: ಆರೋಪ


ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ''ಒಕ್ಕಲಿಗ ಅಧಿಕಾರಿಗಳನ್ನು ಯಾವ ರೀತಿ ಚೆಂಡಾಡುತ್ತಿದ್ದೀರಿ ಅಂತ ಗೊತ್ತು. ಐಪಿಎಸ್‌ ಅಧಿಕಾರಿ ರವಿಕಾಂತೇಗೌಡ ನಿಮಗೆ ಏನು ಮಾಡಿದ್ದರು? ಕುಮಾರಸ್ವಾಮಿ ಅಭಿಮಾನಿ ಎಂದು ಆ ರೀತಿ ಮಾಡುತ್ತಿದ್ದೀರಾ?,''ಎಂದು ಟೀಕಿಸಿದರು.

ನಿಖಿಲ್‌ ಸ್ಪರ್ಧೆ ಇಲ್ಲ; ಉಪ ಚುನಾವಣೆಯಲ್ಲಿ ಕೆ.ಆರ್‌.ಪೇಟೆಯಲ್ಲಿ ನಿಖಿಲ್‌ ಸ್ಪರ್ಧೆ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಕೆಆರ್‌ ಪೇಟೆಯವರನ್ನೇ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತೇವೆ ಎಂದರು.

-------

ಸುಮಲತಾ ವಿರುದ್ಧ ಟೀಕೆ

ನಾನು ಮಂಡ್ಯ ರೈತರ ಬೆಳೆಗೆ ನೀರು ಕೊಟ್ಟರೆ ವೋಟು ಹಾಕಿಸಿಕೊಳ್ಳಲು ನೀರು ಬಿಟ್ಟಿದ್ದಾರೆ ಎಂದು ಟೀಕಿಸುತ್ತಾರೆ. ಅವರು ಮಾತ್ರ ನಾವು ಸ್ವಾಭಿಮಾನ ಉಳಿಸಿಕೊಳ್ಳಲು ಬಂದೆ ಎನ್ನುತ್ತಾರೆ. ಈಗ ಹೇಗೂ ಸ್ವಾಭಿಮಾನ ಉಳಿಯಿತಲ್ಲಾ ಎಂದು ಕುಮಾರಸ್ವಾಮಿಯವರು ಸಂಸದೆ ಸುಮಲತಾ ವಿರುದ್ಧ ಪರೋಕ್ಷ ಟೀಕೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ