ಆ್ಯಪ್ನಗರ

ಶ್ರೀರಂಗಪಟ್ಟಣ: ಶಿಕ್ಷಕರೇ ಕೈ ಕೈ ಮಿಲಾಯಿಸಿದರು!

ಶಟ್‌ ಕಾಲರ ಹಿಡಿದು ಎಳೆದಾಡಿದರು...

Vijaya Karnataka 23 Sep 2018, 5:00 am
ಶ್ರೀರಂಗಪಟ್ಟಣ: ಪಟ್ಟಣದ ಮಹಾಲಕ್ಷ್ಮಿ ಕಲ್ಯಾಣ ಮಂದಿರದಲ್ಲಿ ಶನಿವಾರ ನಡೆದ ವಿದ್ಯಾ ಇಲಾಖಾ ನೌಕರರ ಸಂಘ 2017-18 ನೇ ವಾರ್ಷಿಕ ಮಹಾಸಭೆಯಲ್ಲಿ ಶಿಕ್ಷ ಕರೇ ಪರಸ್ಪರ ಕೈ ಕೈ ಮಿಲಾವಣೆ ಮಾಡಿದ ಘಟನೆ ನಡೆಯಿತು.
Vijaya Karnataka Web teacher fighting in srirangapattana
ಶ್ರೀರಂಗಪಟ್ಟಣ: ಶಿಕ್ಷಕರೇ ಕೈ ಕೈ ಮಿಲಾಯಿಸಿದರು!


ವಿದ್ಯಾ ಇಲಾಖಾ ನೌಕರರ ಸಂಘದ ಅಧ್ಯಕ್ಷ ಎಚ್‌.ರಾಘವೇಂದ್ರ ಅಧ್ಯಕ್ಷೀಯ ಭಾಷಣ ಮಾಡುವಾಗ ಮಧ್ಯ ಪ್ರವೇಶ ಮಾಡಿದ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಎಚ್‌.ಟಿ ರಾಜಶೇಖರ್‌ ಸದಸ್ಯರ ಪ್ರಶ್ನಾವಳಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಸದಸ್ಯರ ಪ್ರಶ್ನೆಗೆ ಅವಕಾಶ ನೀಡಿದಾಗ ನಿರ್ದೇಶಕ ಎಂ.ವಿ ರವಿಕುಮಾರ್‌, ''ಅಧ್ಯಕ್ಷ ರು ಈ ಹಿಂದಿನ ಸಭೆಯನ್ನು ಕೋರಂ ಇಲ್ಲದೇ ನಡೆಸಿದ್ದಾರೆ. ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ'' ಎಂದು ಹರಿಹಾಯ್ದರು. ಸ್ಥಳದಲ್ಲಿಯೇ ಇದ್ದ ಸಹಕಾರಿ ಅಭಿವೃದ್ಧಿ ಅಧಿಕಾರಿ ಕೆ.ಪ್ರಭಾಕರ್‌ ಅವರನ್ನು ''ಕೋರಂ ಇಲ್ಲದೇ ಸಭೆ ನಡೆಸಲು ಹೇಗೆ ಅವಕಾಶ ನೀಡಿದ್ದೀರಿ'' ಎಂದು ಪ್ರಶ್ನಿಸಿದರು. ಈ ವೇಳೆ ಪ್ರಶ್ನೆಗೆ ಉತ್ತರಿಸಲು ಮುಂದಾಗುತ್ತಿದ್ದಂತೆ, ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಎಚ್‌.ಟಿ ರಾಜಶೇಖರ್‌ ಹಾಗೂ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಮಾಜಿ ಅಧ್ಯಕ್ಷ ಸಿದ್ದಲಿಂಗು ಬೆಂಬಲಿಗ ಶಿಕ್ಷ ಕರ ನಡುವೆ ಮಾತಿನ ಮಾತಿನ ಚಕಮಕಿ ಆರಂಭವಾಯಿತು ಪರಸ್ಪರ ಕೈ ಮಿಲಾವಣೆ ಹಂತಕ್ಕೂ ತಲುಪಿತು.

ಅಧ್ಯಕ್ಷ ರಾಘವೇಂದ್ರ ಬೆಂಬಲಿಗ, ಶಿಕ್ಷ ಕ ಶಂಕರೇಗೌಡ ಪ್ರಶ್ನೆ ಕೇಳಿದ ರವಿಕುಮಾರ್‌ಗೆ ಕೈ ಮಿಲಾಯಿಸಲು ಮುಂದಾದರು. ಈ ವೇಳೆ ಎರಡು ಗುಂಪುಗಳ ಮಧ್ಯೆ ವಾಕ್ಸಮರ ತಾರಕಕ್ಕೇರಿತು. ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಎಚ್‌.ಟಿ ರಾಜಶೇಖರ್‌ ಹಾಗೂ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಮಾಜಿ ಅಧ್ಯಕ್ಷ ಸಿದ್ದಲಿಂಗು ಬೆಂಬಲಿಗ ಶಿಕ್ಷ ಕರು ಏಕವಚನದಲ್ಲಿಯೇ ಪರಸ್ಪರ ನಿಂದಿಸಿಕೊಂಡರು. ಶರ್ಟ್‌ ಕಾಲರ್‌ಗೆ ಕೈ ಹಾಕಿದರು. ಶಿಕ್ಷ ಕರೂ ಎನ್ನುವುದನ್ನು ಮರೆತು ಅಸಭ್ಯವಾಗಿ ನಡೆದುಕೊಂಡರು. ಈ ವೇಳೆ ಶಿಕ್ಷ ಕಿಯರು ಮಧ್ಯ ಪ್ರವೇಶಿಸಿ ''ನಿಮ್ಮ ವರ್ತನೆಯಿಂದ ಶಿಕ್ಷ ಕರ ಘನತೆಗೆ ಕುಂದು ಬರುತ್ತದೆ. ಪರಸ್ಪರ ಕಚ್ಚಾಡುವುದನ್ನು ಬಿಡಿ'' ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ವಾರ್ಷಿಕ ಮಹಾಸಭೆಯಲ್ಲಿ ವಿತರಣೆ ಮಾಡಿದ ಕಿಟ್‌ಗಳನ್ನು ಪಡೆದುಕೊಂಡು ಸದಸ್ಯರು ಹೊರ ನಡೆದರು. ಅಧ್ಯಕ್ಷ ರ ಭಾಷಣ ಮೊಟಕುಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ