ಆ್ಯಪ್ನಗರ

ಕೆಆರ್‌ಎಸ್‌ ಅಣೆಕಟ್ಟೆ ಬಳಿ ಪರೀಕ್ಷಾರ್ಥ ಸ್ಠೋಟಕ ತಯಾರಿಗೆ ಅವಕಾಶ ನೀಡಬಾರದು

ಕೆಆರ್‌ಎಸ್‌ ಅಣೆಕಟ್ಟೆ ಬಳಿ ಪರೀಕ್ಷಾರ್ಥ ಸ್ಪೋಟಕ ತಯಾರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ರೈತ ಸಂಘ ಕಾರ‍್ಯಕರ್ತರು ಕೆಆರ್‌ಎಸ್‌ ಕಾವೇರಿ ನೀರಾವರಿ ನಿಗಮ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Vijaya Karnataka 26 Jan 2019, 5:00 am
ಶ್ರೀರಂಗಪಟ್ಟಣ : ಕೆಆರ್‌ಎಸ್‌ ಅಣೆಕಟ್ಟೆ ಬಳಿ ಪರೀಕ್ಷಾರ್ಥ ಸ್ಪೋಟಕ ತಯಾರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ರೈತ ಸಂಘ ಕಾರ‍್ಯಕರ್ತರು ಕೆಆರ್‌ಎಸ್‌ ಕಾವೇರಿ ನೀರಾವರಿ ನಿಗಮ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Vijaya Karnataka Web testing near the krs dam do not allow
ಕೆಆರ್‌ಎಸ್‌ ಅಣೆಕಟ್ಟೆ ಬಳಿ ಪರೀಕ್ಷಾರ್ಥ ಸ್ಠೋಟಕ ತಯಾರಿಗೆ ಅವಕಾಶ ನೀಡಬಾರದು


ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿಸುರೇಶ್‌ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ಕಾರ‍್ಯಕರ್ತರು ಕೆಆರ್‌ಎಸ್‌ ಬಳಿ ಗಣಿಗಾರಿಕೆಗೆ ಒತ್ತು ನೀಡುವ ಉದ್ದೇಶದಿಂದ ಪರೀಕ್ಷಾರ್ಥ ಸ್ಪೋಟಕಕ್ಕೆ ಅವಕಾಶ ನೀಡಿದ್ದೀರಿ. ಕೆಆರ್‌ಎಸ್‌ ಅಣೆಕಟ್ಟೆ ಸುತ್ತಮುತ್ತ ಸ್ಪೋಟಕ, ಮೆಗ್ಗರ್‌ ಬ್ಲಾಸ್ಟರ್‌ಮ ಬೋರ್‌ ಬ್ಲಾಸ್ಟ್‌ ,ಆಡಿದಾಗ ಅಣೆಕಟ್ಟೆಗೆ ಎದುರಾಗಿರುವ ಅಪಾಯಗಳು ಖಚಿವಾಗಿವೆ ಆದಾಗ್ಯೂ ಅಣೆಕಟ್ಟೆಗೆ ಯಾವುದೇ ಅಪಾಯವಿಲ್ಲವೆಂಬ ವರದಿ ಪಡೆಯುವ ಸಂಚಿನಿಂದ ಪ್ರಾಯೋಗಿಕ ಸ್ಪೋಟಕ ತಯಾರಿಗೆ ಅನುಮತಿ ನೀಡಿದ್ದೀರಿ ತಂಡವನ್ನು ವಾಪಾಸ್‌ ಕಳುಹಿಸಬೇಕು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಕಾವೇರಿ ನೀರಾವರಿ ನಿಗಮ ಕಾರ‍್ಯಪಾಲಕ ಎಂಜಿನಿಯರ್‌ ಬಸವರಾಜೇಗೌಡ ಮಾತನಾಡಿ ಸರಕಾರದ ಆದೇಶದಂತೆ ಪ್ಮಣೆಯ ಸಿಡಬ್ಲ್ಯೂಪಿಆರ್‌ಎಸ್‌ ವಿಜ್ನಾನಿಗಳ ತಂಡ ಹೆಚ್ಚುವರಿ ಪರೀಕ್ಷೆಗಾಗಿ ಸೋಮವಾರ ಆಗಮಿಸುತ್ತಿದೆ ಅಣೆಕಟ್ಟೆ ಭದ್ರತೆ ದೃಷ್ಟಿಯಿಂದ ಪರಿಶೀಲನೆ ನಡೆಸಲಾಗುತ್ತಿದೆ. ನೀವು ಬನ್ನಿ ವಿಜ್ನಾನಿಗಳಿಂದಲೇ ಮಾಹಿತಿ ಪಡೆಯಿರಿ ನಮ್ಮದೇನು ಅಭ್ಯಂತರ ಇಲ್ಲ, ಜಿಲ್ಲಾಧಿಕಾರಿಗಳ ಆದೇಶ ಪಾಲನೆ ಮಾಡುತ್ತೇವೆ ಎಂದು ಹೇಳಿದರು. ಸೋಮವಾರ ನಾವು ಸ್ಥಳಕ್ಕೆ ಬರುತ್ತೇವೆ ವಿಜ್ನಾನಿಗಳು ಅಣೆಕಟ್ಟೆಗೆ ಅಪಾಯ ಎಂದು ಹೇಳಿದರೆ ಶಾಶ್ವತವಾಗಿ ಗಣಿಗಾರಿಕೆ ಮುಚ್ಚುವಂತೆ ಹೋರಾಟ ನಡೆಸಲಾಗುವುದು ಎಂದು ಜಿ.ಪಂ ಮಾಜಿ ಸದಸ್ಯ ಕೆಂಪೂಗೌಡ, ಬಾ.ಮ ಮಲ್ಲೇಶ್‌, ಪಿ.ನಾಗರಾಜು ಇತರರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ