ಆ್ಯಪ್ನಗರ

ಶವ ಶೋಧ ವೇಳೆ ಮಗುಚಿದ ಬೋಟ್‌

- ಅಗ್ನಿಶಾಮಕ ದಳದ ಐವರು ಸಿಬ್ಬಂದಿ ಪಾರು ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ಎರಡು ದಿನಗಳ ಹಿಂದೆ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಮೃತದೇಹದ ಶೋಧ ...

Vijaya Karnataka 28 Jul 2018, 5:00 am
- ಅಗ್ನಿಶಾಮಕ ದಳದ ಐವರು ಸಿಬ್ಬಂದಿ ಪಾರು
Vijaya Karnataka Web the boat that shook the corpse in srirangapattana
ಶವ ಶೋಧ ವೇಳೆ ಮಗುಚಿದ ಬೋಟ್‌

ಶ್ರೀರಂಗಪಟ್ಟಣ: ಎರಡು ದಿನಗಳ ಹಿಂದೆ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಮೃತದೇಹದ ಶೋಧ ಕಾರ‍್ಯದಲ್ಲಿ ತೊಡಗಿದ್ದ ಅಗ್ನಿಶಾಮಕ ಸಿಬ್ಬಂದಿ ಇದ್ದ ಬೋಟ್‌ ಬಂಡೆಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದ್ದು, ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಆರ್‌ಎಸ್‌ ಜಲಾಶಯದ ಕೆಳ ಸೇತುವೆ ಬಳಿ ಮೈಸೂರು ತಾಲೂಕು ಬೆಳವಾಡಿ ನಿವಾಸಿ ಶಶಿಕಲಾ ನದಿಗೆ ಹಾರಿದ್ದರು. ಹೀಗಾಗಿ ಬಲಮುರಿ ಬಳಿ ಬೋಟ್‌ ಮೂಲಕ ಶೋಧ ಕಾರ‍್ಯ ನಡೆಯುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿದ ಬೋಟ್‌ ಹಠಾತ್‌ ಬಂಡೆಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಈ ವೇಳೆ ಐವರು ಸಿಬ್ಬಂದಿ ನದಿಗೆ ಉರುಳಿದ್ದಾರೆ. ಜೀವ ರಕ್ಷಣಾ ಜಾಕೆಟ್‌ ಧರಿಸಿದ್ದರಿಂದ ಸಮೀಪದಲ್ಲಿಯೇ ಇದ್ದ ಮರ ಹಾಗೂ ಬಂಡೆಗಳನ್ನು ಹಿಡಿದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರು ಸರಸ್ವತಿಪುರಂ ಅಗ್ನಿಶಾಮಕ ದಳದ ಐವರು ಸಿಬ್ಬಂದಿ ಕಾರಾರ‍ಯಚರಣೆ ನಡೆಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ವಿಷಯ ತಿಳಿದ ಕೆಆರ್‌ಎಸ್‌ ಪೊಲೀಸರು ಸ್ಥಳಕ್ಕೆ ಆಗಮಿಸಿ ನದಿ ಮಧ್ಯಭಾಗದಲ್ಲಿದ್ದ ಸಿಬ್ಬಂದಿಯನ್ನು ನದಿ ದಡಕ್ಕೆ ಕರೆ ತಂದರು. ಮಹಿಳೆ ಶವ ಇನ್ನು ಪತ್ತೆಯಾಗಿಲ್ಲ, ಶೋಧ ಕಾರ‍್ಯ ಮುಂದುವರಿದಿದೆ ಎಂದು ಕೆಆರ್‌ಎಸ್‌ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ