ಆ್ಯಪ್ನಗರ

ಸಾಲಬಾಧೆ: ರೈತ ದಂಪತಿ ನೇಣಿಗೆ ಶರಣು

ರೈತ ದಂಪತಿ ನೇಣಿಗೆ ಶರಣು ವಿಕ ಸುದ್ದಿಲೋಕ ಮಳವಳ್ಳಿ ಸಾಲಬಾಧೆಯಿಂದ ಬೇಸತ್ತಿದ್ದ ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲಿನಲ್ಲಿ ರೈತ ದಂಪತಿಗಳಿಬ್ಬರು ನೇಣಿಗೆ ಶರಣಾಗಿದ್ದಾರೆ...

Vijaya Karnataka 23 Apr 2018, 5:00 am

ಮಳವಳ್ಳಿ: ಸಾಲಬಾಧೆಯಿಂದ ಬೇಸತ್ತಿದ್ದ ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲಿನಲ್ಲಿ ರೈತ ದಂಪತಿಗಳಿಬ್ಬರು ನೇಣಿಗೆ ಶರಣಾಗಿದ್ದಾರೆ.

ಗ್ರಾಮದ ಕಾಳಪ್ಪ(60), ಗೌರಮ್ಮ(55) ಮೃತರು.

ತಮ್ಮ ಜಮೀನಿನಲ್ಲಿ ಹಾಕಿದ್ದ ಟೊಮೆಟೊ ಬೆಳೆ ಉತ್ತಮ ಇಳುವರಿ ಸಿಗದೇ ನಷ್ಟವಾಗಿದ್ದು, ಇವರು ಸ್ತ್ರೀ ಶಕ್ತಿ ಸಂಘದಿಂದ 50 ಸಾವಿರ ರೂ. ಹಾಗೂ 4 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದು ಶನಿವಾರ ರಾತ್ರಿ ಮನೆಯಲ್ಲಿ ಗೌರಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆಕೊಂಡರೆ, ಇದನ್ನು ಕಂಡ ಪತಿ ಕಾಳಪ್ಪ ಮನೆ ಹಿಂಭಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಇವರ ಪುತ್ರ, ಎಳನೀರು ವ್ಯಾಪಾರಿ ಮಾದೇಶ ಕಿರುಗಾವಲು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ