ಆ್ಯಪ್ನಗರ

ಋುತುಚಕ್ರ ಸಹಜ ಪ್ರಕ್ರಿಯೆ, ಭಯ ಬೇಡ

ಹೆಣ್ಣು ಮಕ್ಕಳು ಹನ್ನೊಂದರಿಂದ ಹದಿನೆಂಟರ ವಯಸ್ಸಿನವರೆಗೆ ಋುತುಮತಿಯಾಗಬಹುದು, ಕೆಲವರಲ್ಲಿ ತಡವಾಗಬಹುದು ಅದಕ್ಕೆ ಆತಂಕ ಪಡೆಉವ ಅಗತ್ಯವಿಲ್ಲ ಎಂದು ಎಂದು ಸ್ತ್ರೀ ರೋಗಗಳ ತಜ್ಞರಾದ ಡಾ.ವಸುಮತಿ ಎಸ್‌.ರಾವ್‌ ಕಿವಿಮಾತು ಹೇಳಿದರು.

Vijaya Karnataka 22 Jun 2018, 5:00 am
ಮಂಡ್ಯ: ಹೆಣ್ಣು ಮಕ್ಕಳು ಹನ್ನೊಂದರಿಂದ ಹದಿನೆಂಟರ ವಯಸ್ಸಿನವರೆಗೆ ಋುತುಮತಿಯಾಗಬಹುದು, ಕೆಲವರಲ್ಲಿ ತಡವಾಗಬಹುದು ಅದಕ್ಕೆ ಆತಂಕ ಪಡೆಉವ ಅಗತ್ಯವಿಲ್ಲ ಎಂದು ಎಂದು ಸ್ತ್ರೀ ರೋಗಗಳ ತಜ್ಞರಾದ ಡಾ.ವಸುಮತಿ ಎಸ್‌.ರಾವ್‌ ಕಿವಿಮಾತು ಹೇಳಿದರು.
Vijaya Karnataka Web the normal process of the menstrual cycle not fear
ಋುತುಚಕ್ರ ಸಹಜ ಪ್ರಕ್ರಿಯೆ, ಭಯ ಬೇಡ


ನಗರದ ಕಾರ್ಮಲ್‌ ಕಾನ್ವೆಂಟ್‌ನಲ್ಲಿ ಕಾಂಗ್ರೆಸ್‌ ಯುವ ಬ್ರಿಗೇಡ್‌ ಜಿಲ್ಲಾ ಘಟಕ ಆಯೋಜಿಸಿದ್ದ ಹೆಣ್ಣು ಮಕ್ಕಳ ಆರೋಗ್ಯ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ಋುತುಚಕ್ರದ ಬಗ್ಗೆ ತಲೆಕೆಡಿಸಿಕೊಳ್ಳಬಾರದು, ಪ್ರಕೃತಿ ನಿಯಮದಂತೆ ನಡೆಯುವ ಸಾಮಾನ್ಯ ಪ್ರಕ್ರಿಯೆ. ಸ್ವಲ್ಪ ಮಕ್ಕಳು ಬೇಗ ಅಂದರೆ ಹನ್ನೊಂದನೇ ವಯಸ್ಸಿನಲ್ಲಿ ಋುತುಮತಿ ಆಗುತ್ತಾರೆ. ಸ್ವಲ್ಪ ಮಕ್ಕಳಲ್ಲಿ ತಡವಾಗಬಹುದು ಎಂದು ತಿಳಿಸಿದರು.

ಸ್ವಲ್ಪ ಮಕ್ಕಳು ಹದಿನೆಂಟು ವರ್ಷವಾದರು ಋುತುಮತಿಯಾಗದಿರಲು ಅವರ ದೇಹದಲ್ಲಿ ಬದಲಾಗುವ ಹಾರ್ಮೊನ್‌ ಕೊರತೆ ಕಾರಣವಾಗಿರಬಹುದು. ಆದ್ದರಿಂದ ಯಾವ ಮಕ್ಕಳು ಭಯಪಡುವ ಅವಶ್ಯಕತೆ ಇಲ್ಲ. ಹಾಗೆ ಯಾರು ಕೂಡ ಅವರನ್ನ ಕೀಳಾಗಿ ನೋಡುವುದು, ಅಣಕಿಸುವುದು ಮಾಡಬಾರದು, ಇದರಿಂದ ಮಕ್ಕಳ ದೇಹದ ಮೇಲೆ ಹಾಗೂ ಮನಸ್ಸಿನ ಮೇಲೆ ತುಂಬಾ ಆಘಾತಕಾರಿ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದರು.

ದಂತ ತಜ್ಞರಾದ ಡಾ.ಪ್ರತಿಮಾ. ಕಾಂಗ್ರೆಸ್‌ ಯುವ ಬ್ರಿಗೇಡ್‌ ಜಿಲ್ಲಾ ಅಧ್ಯಕ್ಷ ರಾದ ಶಿಲ್ಪಾಮಧು, ಡಾ.ಪ್ರತಿಮಾ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ