ಆ್ಯಪ್ನಗರ

56 ಇಂಚಿನ ಎದೆಯಲ್ಲಿ ಕರುಣೆ ಇಲ್ಲ

ಮೋದಿಗಿಂತ ಪೈಲ್ವಾನ್‌ರಿಗೆ 56 ಇಂಚಿಗಿಂತಲೂ ಅಗಲವಾದ ಎದೆ ಇರುತ್ತೆ, ಅದರಲ್ಲೇನು ವಿಶೇಷವಿಲ್ಲ. ಆದರೆ, ಎದೆಯಲ್ಲಿಮಾತೃ ಹೃದಯ ಇರಬೇಕು ಎಂದು ನೆರೆ ಸಂತ್ರಸ್ತರಿಗೆ ನೆರವಾಗದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕುಟುಕಿದರು.

Vijaya Karnataka 16 Sep 2019, 5:00 am
ಮಂಡ್ಯ: ಮೋದಿಗಿಂತ ಪೈಲ್ವಾನ್‌ರಿಗೆ 56 ಇಂಚಿಗಿಂತಲೂ ಅಗಲವಾದ ಎದೆ ಇರುತ್ತೆ, ಅದರಲ್ಲೇನು ವಿಶೇಷವಿಲ್ಲ. ಆದರೆ, ಎದೆಯಲ್ಲಿಮಾತೃ ಹೃದಯ ಇರಬೇಕು ಎಂದು ನೆರೆ ಸಂತ್ರಸ್ತರಿಗೆ ನೆರವಾಗದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕುಟುಕಿದರು.
Vijaya Karnataka Web there is no mercy in the 56 inch chest sidaramaya
56 ಇಂಚಿನ ಎದೆಯಲ್ಲಿ ಕರುಣೆ ಇಲ್ಲ


ನಗರದ ಕನಕ ಭವನದಲ್ಲಿಜಿಲ್ಲಾಕುರುಬರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅತಿಥಿಗೃಹ ಶಂಕುಸ್ಥಾಪನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ನರೇಂದ್ರ ಮೋದಿಗೆ 56 ಇಂಚು ಎದೆ ಇದೆ ಎಂದು ಹೇಳುತ್ತಾರೆ. ಪೈಲಾನರಿಗೆ 56 ಇಂಚಿಗೂ ಹೆಚ್ಚು ಅಗಲವಾದ ಎದೆ ಫೈಲ್ವಾನ್‌ಗಳಿಗೆ ಇರುತ್ತದೆ. ಇದು ಮುಖ್ಯವಲ್ಲ. ಎದೆಗಾರಿಕೆ ಬಗ್ಗೆ ವ್ಯಾಖ್ಯಾನಿಸುವುದಕ್ಕಿಂತ ಆ 56 ಇಂಚಿನ ಎದೆಯಲ್ಲಿತಾಯಿ ಹೃದಯ ಇರಬೇಕು. ಸಂಕಷ್ಟದಲ್ಲಿರುವ ಸಂತೃಸ್ತರಿಗೆ ನೆರವು ನೀಡುವ ಮನೋಭಾವ, ಕರುಣೆ ಇರಬೇಕು. ಆದರೆ, ಅದು ಮೋದಿಯವರಲ್ಲಿಕಾಣುತ್ತಿಲ್ಲ. ನೆರೆ ಸಂತ್ರಸ್ತರು ಹಾಗೂ ರೈತರ ಕಷ್ಟಗಳಿಗೆ ಸ್ಪಂದಿಸದಿರುವುದೇ ಇದಕ್ಕೆ ತಾಜಾ ಉದಾಹರಣೆಯಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿಬರಗಾಲ, ಪ್ರವಾಹ ಸೇರಿದಂತೆ ಸಾಲಕ್ಕೆ ರೈತರು ತತ್ತರಿಸಿ ಹೋಗಿದ್ದಾರೆ. ಕೇಂದ್ರ ಸರಕಾರ ನೆರವು ನೀಡಿಲ್ಲ. ಕಾಂಗ್ರೆಸ್‌ ಆಡಳಿತಾವಧಿಯಲ್ಲಿಮನಮೋಹನ್‌ ಸಿಂಗ್‌ ಅವರು ಪ್ರಧಾನ ಮಂತ್ರಿಯಾಗಿದ್ದಾಗ ನೆರೆ ಹಾವಳಿಯ ಸಮೀಕ್ಷೆ ನಡೆಸಿ ತಕ್ಷಣವೇ ಪರಿಹಾರ ಘೋಷಣೆ ಮಾಡಿ ರಾಜ್ಯದ ಜನತೆಗೆ ನೆರವಾದರು. ಆ ಅವಧಿಯಲ್ಲಿಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರು. ಅವರು ಮುಖ್ಯಮಂತ್ರಿಯಾದಗಲೆಲ್ಲಾನೆರೆಹಾವಳಿ ಪರಿಸ್ಥಿತಿ ಎದುರಿಸಬೇಕಾಗಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರಕಾರ ಈಗಲಾದರೂ ಜನರ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು. ಸಾವಿರಾರು ಜನರು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅವರ ನೆರವಿಗೆ ತಕ್ಷಣ ಧಾವಿಸಬೇಕು. ಕಾಂಗ್ರೆಸ್‌ ಸರಕಾರದ ಆಡಳಿತದ ಅವಧಿಯಲ್ಲಿಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲಾಯಿತು. ಆದರೆ, ಕಾಂಗ್ರೆಸ್‌ ಸರಕಾರವನ್ನು ಬಹುಮತದಿಂದ ಗೆಲ್ಲಿಸಲು ಆಗಲಿಲ್ಲ. ಬದಲಿಗೆ ಯಾವ ಪಕ್ಷವೂ ಕೂಡ ಬಹುಮತ ತೆಗೆದುಕೊಳ್ಳುವಲ್ಲಿಯೂ ವಿಫಲವಾಯಿತು. ಕಾಂಗ್ರೆಸ್‌ ಸರಕಾರ ಜಾರಿಗೆ ತಂದ ಯೋಜನೆಗಳನ್ನು ಮರೆಯಬಾರದು. ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ರಾಜಕಾರಣದಲ್ಲಿಅಧಿಕಾರಕ್ಕಾಗಿ ಇನ್ನೊಬ್ಬರನ್ನು ಮುಗಿಸಲು ಜಾತಿ ರಾಜಕಾರಣ ಮಾಡಬಾರದು. ಜನರ ನಡುವೆಯೇ ಇದ್ದು, ಪ್ರೀತಿಯಿಂದ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ದ್ವೇಷದ ರಾಜಕಾರಣದಿಂದ ದೂರ ಇರಬೇಕು. ರಾಜಕೀಯಕ್ಕೆ ಬಂದು ಸೇವೆ ಮಾಡಿ ಎಂದು ಯಾರೂ ಬಂದು ನಮ್ಮನ್ನು ಕರೆದಿಲ್ಲ. ರಾಜಕೀಯಕ್ಕೆ ನಾವೇ ಬಂದಿದ್ದೇವೆ ಎಂಬುದನ್ನು ಮನಗಂಡು ಜನರ ಹಿತಕ್ಕಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ