ಆ್ಯಪ್ನಗರ

ಇದು ವಿಜಯೋತ್ಸವ ಆಚರಿಸುವ ಸಮಯವಲ್ಲ: ಡಾ.ರವೀಂದ್ರ

ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಬಂದಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಇದು ಇದು ವಿಜಯೋತ್ಸವ ಆಚರಿಸುವ ಸಂದರ್ಭವಲ್ಲ. ಬದಲಿಗೆ ಜಿಲ್ಲೆಯ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ಸಂಘದ ರಾಜ್ಯ ಘಟಕದ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಎನ್‌.ರವೀಂದ್ರ ಹೇಳಿದರು.

Vijaya Karnataka 30 May 2019, 5:00 am
ಮಂಡ್ಯ: ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಬಂದಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಇದು ಇದು ವಿಜಯೋತ್ಸವ ಆಚರಿಸುವ ಸಂದರ್ಭವಲ್ಲ. ಬದಲಿಗೆ ಜಿಲ್ಲೆಯ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ಸಂಘದ ರಾಜ್ಯ ಘಟಕದ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಎನ್‌.ರವೀಂದ್ರ ಹೇಳಿದರು.
Vijaya Karnataka Web this is not the time to celebrate the triumph dr ravindra
ಇದು ವಿಜಯೋತ್ಸವ ಆಚರಿಸುವ ಸಮಯವಲ್ಲ: ಡಾ.ರವೀಂದ್ರ


ನಗರದ ಸಿಲ್ವರ್‌ಜ್ಯೂಬಿಲಿ ಪಾರ್ಕಿನಲ್ಲಿ ಬುಧವಾರ ನಡೆದ ಅಂಬರೀಶ್‌ ಅವರ 67ನೇ ಜಯಂತ್ಯುತ್ಸವ ಮತ್ತು ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ''ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಕೇಂದ್ರ ಮತ್ತು ರಾಜ್ಯ ಸರಕಾರದ ಅಧೀನದಲ್ಲಿಲ್ಲ. ಅದು ಸುಪ್ರೀಂ ಕೋರ್ಟ್‌ನ ಅಧೀನದಲ್ಲಿದೆ. ಸರ್ವ ಪಕ್ಷಗಳ ಜತೆಗೂಡಿ ಕಾವೇರಿ ನೀರನ್ನು ಉಳಿಸಿಕೊಳ್ಳೋಣ. ಅಮ್ಮನ ಸಾರಥಿಯಾಗಿ ನಾವು ಇರುತ್ತೇವೆ,''ಎಂದರು.

''ಅಂಬರೀಷ್‌ ಮತ್ತು ಸುಮಲತಾ ಅವರನ್ನು ಟೀಕಿಸಿದವರಿಗೆ ಜನರೇ ಉತ್ತರ ಕೊಟ್ಟಿದ್ದಾರೆ. ಕೆಣಕಿ, ಕೆಣಕಿ ಹೊಡೆಸಿಕೊಂಡು ಬಿಟ್ರು. ಡಕೋಟಾ ಎಕ್ಸ್ಸ್‌ಪ್ರೆಸ್‌ನ್ನು ಏಕೆ ಮರೆತರೋ ಗೊತ್ತಿಲ್ಲ,'' ಎಂದು ಟೀಕಿಸಿದ ಅವರು, ''ಗಣಿಗಾರಿಕೆಯಿಂದಾಗಿ ಕೆಆರ್‌ಎಸ್‌ ಅಣೆಕಟ್ಟೆ ಬಿರುಕು ಬಿಟ್ಟಿದೆ. ಇದಕ್ಕೆ ಕಾರಣರಾದವರು ಜೈಲಿಗೆ ಹೋಗಲೇಬೇಕು. ಇಲ್ಲದಿದ್ದರೆ ಮತ್ತೆ ಮಂಡ್ಯ ಜಿಲ್ಲೆಯಲ್ಲಿ ಹುರುಳಿ ಬಿತ್ತಬೇಕಾಗುತ್ತದೆ. ಮೊದಲು ಜನರು ಅಂಧಾಭಿಮಾನವನ್ನು ಬಿಡಬೇಕು,'' ಎಂದು ಮಾರ್ಮಿಕವಾಗಿ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ