ಆ್ಯಪ್ನಗರ

ಇದು ಡೈಲಾಗ್‌ ಹೊಡೆಯುವ ಸಮಯವಲ್ಲ: ಯಶ್‌

ವಿಕ ಸುದ್ದಿಲೋಕ ಭಾರತೀನಗರ ಇದು ಡೈಲಾಗ್‌ ಹೊಡೆಯುವ ಸಮಯವಲ್ಲ ಚುನಾವಣಾ ಸಮಯ...

Vijaya Karnataka 12 Apr 2019, 5:00 am
ಭಾರತೀನಗರ: ಇದು ಡೈಲಾಗ್‌ ಹೊಡೆಯುವ ಸಮಯವಲ್ಲ. ಚುನಾವಣಾ ಸಮಯ. ನಾವು ಇಲ್ಲಿ ಡೈಲಾಗ್‌ ಹೊಡೆದರೆ ವಿರೋಧಿಗಳಿಗೆ ಅಸ್ತ್ರವಾಗುತ್ತೇವೆ ಎಂದು ನಟ ಯಶ್‌ ಹೇಳಿದರು.
Vijaya Karnataka Web this is time not for talk says actor yash
ಇದು ಡೈಲಾಗ್‌ ಹೊಡೆಯುವ ಸಮಯವಲ್ಲ: ಯಶ್‌


ಭಾರತೀ ಕಾಲೇಜು ಗೇಟ್‌ನಿಂದ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಚುನಾವಣಾ ಪ್ರಚಾರ ನಡೆಸಿ ಬುಧವಾರ ಮಾತನಾಡಿದ ಅವರು, ''ನಾವು ಮಂಡ್ಯಕ್ಕೆ ಬಂದು ಪ್ರಚಾರ ಮಾಡುತ್ತಿರುವುದನ್ನು ಸಹಿಸದ ಪ್ರತಿಪಕ್ಷ ದವರು ಡೈಲಾಗ್‌ ಹೊಡೆಯೋಕೆ ಬಂದವ್ರೆ, ಹೊಡ್ಕಂಡ್‌ ಹೋಗ್ಲಿ ಎಂದು ಅವಹೇಳನ ಮಾಡುತ್ತಿದ್ದಾರೆ. ಅವರು ಹೇಳುವಂತೆಯೇ ಇದು ಡೈಲಾಗ್‌ ಹೊಡೆಯುವ ಸಮಯವಲ್ಲ. ಚುನಾವಣಾ ಸಮಯ. ಹೀಗಾಗಿ ಸೂಕ್ತ ಸಮರ್ಥ ಅಭ್ಯರ್ಥಿಯಾದ ಸುಮಲತಾಗೆ ಮತ ಚಲಾಯಿಸಿ ವಿರೋಧಿಗಳ ಟೀಕೆಗೆ ತಕ್ಕ ಪಾಠ ಕಲಿಸಿ'' ಎಂದರು.

''ನಮ್ಮನ್ನು ಕುರಿತು ಹೇಳಿಕೆ ನೀಡುವವರ ವಿರುದ್ಧ ನಾವೂ ಮಾತನಾಡಬಹುದು. ನಮಗೂ ಎದುರು ಮಾತನಾಡಲು ಬರುತ್ತದೆ. ಆದರೆ, ಇದು ಮಾತಿಗೆ ಪ್ರತಿ ಮಾತು ಆಡುವ ಸಮಯವಲ್ಲ. ಕೌಂಟರ್‌ ಕೊಡುವ ಸಮಯವಲ್ಲ. ಕಾಲ ಬಂದಾಗ ನಾವೇ ಕೌಂಟರ್‌ ಕೊಡ್ತೀವಿ. ಅಲ್ಲಿವರೆಗೂ ನಮ್ಮ ಬಗ್ಗೆ ಏನ್‌ ಬೇಕಾದರೂ ಮಾತನಾಡಲಿ'' ಎಂದು ಮಾರ್ಮಿಕವಾಗಿ ನುಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಸ್‌.ರಾಜೀವ್‌, ಅಂಬಿ ಅಭಿಮಾನಿ ಬಳಗದ ಮುಟ್ಟನಹಳ್ಳಿ ಮಹೇಂದ್ರ, ಯುವ ಮುಖಂಡ ಆರ್‌.ಸಿದ್ದಪ್ಪ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ