ಆ್ಯಪ್ನಗರ

ಸಕ್ಕರೆ ನಾಡಲ್ಲಿ ಕನ್ನಡಾಭಿಮಾನಿ ನಿರ್ಮಿಸಿದ ಬಣ್ಣದ ಮನೆ

ಆ್ಯಂಕರ್: ಆತ ಅಪ್ಪಟ ಕನ್ನಡಾಭಿಮಾನಿ.ಆತನಕನ್ನಡಾಭಿಮಾನಿಕ್ಕೆ ಆತ‌ ಕಟ್ಟಿರುವ ಈ ಮನೆಯೆಸಾಕ್ಷಿ.ಈ‌ ಮನೆಯಲ್ಲಿ ನಿತ್ಯ ಕನ್ನಡಮ್ಮನಿಗೆ ಪೂ ಜೆ ಸಲ್ಲಿಸುತ್ತಾ ಸದ್ದಿಲ್ಲದೆ ಕನ್ನಡಮ್ಮನ ಸೇವೆ ಮಡ್ತಾ,ಮನೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ಸೇವೆಗೈದ ಮಹನೀಯರ ಭಾವಚಿತ್ರ ಹಾಕಿಸಿಕೊಂಡು ತನ್ನ ಮನೆಗೆ ಕನ್ನಡ ಬಾವುಟದ ಕೆಂಪ ಹಳದಿ ಬಣ್ಣ ಬಳಸಿ ಮನೆಯನ್ನ ಕನ್ನಡದ ಬಣ್ಣದ ಮನೆಯಾ ಗಿಸಿಕೊಂಡಿದ್ದಾನೆ.

Lipi 1 Nov 2021, 4:31 pm
ಮಂಡ್ಯ: ಆತ ಅಪ್ಪಟ ಕನ್ನಡಾಭಿಮಾನಿ. ಆತನ ಕನ್ನಡಾಭಿಮಾನಿಕ್ಕೆ ಆತ‌ ಕಟ್ಟಿರುವ ಈ ಮನೆಯೇ ಸಾಕ್ಷಿ. ಈ‌ ಮನೆಯಲ್ಲಿ ನಿತ್ಯ ಕನ್ನಡಮ್ಮನಿಗೆ ಪೂಜೆ ಸಲ್ಲಿಸುತ್ತಾ ಸದ್ದಿಲ್ಲದೇ ಕನ್ನಡಮ್ಮನ ಸೇವೆ ಮಾಡ್ತಾ ಮನೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ಸೇವೆಗೈದ ಮಹನೀಯರ ಭಾವಚಿತ್ರ ಹಾಕಿಸಿಕೊಂಡು ತನ್ನ ಮನೆಗೆ ಕನ್ನಡ ಬಾವುಟದ ಕೆಂವು ಹಳದಿ ಬಣ್ಣ ಬಳಸಿ ಮನೆಯನ್ನ ಕನ್ನಡದ ಬಣ್ಣದ ಮನೆಯಾಗಿಸಿಕೊಂಡಿದ್ದಾನೆ.
Vijaya Karnataka Web this man built house for kannada love in mandya
ಸಕ್ಕರೆ ನಾಡಲ್ಲಿ ಕನ್ನಡಾಭಿಮಾನಿ ನಿರ್ಮಿಸಿದ ಬಣ್ಣದ ಮನೆ


ಹೌದು! ಹೀಗೆ ಮನೆಯಲ್ಲಿ ಕನ್ನಡಾಂಬೆಗೆ ಪೂಜೆ ಸಲ್ಲಿಸ್ತಿರೋ ಈ ಕನ್ನಡಾಭಿಮಾನಿಯ ಹೆಸರು ಶಿವನಂಜು. ಈತ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕುಪ್ಪೆದಡ ಗ್ರಾಮದ ನಿವಾಸಿ. ಈ ಕನ್ನಡಾಭಿಮಾನಿಯನ್ನು ಸುತ್ತಮುತ್ತಲ ಜನರು ಬಣ್ಣದ ಮನೆ ಶಿವ ನಂಜು ಅಂತಲೇ ಕರೆಯುತ್ತಾರೆ.

ಕೊನೆಗೂ ತುಂಬಿದ ಕೆಆರ್‌ಎಸ್‌ ಡ್ಯಾಂ: ಸಿಲಿಕಾನ್‌ ಸಿಟಿ ಮಂದಿಗಿಲ್ಲ ನೀರಿನ ಅಭಾವದ ಭಯ

ಏಕೆಂದರೆ ಇವರ ಕನ್ನಡಪ್ರೇಮ ಅವರ ಮನೆಯನ್ನು ನೋಡಿದ್ರೆ ಗೊತ್ತಾಗುತ್ತೆ‌.ಇವರು ತಮ್ಮ ಕನ್ನಡಾಭಿಮಾನಕ್ಕೆ ಮನೆ ಕಟ್ಟಿ ಆ ಮನೆಗೆ ಕೆಂಪು ಹಳದಿ ಬಣ್ಣದಿಂದ ಸಿಂಗರಿಸಿರೋದು ಅಲ್ದೆ ಆ ಮನೆಯಲ್ಲಿ ಕನ್ನಡಾಂಬೆಗೆ ಗರ್ಭಗುಡಿ ನಿರ್ಮಿಸಿದ್ದಾರೆ. ಅಲ್ಲಿ ಪ್ರತಿನಿತ್ಯ ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುತ್ತಾ ಬರ್ತಿದ್ದಾರೆ.

ಕನ್ನಡಾಂಬೆಗಾಗಿ ನಿರ್ಮಿಸಿರುವ ಈ ಮನೆಯಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಕುವೆಂಪು, ಮಾಸ್ತಿ ಅಯ್ಯಂಗಾರ್ , ದರಾ ಬೇಂದ್ರೆ ಸೇರಿದಂತೆ ಹಲವು ಮಹಾನ್ ಸಾಧಕರ ಫೋಟೋಗಳನ್ನು ಹಾಕಲಾಗಿದ್ದು,ಈ ಮಹಾನ್ ಸಾಧಕರ ಗ್ರಂಥಗಳನ್ನು ಕೂಡ ಇವ್ರ ಮನೆಯಲ್ಲಿಇಡಲಾಗಿದೆ‌.

ಮನ್‌ಮುಲ್ ಹಗರಣದಲ್ಲಿ ಕೋಟ್ಯಂತರ ರೂ. ಲೂಟಿ: ಚೆಲುವರಾಯಸ್ವಾಮಿ ಆರೋಪ

ಪ್ರತಿದಿನ ಕೂಡ ಈ ಕನ್ನಡಾಭಿಮಾನಿ ತನ್ನ ಮನೆಯಲ್ಲಿರಿಸಿರುವ ಈ ಕನ್ನಡಾಂಬೆಗೆ ನಿತ್ಯ ಪೂಜೆ ಸಲ್ಲಿಸುತ್ತಾ ಬರ್ತಿದ್ದಾರೆ. ಅಲ್ದೇ ಪ್ರತಿವರ್ಷ ನವೆಂಬರ್ 1 ರಂದು ಮನೆಯ ಮುಂದೆ ಸ್ನೇಹಿತರೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರ್ತಿದ್ದಾರೆ. ಇವರ ಈ ಕನ್ನಡ ಪ್ರೇಮವನ್ನು ಕಂಡು ಸ್ಥಳೀಯರು ಕೂಡ ಇವರ ಈ ಕನ್ನಡ ಸೇವೆಯನ್ನು‌ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಒಟ್ಟಾರೆ ಈ ಅಪ್ಪಟ ಕನ್ನಡಾಭಿಮಾನಿಯ ಈ‌ ಕನ್ನಡ ಸೇವೆಗೆ ಹೀಗಾಗಲೇ ಹಲವು ಸಂಘ ಸಂಸ್ಥೆಗಳ ಪ್ರಶಸ್ತಿ ನೀಡಿ ಸನ್ಮಾನಿಸಿದ್ರೆ,ತಾಲೂಕುಮತ್ತು ಜಿಲ್ಲಾಡಳಿತ ಇವ್ರಿಗೆ ಕನ್ನಡ ಕನ್ನಡ ಕೈಂಕರ್ಯದ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿವೆ.ಇವ್ರ ಈ ನಿಸ್ವಾರ್ಥ ಕನ್ನಡದ ಸೇವೆ ಗೆ ನಾವು ಕೂಡ ಮೆಚ್ಚುಗೆ ಹೇಳಲೇಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ