ಆ್ಯಪ್ನಗರ

ಸುಮಲತಾ ನಿಷ್ಠೆ ಯಾವ ಪಕ್ಷಕ್ಕೆ?

​ಜಿಲ್ಲೆಯ ಕೆ.ಆರ್‌.ಪೇಟೆಗೆ ಹೋದರೆ ಬಿಜೆಪಿ, ನಾಗಮಂಗಲಕ್ಕೆ ಬಂದರೆ ಕಾಂಗ್ರೆಸ್‌ ಎಂದು ಹೇಳುವ ಸಂಸದೆ ಸುಮಲತಾ ಯಾವ ಪಕ್ಷಕ್ಕೆ ನಿಷ್ಠರಾಗಿರುತ್ತಾರೆ ಎಂಬುದನ್ನು ಸಾಬೀತುಪಡಿಸಲಿ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಒತ್ತಾಯಿಸಿದರು.

Vijaya Karnataka 12 Oct 2019, 5:00 am
ನಾಗಮಂಗಲ: ಜಿಲ್ಲೆಯ ಕೆ.ಆರ್‌.ಪೇಟೆಗೆ ಹೋದರೆ ಬಿಜೆಪಿ, ನಾಗಮಂಗಲಕ್ಕೆ ಬಂದರೆ ಕಾಂಗ್ರೆಸ್‌ ಎಂದು ಹೇಳುವ ಸಂಸದೆ ಸುಮಲತಾ ಯಾವ ಪಕ್ಷಕ್ಕೆ ನಿಷ್ಠರಾಗಿರುತ್ತಾರೆ ಎಂಬುದನ್ನು ಸಾಬೀತುಪಡಿಸಲಿ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇ ಗೌಡ ಒತ್ತಾಯಿಸಿದರು.
Vijaya Karnataka Web to which party is sumalatha loyal
ಸುಮಲತಾ ನಿಷ್ಠೆ ಯಾವ ಪಕ್ಷಕ್ಕೆ?


ಜಿಲ್ಲೆಯ ಕಬ್ಬಿನ ಸಮಸ್ಯೆಗೆ ಜೆಡಿಎಸ್‌ ಕಾರಣ ಎಂಬ ಸಂಸದೆ ಹೇಳಿಕೆಗೆ ಪ್ರತಿಕ್ರಿಸಿದ ಅವರು, ''ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅವರ ಬೆಂಬಲ ಪಡೆದು ಜಿಲ್ಲೆಯ ಸಂಸದರಾಗಿದ್ದಾರೆ. ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಯಿದ್ದರೆ ಕಬ್ಬಿನ ಸಮಸ್ಯೆ ಬಗೆಹರಿಸಲಿ. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಮಾತ ನಾಡಬಾರದು,'' ಎಂದು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

''ಸುಮಲತಾ ಅವರಿಗೂ ಮುನ್ನವೇ ನಾನು ರಾಜಕಾರಣದಲ್ಲಿದ್ದೆ. ಅವರ ಹೆಸರು ಹೇಳಿ ಪ್ರಚಾರ ಪಡೆಯುವ ಅಗತ್ಯ ನನಗಿಲ್ಲ. ಜಿಲ್ಲೆಯ ಸಂಸದರು ಜವಾಬ್ದಾರಿ ಯುತವಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದನ್ನೇ ಪ್ರಚಾರಕ್ಕಾಗಿ ನನ್ನ ಕಡೆ ಬೊಟ್ಟು ಮಾಡುತ್ತಿದ್ದಾರೆಂದು ಸುಮಲತಾ ಆರೋಪ ಮಾಡುತ್ತಿರುವುದು ಖಂಡನೀಯ,''ಎಂದರು. ಮುಖಂಡರಾದ ಟಿ.ಕೆ.ರಾಮೇಗೌಡ, ಟಿ.ಕೃಷ್ಣಪ್ಪ, ಶೇಖ್‌ ಅಹ್ಮದ್‌, ಕರಿಯಣ್ಣ ಗೋಷ್ಠಿಯಲ್ಲಿಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ