ನಾಗಮಂಗಲ: ಜಿಲ್ಲೆಯ ಕೆ.ಆರ್.ಪೇಟೆಗೆ ಹೋದರೆ ಬಿಜೆಪಿ, ನಾಗಮಂಗಲಕ್ಕೆ ಬಂದರೆ ಕಾಂಗ್ರೆಸ್ ಎಂದು ಹೇಳುವ ಸಂಸದೆ ಸುಮಲತಾ ಯಾವ ಪಕ್ಷಕ್ಕೆ ನಿಷ್ಠರಾಗಿರುತ್ತಾರೆ ಎಂಬುದನ್ನು ಸಾಬೀತುಪಡಿಸಲಿ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇ ಗೌಡ ಒತ್ತಾಯಿಸಿದರು.
ಜಿಲ್ಲೆಯ ಕಬ್ಬಿನ ಸಮಸ್ಯೆಗೆ ಜೆಡಿಎಸ್ ಕಾರಣ ಎಂಬ ಸಂಸದೆ ಹೇಳಿಕೆಗೆ ಪ್ರತಿಕ್ರಿಸಿದ ಅವರು, ''ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅವರ ಬೆಂಬಲ ಪಡೆದು ಜಿಲ್ಲೆಯ ಸಂಸದರಾಗಿದ್ದಾರೆ. ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಯಿದ್ದರೆ ಕಬ್ಬಿನ ಸಮಸ್ಯೆ ಬಗೆಹರಿಸಲಿ. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಮಾತ ನಾಡಬಾರದು,'' ಎಂದು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
''ಸುಮಲತಾ ಅವರಿಗೂ ಮುನ್ನವೇ ನಾನು ರಾಜಕಾರಣದಲ್ಲಿದ್ದೆ. ಅವರ ಹೆಸರು ಹೇಳಿ ಪ್ರಚಾರ ಪಡೆಯುವ ಅಗತ್ಯ ನನಗಿಲ್ಲ. ಜಿಲ್ಲೆಯ ಸಂಸದರು ಜವಾಬ್ದಾರಿ ಯುತವಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದನ್ನೇ ಪ್ರಚಾರಕ್ಕಾಗಿ ನನ್ನ ಕಡೆ ಬೊಟ್ಟು ಮಾಡುತ್ತಿದ್ದಾರೆಂದು ಸುಮಲತಾ ಆರೋಪ ಮಾಡುತ್ತಿರುವುದು ಖಂಡನೀಯ,''ಎಂದರು. ಮುಖಂಡರಾದ ಟಿ.ಕೆ.ರಾಮೇಗೌಡ, ಟಿ.ಕೃಷ್ಣಪ್ಪ, ಶೇಖ್ ಅಹ್ಮದ್, ಕರಿಯಣ್ಣ ಗೋಷ್ಠಿಯಲ್ಲಿಹಾಜರಿದ್ದರು.
ಜಿಲ್ಲೆಯ ಕಬ್ಬಿನ ಸಮಸ್ಯೆಗೆ ಜೆಡಿಎಸ್ ಕಾರಣ ಎಂಬ ಸಂಸದೆ ಹೇಳಿಕೆಗೆ ಪ್ರತಿಕ್ರಿಸಿದ ಅವರು, ''ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅವರ ಬೆಂಬಲ ಪಡೆದು ಜಿಲ್ಲೆಯ ಸಂಸದರಾಗಿದ್ದಾರೆ. ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಯಿದ್ದರೆ ಕಬ್ಬಿನ ಸಮಸ್ಯೆ ಬಗೆಹರಿಸಲಿ. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಮಾತ ನಾಡಬಾರದು,'' ಎಂದು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
''ಸುಮಲತಾ ಅವರಿಗೂ ಮುನ್ನವೇ ನಾನು ರಾಜಕಾರಣದಲ್ಲಿದ್ದೆ. ಅವರ ಹೆಸರು ಹೇಳಿ ಪ್ರಚಾರ ಪಡೆಯುವ ಅಗತ್ಯ ನನಗಿಲ್ಲ. ಜಿಲ್ಲೆಯ ಸಂಸದರು ಜವಾಬ್ದಾರಿ ಯುತವಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದನ್ನೇ ಪ್ರಚಾರಕ್ಕಾಗಿ ನನ್ನ ಕಡೆ ಬೊಟ್ಟು ಮಾಡುತ್ತಿದ್ದಾರೆಂದು ಸುಮಲತಾ ಆರೋಪ ಮಾಡುತ್ತಿರುವುದು ಖಂಡನೀಯ,''ಎಂದರು. ಮುಖಂಡರಾದ ಟಿ.ಕೆ.ರಾಮೇಗೌಡ, ಟಿ.ಕೃಷ್ಣಪ್ಪ, ಶೇಖ್ ಅಹ್ಮದ್, ಕರಿಯಣ್ಣ ಗೋಷ್ಠಿಯಲ್ಲಿಹಾಜರಿದ್ದರು.